ಎರಡು ತಲೆಯ ಪಕ್ಷಿ


Team Udayavani, Sep 28, 2017, 10:47 AM IST

ch8.jpg

ಬಹಳ ಕಾಲದ ಹಿಂದೆ ಎರಡು ತಲೆಯುಳ್ಳ ಪಕ್ಷಿಯೊಂದು ವಾಸವಿತ್ತು. ಅದು ಯಾವಾಗಲೂ ನದಿಯ ತೀರದಲ್ಲಿದ್ದ ದೊಡ್ಡ ಆಲದ ಮರದ ಮೇಲೆ ಕುಳಿತು, ಪ್ರಕೃತಿಯ ರಮ್ಯ ವಾತಾವರಣವನ್ನು ವೀಕ್ಷಿಸುತ್ತಾ, ಮೈ ಮರೆಯುತ್ತಿತ್ತು. ಆ ಪಕ್ಷಿಗೆ ಎರಡು ತಲೆ ಇತ್ತಾದರೂ, ಹೊಟ್ಟೆ ಮಾತ್ರ ಒಂದೇ ಇತ್ತು. ಒಂದು ದಿನ ಅದಕ್ಕೆ ಆಲದ ಮರದ ವಾತಾವರಣ ಬೇಸರ ತಂದಿತು.

ಹೊರಗೆಲ್ಲಾದರೂ ಸುತ್ತಾಡಿಕೊಂಡು ಬರೋಣವೆಂದು ಹೊರಟಾಗ, ಸೇಬು ತೋಟವೊಂದು ಅದರ ಕಣ್ಣಿಗೆ ಬಿತ್ತು. ಯಾರಿಗೂ ಗೊತ್ತಾಗದ ಹಾಗೆ, ತೋಟದ ಮಧ್ಯದ ಒಂದು ಮರದ ಮೇಲೆ ಹೋಗಿ ಕುಳಿತಿತು. ತುಂಬಾ ರುಚಿರುಚಿಯಾದ ಹಣ್ಣುಗಳ ತೋಟವದು. ಪಕ್ಷಿಯ ಒಂದನೇ ತಲೆಗೆ ವಿಪರೀತ ಆಸೆಯಾಗಿ, ಹಣ್ಣನ್ನು ತಿನ್ನಲು ಮುಂದಾಯಿತು. ಇದನ್ನು ಕಂಡು ಎರಡನೇ ತಲೆಗೆ ಹೊಟ್ಟೆಕಿಚ್ಚಾಯಿತು; “ನಾನು ಅತ್ಯಂತ ಕಿರಿಯ ತಲೆ. ಮೊದಲು ನಾನು ತಿನ್ನಬೇಕು’ ಎಂದು ಅದು ಪಟ್ಟು ಹಿಡಿಯಿತು.

ಮೊದಲನೇ ತಲೆ ಅದಕ್ಕೆ ಬುದ್ಧಿವಾದ ಹೇಳಿ, “ನೋಡು… ನಮಗೆ ಎರಡು ತಲೆ ಇದ್ದರೂ ಇರೋದು ಒಂದೇ ಹೊಟ್ಟೆ. ಯಾರು ಮೊದಲು ತಿಂದರೇನು? ನಂತರ ತಿಂದರೇನು? ಬೇಕೆನಿಸಿದ್ದನ್ನು ತಿನ್ನೋಣ. ನಮ್ಮ ಆಸೆಗಳನ್ನು ನಿಗ್ರಹಿಸಿಕೊಳ್ಳುವುದು ಬೇಡ’ ಎಂದಿತು. ಎರಡನೇ ತಲೆಗೆ ಈ ಮಾತನ್ನು ಕೇಳುವಷ್ಟು ಸಂಯಮವಿರಲಿಲ್ಲ. ಸಿಡುಕು ಮೋರೆಯಿಂದ, ಪ್ರತಿಭಟಿಸತೊಡಗಿತು. ಅಷ್ಟರಲ್ಲಾಗಲೇ ಒಂದನೇ ತಲೆ ಸೇಬು ಹಣ್ಣನ್ನು ತಿಂದು, ತೇಗಿಯಾಗಿತ್ತು.

ಮರುದಿನ ಪಕ್ಷಿ ಮತ್ತೆ ಹೊರಗೆ ಹೊರಟಿತು. ಹಾರುತ್ತಾ ಹಾರುತ್ತಾ, ರೆಕ್ಕೆ ಬಳಲಿದ ಕಾರಣ, ಒಂದು ಮರದ ಮೇಲೆ ಹೋಗಿ ಕುಳಿತಿತು. ಅದು ವಿಷದ ಮರ. ಅಲ್ಲಿ ವಿಷಪೂರಿತ ಹಣ್ಣುಗಳು ತೂಗಿಬಿದ್ದಿದ್ದವು. ಹೇಗಾದರೂ ಮಾಡಿ ಸೇಡು ತೀರಿಸಿಕೊಳ್ಳಲೇಬೇಕೆಂದು ಪಣತೊಟ್ಟಿದ್ದ ಎರಡನೇ ತಲೆ, ಆ ಹಣ್ಣುಗಳನ್ನು ತಿನ್ನಲು ಮುಂದಾಯಿತು. ಒಂದನೇ ತಲೆ ಇದಕ್ಕೆ ಪ್ರತಿರೋಧಿಸುತ್ತಾ, “ನೋಡು ಇಂಥ ಹಣ್ಣುಗಳನ್ನು ತಿನ್ನಬಾರದು. ನಮಗಿರುವುದು ಒಂದೇ ಹೊಟ್ಟೆ.

ವಿಷದ ಹಣ್ಣನ್ನು ತಿಂದರೆ, ನಮ್ಮ ಜೀವವೇ ಹೊರಟು ಹೋಗುತ್ತೆ’ ಎಂದು ಎಚ್ಚರಿಸಿತು. ಸೊಕ್ಕಿನಿಂದ ವರ್ತಿಸುತ್ತಿದ್ದ ಎರಡನೇ ತಲೆ, ಈ ಬುದ್ಧಿಮಾತುಗಳನ್ನು ಕೇಳಿಸಿಕೊಳ್ಳಲೇ ಇಲ್ಲ. “ಆಸೆಯ ನಿಗ್ರಹ ತಪ್ಪು. ಬೇಕೆನಿಸಿದ್ದನ್ನು ತಿಂದುಬಿಡಬೇಕು ಎಂದು ನೀನೇ ಹೇಳಿದ್ದೆ…’ ಎಂದು ಚುಚ್ಚಿ ಮಾತಾಡುತ್ತಾ, ವಿಷದ ಹಣ್ಣನ್ನು ಕೊಕ್ಕಿನಿಂದ ಕುಟುಕಿ ತಿನ್ನತೊಡಗಿತು. ಕೆಲವೇ ನಿಮಿಷಗಳಲ್ಲಿ ಪಕ್ಷಿಯ ಪ್ರಾಣ ಹಾರಿಹೋಯಿತು.

* ಮೇರಿ

ಟಾಪ್ ನ್ಯೂಸ್

Mangaluru; ಕೊಂಕಣಿ ಸಾಹಿತಿ ರೊನಾಲ್ಡ್ ಸಿಕ್ವೇರಾ ನಿಧನ

Mangaluru; ಕೊಂಕಣಿ ಸಾಹಿತಿ ರೊನಾಲ್ಡ್ ಸಿಕ್ವೇರಾ ನಿಧನ

Housefull 5: ಕಾಮಿಡಿ ಜರ್ನಿಯ ‌ʼಹೌಸ್‌ ಫುಲ್‌ʼ ಕುಟುಂಬಕ್ಕೆ ಅಭಿಷೇಕ್‌ ಬಚ್ಚನ್ ಎಂಟ್ರಿ

Housefull 5: ಕಾಮಿಡಿ ಜರ್ನಿಯ ‌ʼಹೌಸ್‌ ಫುಲ್‌ʼ ಕುಟುಂಬಕ್ಕೆ ಅಭಿಷೇಕ್‌ ಬಚ್ಚನ್ ಎಂಟ್ರಿ

Team India’s T20 World Cup 2024 Jersey Leaked

T20 World Cup; ಹೊರಬಿತ್ತು ಭಾರತ ತಂಡದ ಜೆರ್ಸಿ ಫೋಟೊ: ಹೇಗಿದೆ ನೋಡಿ

Water Corridor: ಭಾರತಕ್ಕೆ ಅಗತ್ಯವಿದೆ ವಿಶೇಷ ವಾಟರ್‌ ಕಾರಿಡಾರ್‌!

Water Corridor: ಭಾರತಕ್ಕೆ ಅಗತ್ಯವಿದೆ ವಿಶೇಷ ವಾಟರ್‌ ಕಾರಿಡಾರ್‌!

Kangana Ranaut: ಚಿತ್ರರಂಗದಲ್ಲಿ ಅಮಿತಾಭ್ ಗೆ ಸಮಾನವಾದ ಗೌರವ ನನಗೆ ಸಿಗುತ್ತಿದೆ; ಕಂಗನಾ

Kangana Ranaut: ಚಿತ್ರರಂಗದಲ್ಲಿ ಅಮಿತಾಭ್ ಗೆ ಸಮಾನವಾದ ಗೌರವ ನನಗೆ ಸಿಗುತ್ತಿದೆ; ಕಂಗನಾ

Farooq Abdullah

ಪಾಕಿಸ್ತಾನದವರೇನು ಬಳೆ ಧರಿಸಿ ಕುಳಿತಿಲ್ಲ..; ವಿವಾದಾತ್ಮಕ ಹೇಳಿಕೆ ನೀಡಿದ ಫಾರೂಕ್ ಅಬ್ದುಲ್ಲಾ

Threat: ಅಹ್ಮದಾಬಾದ್ ನ ಹಲವು ಶಾಲೆಗಳಿಗೆ ಇಮೇಲ್‌ ಮೂಲಕ ಬಾಂಬ್ ಬೆದರಿಕೆ…

Threat: ಅಹ್ಮದಾಬಾದ್ ನ ಹಲವು ಶಾಲೆಗಳಿಗೆ ಇಮೇಲ್‌ ಮೂಲಕ ಬಾಂಬ್ ಬೆದರಿಕೆ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

Mangaluru; ಕೊಂಕಣಿ ಸಾಹಿತಿ ರೊನಾಲ್ಡ್ ಸಿಕ್ವೇರಾ ನಿಧನ

Mangaluru; ಕೊಂಕಣಿ ಸಾಹಿತಿ ರೊನಾಲ್ಡ್ ಸಿಕ್ವೇರಾ ನಿಧನ

ಮುಗಿದ ಅಬ್ಬರ; ಎರಡು ದಿನ ಮನೆ-ಮನೆ ಸಂದಾಯ! 1992ರ ಚುನಾವಣೆ ನೆನಪಿಸಿದ ರಣತಂತ್ರ

ಮುಗಿದ ಅಬ್ಬರ; ಎರಡು ದಿನ ಮನೆ-ಮನೆ ಸಂದಾಯ! 1992ರ ಚುನಾವಣೆ ನೆನಪಿಸಿದ ರಣತಂತ್ರ

Lok Sabha Election: ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು, ಸಿಬ್ಬಂದಿಗಳು

Lok Sabha Election: ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು, ಸಿಬ್ಬಂದಿಗಳು

Housefull 5: ಕಾಮಿಡಿ ಜರ್ನಿಯ ‌ʼಹೌಸ್‌ ಫುಲ್‌ʼ ಕುಟುಂಬಕ್ಕೆ ಅಭಿಷೇಕ್‌ ಬಚ್ಚನ್ ಎಂಟ್ರಿ

Housefull 5: ಕಾಮಿಡಿ ಜರ್ನಿಯ ‌ʼಹೌಸ್‌ ಫುಲ್‌ʼ ಕುಟುಂಬಕ್ಕೆ ಅಭಿಷೇಕ್‌ ಬಚ್ಚನ್ ಎಂಟ್ರಿ

Team India’s T20 World Cup 2024 Jersey Leaked

T20 World Cup; ಹೊರಬಿತ್ತು ಭಾರತ ತಂಡದ ಜೆರ್ಸಿ ಫೋಟೊ: ಹೇಗಿದೆ ನೋಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.