ಮುಂಬಯಿ: ಮತ್ತೆ ಮಹಾ ಮಳೆ
Team Udayavani, Sep 21, 2017, 9:09 AM IST
ಮುಂಬಯಿ: ಮುಂಬಯಿ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಮಂಗಳವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನಜೀವನವು ಅಸ್ತವ್ಯಸ್ತಗೊಂಡಿತು.
ಬುಧವಾರವೂ ಭಾರೀ ಮಳೆಯಿಂದಾಗಿ ವಿಮಾನ, ಉಪನಗರ ಲೋಕಲ್ ರೈಲು ಸೇವೆಗಳಲ್ಲೂ ವಿಳಂಬ ಉಂಟಾಗಿದೆ. ಭಾರೀ ಮಳೆಯ ಕಾರಣ ಮುಂಬಯಿ ಮಹಾನಗರ ಪ್ರದೇಶದ ಶಾಲಾ- ಕಾಲೇಜುಗಳನ್ನು ಬುಧವಾರ ರಾಜ್ಯ ಸರಕಾರದ ಆದೇಶದಂತೆ ಬುಧವಾರ ಮುಚ್ಚಲಾಗಿತ್ತು. ದಕ್ಷಿಣ ಮುಂಬಯಿ, ಬೊರಿವಲಿ, ಕಾಂದಿವಲಿ, ಅಂಧೇರಿ ಮತ್ತು ಭಾಂಡುಪ್ ಸೇರಿದಂತೆ ಮಹಾ ನಗರದ ಹಲವು ಭಾಗಗಳಲ್ಲಿ ಭಾರೀ ಮಳೆ ದಾಖಲಾಗಿದೆ.
ಲೋಕಲ್ ರೈಲು ಸೇವೆಯಲ್ಲಿ ವಿಳಂಬ: ದೈನಂದಿನ ಸುಮಾರು 70 ಲಕ್ಷ ಪ್ರಯಾಣಿಕರಿಗೆ ಸೇವೆಯನ್ನು ನೀಡುವ, ನಗರದ ಜೀವನಾಡಿ ಎಂದೇ ಗುರುತಿಸಿಕೊಂಡಿರುವ ಉಪನಗರ ರೈಲು ವ್ಯವಸ್ಥೆ ಮಳೆಯಿಂದಾಗಿ ಅಸ್ಯವ್ಯಸ್ತವಾಯಿತು. ಲೋಕಲ್ ರೈಲುಗಳ ಸಂಚಾರದಲ್ಲಿ ತೀವ್ರ ವಿಳಂಬ ಉಂಟಾಗಿದೆ. ಪಶ್ಚಿಮ ಮತ್ತು ಹಾರ್ಬರ್ ಮಾರ್ಗಗಳಲ್ಲಿ ಲೋಕಲ್ ರೈಲುಗಳ ಸಂಚಾರವು ದೀರ್ಘಾವಧಿಯ ವರೆಗೆ ಸ್ಥಗಿತಗೊಂಡು ಬಳಿಕ ಪುನರಾರಂಭವಾಗಿದೆ. ಲೋಕಲ್ ರೈಲುಗಳ ಸೇವೆಯಲ್ಲಿ ಸುಮಾರು 30ರಿಂದ 45 ನಿಮಿಷಗಳ ವಿಳಂಬ ಉಂಟಾಗಿದೆ.
ಕೆಲವು ಎಕ್ಸ್ಪ್ರೆಸ್ ರೈಲುಗಳು ರದ್ದಾಗಿದ್ದು, ಕೆಲವು ವಿಳಂಬವಾಗಿ ಹೊರಟಿವೆ. ಇಂಟರ್ಸಿಟಿಯ 6 ರೈಲು ಸೇವೆಗಳು ಬುಧವಾರ ರದ್ದಾಗಿದ್ದು ಗುರುವಾರವೂ ರದ್ದಾಗಲಿದೆ ಎಂದು ಮಧ್ಯ ರೈಲ್ವೇ ಹೇಳಿದೆ. ಮಳೆ ಕುರಿತಂತೆ ಮುನ್ಸೂಚನೆ ನೀಡಲಾಗಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಜನರು ಬುಧವಾರ ಕಚೇರಿಗೆ ತೆರಳದೆ, ತಮ್ಮ ಮನೆಗಳಲ್ಲಿ ಉಳಿದುಕೊಂಡ ಕಾರಣ ರೈಲುಗಳಲ್ಲಿ ಅಷ್ಟೊಂದು ಜನಸಂದಣಿ ಕಂಡುಬಂದಿಲ್ಲ.
ಬೆಸ್ಟ್ ಬಸ್ಗಳು ಬಂದ್: ಕೆಲವು ಪ್ರದೇಶಗಳಲ್ಲಿ ರಸ್ತೆಗಳಲ್ಲಿ ನೀರು ತುಂಬಿದ ಕಾರಣ ಬೆಸ್ಟ್ ಬಸ್ಗಳು ಬಂದ್ ಆಗಿವೆ. ಇನ್ನೂ ಕೆಲವು ಕಡೆಗಳಲ್ಲಿ ಟ್ಯಾಕ್ಸಿ ಸೇವೆಯೂ ಸ್ಥಗಿತಗೊಂಡಿದೆ. ನಗರದ ಹೊರ ವಲಯಗಳಲ್ಲೂ ವಾಹನ ಸಂಚಾರ ಅಸ್ತವ್ಯಸ್ತಗೊಂಡಿರುವ ಬಗ್ಗೆ ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ