ಬೆಂಗಳೂರಿನಲ್ಲಿ ಆಸೀಸ್‌ ಜಯಭೇರಿ


Team Udayavani, Sep 29, 2017, 6:05 AM IST

PTI9_28_2017_000171A.jpg

ಬೆಂಗಳೂರು: ಪ್ರವಾಸಿ ಆಸ್ಟ್ರೇಲಿಯ ತಂಡವು ಭಾರತ ತಂಡದೆದುರು ಗುರುವಾರ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ತಿರುಗೇಟು ನೀಡಲು ಯಶಸ್ವಿಯಾಗಿದೆ. ಬೃಹತ್‌ ಮೊತ್ತದ ಈ ಸೆಣಸಾಟದಲ್ಲಿ ಆಸ್ಟ್ರೇಲಿಯ 21 ರನ್ನುಗಳಿಂದ ಜಯಭೇರಿ ಬಾರಿಸಿದೆ. 

ಈ ಸೋಲಿನ ಮೂಲಕ ಭಾರತದ ಸತತ 10 ಗೆಲುವಿನ ನಿರೀಕ್ಷೆಗೆ ಪ್ರಬಲ ಹೊಡೆತ ಬಿದ್ದಿದೆ. ಭಾರತ ಸತತ 9 ಬಾರಿ ಗೆಲುವನ್ನು ಎರಡು ಬಾರಿ ದಾಖಲಿಸಿತ್ತು. 

ಆರಂಭಿಕರಾದ ಫಿಂಚ್‌ ಮತ್ತು ವಾರ್ನರ್‌ ಅವರ ಭರ್ಜರಿ ಆಟ ದಿಂದಾಗಿ ಆಸ್ಟ್ರೇಲಿಯ ತಂಡವು 5 ವಿಕೆಟಿಗೆ 334 ರನ್ನುಗಳ ಬೃಹತ್‌ ಮೊತ್ತ ಪೇರಿಸಿದರೆ ಭಾರತ ಕೊನೆಕ್ಷಣದವರೆಗೂ ಪ್ರತಿ ಹೋರಾಟ ನಡೆಸಲು ಪ್ರಯತ್ನಿಸಿದರೂ ಆಗಾಗ್ಗೆ ವಿಕೆಟ್‌ ಉರುಳಿ ಒತ್ತಡಕ್ಕೆ ಸಿಲುಕಿದ್ದರಿಂದ ಅಂತಿಮವಾಗಿ 8 ವಿಕೆಟಿಗೆ 313 ರನ್‌ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.
 
ಆರಂಭಿಕರಾದ ರಹಾನೆ ಮತ್ತು ರೋಹಿತ್‌ ಶರ್ಮ ಮೊದಲ ವಿಕೆಟಿಗೆ ಶತಕದ ಜತೆಯಾಟ ನಡೆಸಿದ್ದರೂ ಈ ಹಿಂದಿನ ಪಂದ್ಯದಂತೆ ಬಿರುಸಿನ ಆಟವಾಡಿಲ್ಲ. 18.2 ಓವರ್‌ಗಳಲ್ಲಿ ಅವರಿಬ್ಬರು 106 ರನ್‌ ಪೇರಿಸಿ ಬೇರ್ಪಟ್ಟರು. 53 ರನ್‌ ಗಳಿಸಿದ ರಹಾನೆ ಮೊದಲಿಗರಾಗಿ ಔಟಾದರೆ ರೋಹಿತ್‌ ಅವರು ನಾಯಕ ಸ್ಮಿತ್‌ ಮತ್ತು ಹೆಡ್‌ ಅವರ ಅದ್ಭುತ ಫೀಲ್ಡಿಂಗ್‌ನಿಂದಾಗಿ ರನೌಟ್‌ ಆದರು. ಕೊಹ್ಲಿ ಇಲ್ಲಿ ಮತ್ತೆ ಮಿಂಚಲು ವಿಫ‌ಲರಾದರೆ ಹಾರ್ದಿಕ್‌ ಪಾಂಡ್ಯ 40 ಎಸೆತಗಳಲ್ಲಿ 41 ರನ್‌ ಗಳಿಸಿದರು. ಕೇದಾರ್‌ ಜಾಧವ್‌  ಮತ್ತು ಮನೀಷ್‌ ಪಾಂಡೆ ಉತ್ತಮವಾಗಿ ಆಡಿದರೂ ನಿರೀಕ್ಷಿತ ರನ್‌ವೇಗದಲ್ಲಿ ಆಡಲು ಅಸಮರ್ಥರಾದರು. ಕೊನೆಯ ಹಂತದಲ್ಲಿ ಒತ್ತಡಕ್ಕೆ ಒಳಗಾದ ಭಾರತ ಗೆಲುವಿನಿಂದ ದೂರವೇ ಉಳಿಯಿತು.

ಈ ಗೆಲುವಿನಿಂದ ಆಸ್ಟ್ರೇಲಿಯ ಸೋಲಿನ ಅಂತರವನ್ನು 3-1ಕ್ಕೆ ಇಳಿಸಿತು. ಏಕದಿನ ಸರಣಿ ಯನ್ನು ಈಗಾಗಲೇ ಭಾರತ ಗೆದ್ದುಕೊಂಡಿದೆ.

ಆರಂಭಿಕ ವಿಕೆಟಿಗೆ ದ್ವಿಶತಕ
100ನೇ ಪಂದ್ಯ ಆಡಲಿಳಿದ ಡೇವಿಡ್‌ ವಾರ್ನರ್‌ ಮತ್ತು ಕಳೆದ ಪಂದ್ಯದಲ್ಲಿ ಶತಕ ಬಾರಿಸಿ ಮೆರೆದಿದ್ದ ಆರನ್‌ ಫಿಂಚ್‌ ಭಾರತದ ಬೌಲರ್‌ಗಳ ಪಾಲಿಗೆ ಸಿಂಹಸ್ವಪ್ನರಾಗಿ ಗೋಚರಿಸಿ ದರು. ಭರ್ತಿ 35 ಓವರ್‌ಗಳ ಜತೆಯಾಟ ನಿಭಾಯಿಸಿದ ಇವರು ಮೊದಲ ವಿಕೆಟಿಗೆ 231 ರನ್‌ ಪೇರಿಸಿದರು. ಬಳಿಕ ಇದೇ ಮೊತ್ತದಲ್ಲಿ ಪೆವಿಲಿಯನ್‌ ಸೇರಿಕೊಂಡರು.

ಈ ವೈಭವದ ಜತೆಯಾಟದ ವೇಳೆ ವಾರ್ನರ್‌ 124 ರನ್‌ ಬಾರಿಸಿದರೆ, ಫಿಂಚ್‌ ಕೇವಲ 6 ರನ್ನುಗಳಿಂದ ಸತತ 2ನೇ ಶತಕವನ್ನು ತಪ್ಪಿಸಿಕೊಂಡರು. ಎಂದಿನ ಸ್ಫೋಟಕ ಆಟಕ್ಕೆ ಮುಂದಾದ ವಾರ್ನರ್‌ 103 ಎಸೆತಗಳಿಂದ ತಮ್ಮ 14ನೇ ಶತಕ ಪೂರ್ತಿಗೊಳಿಸಿದರು. 124 ರನ್ನಿಗೆ ಒಟ್ಟು 119 ಎಸೆತ ಎದುರಿಸಿದರು. ಸಿಡಿಸಿದ್ದು 12 ಬೌಂಡರಿ ಮತ್ತು 4 ಸಿಕ್ಸರ್‌. ವಾರ್ನರ್‌ 100ನೇ ಏಕದಿನದಲ್ಲಿ ಶತಕ ಬಾರಿಸಿದ ವಿಶ್ವದ 8ನೇ ಆಟಗಾರನಾದರೆ, ಆಸ್ಟ್ರೇಲಿಯದ ಮೊದಲ ಕ್ರಿಕೆಟಿಗನೆಂಬುದು ವಿಶೇಷ. ಜಾಧವ್‌ ಎಸೆತದಲ್ಲಿ “ಲಾಫೆrಡ್‌ ಶಾಟ್‌’ ಹೊಡೆಯಲು ಹೋದ ವಾರ್ನರ್‌, ಪಟೇಲ್‌ ಕೈಗೆ ಕ್ಯಾಚಿತ್ತರು.

ಇಂದೋರ್‌ನಲ್ಲಿ 124 ರನ್‌ ಬಾರಿಸಿದ ಫಿಂಚ್‌, ಇಲ್ಲಿ ಶತಕದತ್ತ ದಾಪುಗಾಲಿಕ್ಕುತ್ತಿದ್ದಾಗ ಉಮೇಶ್‌ ಯಾದವ್‌ ಮೋಡಿಗೆ ಸಿಲುಕಿದರು. 96 ಎಸೆತಗಳಿಂದ 94 ರನ್‌ ಮಾಡಿ ನಿರಾಶರಾಗಿ ನಿರ್ಗಮಿಸಿದರು. ಅವರ ಈ ಬ್ಯಾಟಿಂಗ್‌ ಅಬ್ಬರದ ವೇಳೆ 10 ಬೌಂಡರಿ, 3 ಸಿಕ್ಸರ್‌ ಸಿಡಿಯಲ್ಪಟ್ಟಿತು.”ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ನಡೆದ ಏಕದಿನ ಪಂದ್ಯವೊಂದರಲ್ಲಿ ದ್ವಿಶತಕದ ಜತೆಯಾಟ ದಾಖಲಾದದ್ದು ಇದೇ ಮೊದಲು. ಇದಕ್ಕೂ ಮುನ್ನ 2011ರ ವಿಶ್ವಕಪ್‌ನಲ್ಲಿ ಕೆನಡಾ ವಿರುದ್ಧ ಆಸ್ಟ್ರೇಲಿಯದ ಶೇನ್‌ ವಾಟ್ಸನ್‌-ಬ್ರಾಡ್‌ ಹ್ಯಾಡಿನ್‌ ಮೊದಲ ವಿಕೆಟಿಗೆ 183 ರನ್‌ ಪೇರಿಸಿದ್ದು ದಾಖಲೆಯಾಗಿತ್ತು.

ಕಾಂಗರೂ ಓಟಕ್ಕೆ ಬ್ರೇಕ್‌
ವಾರ್ನರ್‌-ಫಿಂಚ್‌ ಒಟ್ಟೊಟ್ಟಿಗೆ ಔಟಾದ ಕೂಡಲೇ ಆಸ್ಟ್ರೇಲಿಯದ ಓಟಕ್ಕೆ ಬ್ರೇಕ್‌ ಬಿತ್ತು. 370-375ರ ತನಕ ಸಾಗಬಹುದೆಂದು ಭಾವಿಸಿದ್ದ ಕಾಂಗರೂ ಸ್ಕೋರ್‌ 334ಕ್ಕೆ ನಿಂತಿತು. ಈ ಸರಣಿಯಲ್ಲಿ ಸತತ 2 ಅರ್ಧ ಶತಕ ಹೊಡೆದಿದ್ದ ನಾಯಕ ಸ್ಟೀವ್‌ ಸ್ಮಿತ್‌ ಕೇವಲ 3 ರನ್‌ ಮಾಡಿ 3ನೇ ವಿಕೆಟ್‌ ರೂಪದಲ್ಲಿ ಪೆವಿಲಿಯನ್‌ ಸೇರಿಕೊಂಡರು. ಈ ವಿಕೆಟ್‌ ಉಮೇಶ್‌ ಯಾದವ್‌ ಪಾಲಾಯಿತು. ಇದು ಯಾದವ್‌ ಅವರ 100ನೇ ವಿಕೆಟ್‌ ಆಗಿತ್ತು.
 
4ನೇ ವಿಕೆಟಿಗೆ ಜತೆಗೂಡಿದ ಟ್ರ್ಯಾವಿಸ್‌ ಹೆಡ್‌ ಮತ್ತು ಪೀಟರ್‌ ಹ್ಯಾಂಡ್ಸ್‌ಕಾಂಬ್‌ 63 ರನ್‌ ಪೇರಿಸಿದರು. ಹೆಡ್‌ 38 ಎಸೆತಗಳಿಂದ 29 ರನ್‌ ಹೊಡೆದರೆ (1 ಬೌಂಡರಿ, 1 ಸಿಕ್ಸರ್‌), ಹ್ಯಾಂಡ್ಸ್‌ಕಾಂಬ್‌ 30 ಎಸೆತ ಎದುರಿಸಿ 43 ರನ್‌ ಮಾಡಿದರು (3 ಬೌಂಡರಿ, 1 ಸಿಕ್ಸರ್‌). ಸ್ಟೊಯಿನಿಸ್‌ಗೆ ಹೆಚ್ಚಿನ ಬ್ಯಾಟಿಂಗ್‌ ಅವಕಾಶ ಸಿಗಲಿಲ್ಲ. 

ಭಾರತದ ಪರ ವಿಕೆಟ್‌ ಕಿತ್ತವರು ಇಬ್ಬರು ಮಾತ್ರ. ಉಮೇಶ್‌ ಯಾದವ್‌ 4 ವಿಕೆಟ್‌ ಕಿತ್ತರೆ, ಉಳಿದೊಂದು ವಿಕೆಟ್‌ ಕೇದಾರ್‌ ಜಾಧವ್‌ ಪಾಲಾಯಿತು.

ಸ್ಕೋರ್‌ಪಟ್ಟಿ
ಆಸ್ಟ್ರೇಲಿಯ

ಆರನ್‌ ಫಿಂಚ್‌    ಸಿ ಪಾಂಡ್ಯ ಬಿ ಯಾದವ್‌    94
ಡೇವಿಡ್‌ ವಾರ್ನರ್‌    ಸಿ ಪಟೇಲ್‌ ಬಿ ಜಾಧವ್‌    124
ಟ್ರ್ಯಾವಿಸ್‌ ಹೆಡ್‌    ಸಿ ರಹಾನೆ ಬಿ ಯಾದವ್‌    29
ಸ್ಟೀವ್‌ ಸ್ಮಿತ್‌    ಸಿ ಕೊಹ್ಲಿ ಬಿ ಯಾದವ್‌    3
ಪೀಟರ್‌ ಹ್ಯಾಂಡ್ಸ್‌ಕಾಂಬ್‌    ಬಿ ಯಾದವ್‌    43
ಮಾರ್ಕಸ್‌ ಸ್ಟೊಯಿನಿಸ್‌    ಔಟಾಗದೆ    15
ಮ್ಯಾಥ್ಯೂ ವೇಡ್‌    ಔಟಾಗದೆ    3
ಇತರ        23
ಒಟ್ಟು  (50 ಓವರ್‌ಗಳಲ್ಲಿ 5 ವಿಕೆಟಿಗೆ)    334
ವಿಕೆಟ್‌ ಪತನ: 1-231, 2-231, 3-236, 4-299, 5-319.
ಬೌಲಿಂಗ್‌:
ಮೊಹಮ್ಮದ್‌ ಶಮಿ        10-1-62-0
ಉಮೇಶ್‌ ಯಾದವ್‌        10-0-71-4
ಅಕ್ಷರ್‌ ಪಟೇಲ್‌        10-0-66-0
ಹಾರ್ದಿಕ್‌ ಪಾಂಡ್ಯ        5-0-32-0
ಯಜುವೇಂದ್ರ ಚಾಹಲ್‌        8-0-54-0
ಕೇದಾರ್‌ ಜಾಧವ್‌        7-0-38-1

ಭಾರತ
ಅಜಿಂಕ್ಯ ರಹಾನೆ     ಸಿ ಫಿಂಚ್‌ ಬಿ ರಿಚಡ್ಸìನ್‌    53
ರೋಹಿತ್‌ ಶರ್ಮ    ರನೌಟ್‌    65
ವಿರಾಟ್‌ ಕೊಹ್ಲಿ    ಬಿ ನೈಲ್‌    21
ಹಾರ್ದಿಕ್‌ ಪಾಂಡ್ಯ    ಸಿ ವಾರ್ನರ್‌ ಬಿ ಝಂಪ    41
ಕೇದಾರ್‌ ಜಾಧವ್‌    ಸಿ ಫಿಂಚ್‌ ಬಿ ರಿಚಡ್ಸìನ್‌    67
ಮನೀಷ್‌ ಪಾಂಡೆ    ಬಿ ಕಮಿನ್ಸ್‌    33
ಎಂಎಸ್‌ ಧೋನಿ    ಬಿ ರಿಚಡ್ಸìನ್‌    13
ಅಕ್ಷರ್‌ ಪಟೇಲ್‌    ಸಿ ಬದಲಿಗ ಬಿ ನೈಲ್‌    5
ಮೊಹಮ್ಮದ್‌ ಶಮಿ    ಔಟಾಗದೆ    6
ಉಮೇಶ್‌ ಯಾದವ್‌    ಔಟಾಗದೆ    2
ಇತರ:        7
ಒಟ್ಟು  (50 ಓವರ್‌ಗಳಲ್ಲಿ 8 ವಿಕೆಟಿಗೆ)    313
ವಿಕೆಟ್‌ ಪತನ: 1-106, 2-135, 3-147, 4-225, 5-286, 6-289, 7-301, 8-306
ಬೌಲಿಂಗ್‌: ಪ್ಯಾಟ್‌ ಕಮಿನ್ಸ್‌    10-0-59-1
ನಥನ್‌ ಕೋಲ್ಟರ್‌ ನೈಲ್‌    10-0-56-2
ಕೇನ್‌ ರಿಚಡ್ಸìನ್‌        10-0-58-3
ಮಾರ್ಕಸ್‌ ಸ್ಟೋಯಿನಿಸ್‌    4.5-0-34-0
ಆರನ್‌ ಫಿಂಚ್‌        0.1-0-1-0
ಆ್ಯಡಂ ಝಂಪ        9-0-63-1
ಟ್ರ್ಯಾವಿಸ್‌ ಹೆಡ್‌        6-0-38-0

100ನೇ ಏಕದಿನದಲ್ಲಿ ಶತಕ
ಆಸ್ಟ್ರೇಲಿಯದ ಆರಂಭಕಾರ ಡೇವಿಡ್‌ ವಾರ್ನರ್‌ ತಮ್ಮ 100ನೇ ಏಕದಿನ ಪಂದ್ಯವನ್ನು ಸ್ಮರಣೀಯಗೊಳಿಸಿದರು. ಅವರು ಇದನ್ನು ಆಕರ್ಷಕ ಶತಕ ಬಾರಿಸಿ ಸಂಭ್ರಮಿಸಿದರು. 3,917 ಪಂದ್ಯಗಳ ಏಕದಿನ ಇತಿಹಾಸದಲ್ಲಿ, ವೈಯಕ್ತಿಕ 100ನೇ ಪಂದ್ಯದಲ್ಲಿ ಸೆಂಚುರಿ ಹೊಡೆದ ವಿಶ್ವದ ಕೇವಲ 8ನೇ ಆಟಗಾರನೆಂಬುದು ವಾರ್ನರ್‌ ಹೆಗ್ಗಳಿಕೆ. ಅವರು ಈ ಸಾಧನೆಗೈದ ಆಸ್ಟ್ರೇಲಿಯದ ಮೊದಲ ಕ್ರಿಕೆಟಿಗ. ವಾರ್ನರ್‌ ಆಸ್ಟ್ರೇಲಿಯ ಪರ 100 ಏಕದಿನ ಪಂದ್ಯಗಳನ್ನಾಡಿದ 28ನೇ ಆಟಗಾರ. 100ನೇ ಪಂದ್ಯದಲ್ಲಿ ಶತಕ ಬಾರಿಸಿದ ಆಟಗಾರರ ಯಾದಿ ಇಲ್ಲಿದೆ.
 

ಟಾಪ್ ನ್ಯೂಸ್

Sangeeth Sivan: ಮಾಲಿವುಡ್‌, ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

Sangeeth Sivan: ಮಾಲಿವುಡ್‌, ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

Thirthahalli ಕುಪ್ಪಳ್ಳಿ; ಮನೆಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ!

Thirthahalli ಕುಪ್ಪಳ್ಳಿ; ಮನೆಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ!

ಎಲ್ಲಾ ಶೆಡ್ಯೂಲ್ ಮುಗಿದ ಬಳಿಕವಷ್ಟೇ ʼ‌KGF -3ʼ.. ಬಿಗ್‌ ಅಪ್ಡೇಟ್ ಕೊಟ್ಟ ನಿರ್ದೇಶಕ ನೀಲ್

ಎಲ್ಲಾ ಶೆಡ್ಯೂಲ್ ಮುಗಿದ ಬಳಿಕವಷ್ಟೇ ʼ‌KGF -3ʼ.. ಬಿಗ್‌ ಅಪ್ಡೇಟ್ ಕೊಟ್ಟ ನಿರ್ದೇಶಕ ನೀಲ್

Goa ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿದೆ: ಸಿಎಂ ಪ್ರಮೋದ್ ಸಾವಂತ್

Goa ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿದೆ: ಸಿಎಂ ಪ್ರಮೋದ್ ಸಾವಂತ್

Bandipura ಅರಣ್ಯಕ್ಕೆ ಬೆಂಕಿ ಹಚ್ಚಿದ್ದ ಪ್ರಕರಣ: ಅರಣ್ಯಾಧಿಕಾರಿಗಳಿಂದ ಓರ್ವ ಆರೋಪಿಯ ಬಂಧನ

Bandipura ಅರಣ್ಯಕ್ಕೆ ಬೆಂಕಿ ಹಚ್ಚಿದ್ದ ಪ್ರಕರಣ: ಅರಣ್ಯಾಧಿಕಾರಿಗಳಿಂದ ಓರ್ವ ಆರೋಪಿಯ ಬಂಧನ

9-

KMC: ಅಂತರಾಷ್ಟ್ರೀಯ ಥಲಸ್ಸೇಮಿಯಾ ದಿನ ಆಚರಣೆ; ಥಲಸ್ಸೆಮಿಯಾ ಕ್ಲಿನಿಕ್ ಪ್ರಾರಂಭ

Kollywood: ಒಂದೇ ದಿನ ಧನುಷ್‌ ʼರಾಯನ್‌ʼ, ವಿಕ್ರಮ್‌ ʼತಂಗಲಾನ್‌ʼ ರಿಲೀಸ್?‌

Kollywood: ಒಂದೇ ದಿನ ಧನುಷ್‌ ʼರಾಯನ್‌ʼ, ವಿಕ್ರಮ್‌ ʼತಂಗಲಾನ್‌ʼ ರಿಲೀಸ್?‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1——wqwqe

IPL ರಾಜಸ್ಥಾನ ವಿರುದ್ಧ ಗೆದ್ದ ಡೆಲ್ಲಿ ಪ್ಲೇಆಫ್ ಭರವಸೆ ಜೀವಂತ: ಆರ್ ಸಿಬಿಗೆ ಸವಾಲು

IPL 2024; ಲಕ್ನೋ, ಹೈದ್ರಾಬಾದ್‌ ಸೆಣಸು; ಗೆಲ್ಲುವ ತಂಡಕ್ಕೆ ಪ್ಲೇಆಫ್ ಸ್ಥಾನ ಬಹುತೇಕ ಖಚಿತ

IPL 2024; ಲಕ್ನೋ, ಹೈದ್ರಾಬಾದ್‌ ಸೆಣಸು; ಗೆಲ್ಲುವ ತಂಡಕ್ಕೆ ಪ್ಲೇಆಫ್ ಸ್ಥಾನ ಬಹುತೇಕ ಖಚಿತ

T20 World Cup: India jersey sold for Rs 6000!

T20 World Cup: ಭಾರತದ ಜೆರ್ಸಿ 6000 ರೂ.ಗೆ ಮಾರಾಟ!

No plan fro rest to Bumrah

Mumbai Indians; ಬುಮ್ರಾಗೆ ವಿಶ್ರಾಂತಿ: ಯಾವುದೇ ಯೋಜನೆಯಿಲ್ಲ

Agartala; ಫೆಬ್ರವರಿಯಲ್ಲಿ ತ್ರಿಪುರ ಮೈದಾನ ಲೋಕಾರ್ಪಣೆ

Agartala; ಫೆಬ್ರವರಿಯಲ್ಲಿ ತ್ರಿಪುರ ಮೈದಾನ ಲೋಕಾರ್ಪಣೆ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Sangeeth Sivan: ಮಾಲಿವುಡ್‌, ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

Sangeeth Sivan: ಮಾಲಿವುಡ್‌, ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

Thirthahalli ಕುಪ್ಪಳ್ಳಿ; ಮನೆಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ!

Thirthahalli ಕುಪ್ಪಳ್ಳಿ; ಮನೆಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ!

ಎಲ್ಲಾ ಶೆಡ್ಯೂಲ್ ಮುಗಿದ ಬಳಿಕವಷ್ಟೇ ʼ‌KGF -3ʼ.. ಬಿಗ್‌ ಅಪ್ಡೇಟ್ ಕೊಟ್ಟ ನಿರ್ದೇಶಕ ನೀಲ್

ಎಲ್ಲಾ ಶೆಡ್ಯೂಲ್ ಮುಗಿದ ಬಳಿಕವಷ್ಟೇ ʼ‌KGF -3ʼ.. ಬಿಗ್‌ ಅಪ್ಡೇಟ್ ಕೊಟ್ಟ ನಿರ್ದೇಶಕ ನೀಲ್

Goa ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿದೆ: ಸಿಎಂ ಪ್ರಮೋದ್ ಸಾವಂತ್

Goa ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿದೆ: ಸಿಎಂ ಪ್ರಮೋದ್ ಸಾವಂತ್

10-thekkatte

ತೆಕ್ಕಟ್ಟೆ: ಅಪಾಯದಲ್ಲಿದ್ದ ನವಿಲಿನ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.