ಭ್ರಷ್ಟಾಚಾರ ಪ್ರಕರಣ: ಹರಿಯಾಣ ಮಾಜಿ ಸಿಎಂ ಹೂಡಾ ಪ್ರಶ್ನಿಸಿದ ಸಿಬಿಐ
Team Udayavani, Jun 5, 2017, 4:44 PM IST
ಹೊಸದಿಲ್ಲಿ : ಪಂಚಕುಲದಲ್ಲಿ 14 ಕೈಗಾರಿಕಾ ಪ್ಲಾಟ್ಗಳನ್ನು ವಿತರಿಸುವಲ್ಲಿನ ಅಕ್ರಮಗಳ ತನಿಖೆ ಸಂಬಂಧವಾಗಿ ಸಿಬಿಐ ಇಂದು ಸೋಮವಾರ ಹರಿಯಾಣ ಮಾಜಿ ಮುಖ್ಯಮಂತ್ರಿ ಭೂಪೀಂದರ್ ಸಿಂಗ್ ಹೂಡಾ ಮತ್ತು ಯುಪಿಎಸ್ಸಿ ಸದಸ್ಯ ಛತ್ತರ್ ಸಿಂಗ್ ಅವರನ್ನು ಪ್ರಶ್ನಿಸಿತು.
ಈ ಅಕ್ರಮ ನಡೆದಿದ್ದಾಗ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿದ್ದ ಛತ್ತರ್ ಸಿಂಗ್ ಮತ್ತು ಮಾಜಿ ಮುಖ್ಯಮಂತ್ರಿ ಹೂಡಾ ಅವರನ್ನು ಸಿಬಿಐ ತನಿಖಾಧಿಕಾರಿಗಳು ಇಂದು ಹೊಸದಿಲ್ಲಿಯಲ್ಲಿನ ಪ್ರಧಾನ ಕಾರ್ಯಾಲಯಕೆ ಕರೆಸಿಕೊಂಡು ಪ್ರಶ್ನಿಸಿದರು.
ಹಗರಣಕ್ಕೆ ಸಂಬಂಧಿಸಿ ದಾಖಲಾಗಿದ್ದ ಎಫ್ಐಆರ್ ಪ್ರಕಾರ ಹೂಡಾ ಮತು ಸಿಂಗ್ ಅವರು 14 ಮಂದಿಗೆ ಕೈಗಾರಿಕಾ ಪ್ಲಾಟ್ಗಳನ್ನು ನೀಡಲು ನಿಯಮಗಳ ಉಲ್ಲಂಘನೆ ಮಾಡಿದ್ದರು.