ಕೇರಳದಲ್ಲಿ ಮತ್ತೂಂದು ಲವ್ ಜಿಹಾದ್ ಪ್ರಕರಣ
Team Udayavani, Nov 11, 2017, 6:55 AM IST
ತಿರುವನಂತಪುರಂ: ಕೇರಳದ ಲವ್ ಜಿಹಾದ್ ಕೂಗಿಗೆ ಬಲ ಬಂದಿದೆ. ತಾನು ಒತ್ತಾಯಪೂರ್ವಕ ಮತಾಂತರ ಮತ್ತು ಸಂಚಿನ ಮದುವೆಗೆ ಬಲಿಯಾದ ಸಂತ್ರಸ್ತೆ ಎಂದು ಹೇಳಿ ಕೇರಳ ಮೂಲದ 25 ವರ್ಷದ ಮಹಿಳೆಯೊಬ್ಬರು ಇಲ್ಲಿನ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಕೇರಳ ಮೂಲದ ಗುಜರಾತ್ ನಿವಾಸಿಯಾಗಿರುವ ಅವರು, ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ, ನ್ಯೂ ಮಾಹೆ ಮೂಲದ ಮಹಮ್ಮದ್ ರಿಯಾಜ್ ಎಂಬುವವರ ಜೊತೆ ಪ್ರೇಮ ಸಂಬಂಧ ಇರಿಸಿಕೊಂಡಿದ್ದರು. ಆತ ತನ್ನ ವೈಯಕ್ತಿಕ ವಿಡಿಯೋಗಳನ್ನು ಚಿತ್ರೀಕರಿಸಿ, ಇಸ್ಲಾಂಗೆ ಮತಾಂತರವಾಗುವಂತೆ ಮತ್ತು ತನ್ನನ್ನು ಮದುವೆ ಆಗುವಂತೆ ಒತ್ತಡ ಹೇರತೊಡಗಿದ. ಕೊನೆಗೂ ಪೀಡಿಸಿ ಮದುವೆಯಾಗಿದ್ದ. ನಂತರ ಸೌದಿ ಅರೇಬಿಯಾಗೆ ಒತ್ತಾಯವಾಗಿ ಕರೆದೊಯ್ದಿದ್ದ. ಅಲ್ಲಿಂದ ನನ್ನನ್ನು ಐಸಿಸ್ ಪೀಡಿತ ಸಿರಿಯಾಗೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡಿದ್ದ ಎಂದು ಮಹಿಳೆ ಅರ್ಜಿಯಲ್ಲಿ ತಿಳಿಸಿದ್ದಾರೆ. ಜತೆಗೆ, ತನ್ನ ಮದುವೆಯನ್ನು ರದ್ದುಪಡಿಸುವಂತೆಯೂ ಆಕೆ ಕೋರಿದ್ದಾಳೆ. ವಿಚಾರಣೆ ನ.13ರಂದು ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು
Crime: ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ
Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ
Temple; ಎಪ್ರಿಲ್ನಲ್ಲಿ ತಿರುಪತಿ ಹುಂಡಿಗೆ ಬಿದ್ದ ಕಾಣಿಕೆ ಎಷ್ಟು ಗೊತ್ತೇ?
Wife ಜತೆ ಅಸ್ವಾಭಾವಿಕ ಲೈಂಗಿಕಕ್ರಿಯೆಯು ರೇಪ್ ಅಲ್ಲ: ಹೈಕೋರ್ಟ್
MUST WATCH
ಹೊಸ ಸೇರ್ಪಡೆ
Bellary; ಸಿದ್ದರಾಮಯ್ಯ ಹುಚ್ಚು ರಾಜಕಾರಣಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ: ಸದಾನಂದ ಗೌಡ
Holenarasipur: ಶಾಸಕ ಹೆಚ್.ಡಿ. ರೇವಣ್ಣ ಬಂಧನ ಹಿನ್ನೆಲೆ ಬಂದ್ ಗೆ ಕರೆ
Hubli; ಪ್ರಧಾನಿ ಮೋದಿ ಪ್ರಧಾನ ಸುಳ್ಳುಗಾರ, ಸುಳ್ಳಿನ ಸರದಾರ: ಬಿ.ಕೆ.ಹರಿಪ್ರಸಾದ್
ʼಟಾಕ್ಸಿಕ್ʼ ಅಪ್ಡೇಟ್ಗಾಗಿ ಸೋಶಿಯಲ್ ಮೀಡಿಯಾದಲ್ಲಿ ಮತ್ತಷ್ಟು ಆ್ಯಕ್ಟಿವ್ ಆಗ್ತಾರಾ ಯಶ್?
Belagavi; ಪ್ರಧಾನಿ ನರೇಂದ್ರ ಮೋದಿ ಬಜರಂಗದಳ ಕಾರ್ಯಕರ್ತರಂತೆ ಮಾತಾಡ್ತಾರೆ: ಸಿದ್ದರಾಮಯ್ಯ