“ಸಿದ್ದರಾಮಯ್ಯನನ್ನು ಡಿಸಿಎಂ ಮಾಡಿದ್ದು ನಾವೇ’
Team Udayavani, Nov 23, 2017, 7:50 AM IST
ಕೊಪ್ಪಳ: “ಸಿದ್ದರಾಮಯ್ಯ ಈ ಹಿಂದೆ ದೊಡ್ಡ ಲೀಡರ್ ಆಗಿರಲಿಲ್ಲ. ಆದರೂ ಆತನನ್ನು ಉಪ ಮುಖ್ಯಮಂತ್ರಿ
ಮಾಡಿದ್ದು ನಾವು ಎನ್ನುವುದನ್ನು ನೆನಪಿ ಟ್ಟುಕೊಳ್ಳಬೇಕು’ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. “ಜೆಡಿಎಸ್ನಲ್ಲಿದ್ದಿದ್ರೆ ನಾನು ಈ
ಜನ್ಮದಲ್ಲಿ ಸಿಎಂ ಆಗುತ್ತಿರಲಿಲ್ಲ’ ಎಂದು ಸಿದ್ದರಾಮಯ್ಯ ಹೇಳಿರುವು ದಕ್ಕೆ ತಿರುಗೇಟು ನೀಡಿದ ಅವರು,
“1996ರಲ್ಲಿ ಸಿದ್ದರಾಮಯ್ಯ ಸಿಎಂ ಆಗ್ತಿàನಿ ಎಂದು ಜೆ.ಎಚ್.ಪಟೇಲ್ ಮುಂದೆ ದೆಹಲಿಯಲ್ಲಿ ಪ್ರಸ್ತಾಪಿಸಿದ್ದಕ್ಕೆ
ಆಗ ಪಟೇಲರು ಜೋಡು (ಚಪ್ಪಲಿ) ಹಿಡಿದು ನಿಂತಿದ್ದರು. ನನ್ನ ವಿರುದ್ಧವೇ ಸಿಎಂ ಸ್ಥಾನಕ್ಕೆ ಸ್ಪರ್ಧೆ ಮಾಡ್ತಿಯಾ
ಎಂದು ಗುಡುಗಿದ್ದರು.
ಆದರೂ ನಾವು ಈತನಿಗೆ ಉಪ ಮುಖ್ಯಮಂತ್ರಿ ಸ್ಥಾನ ಸಿಗುವಂತೆ ಮಾಡಿದ್ದೇವೆ. ನಾವು ಸಿಎಂ ಸ್ಥಾನ ತಪ್ಪಿಸಿಲ್ಲ. ಈಗ ಅ ಧಿಕಾರ, ಹಣ,ಅಹಂಕಾರದಿಂದ ಸಿದ್ದ ರಾಮಯ್ಯ ಹೀಗೆ ಮಾತನಾಡುತ್ತಿದ್ದಾನೆ. ಮೊದಲು ಸಿದ್ದರಾಮಯ್ಯ, ಬಸವರಾಜ ರಾಯರಡ್ಡಿ ಇವರೆಲ್ಲ ಎಲ್ಲಿದ್ರು’ ಎಂದು ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election ಹಂತ 2: ಮತದಾನದ ಹಕ್ಕು ಚಲಾವಣೆಗೆ ಸಕಲ ಸಿದ್ಧತೆ
ICSE: ರಾಜ್ಯದ ವಿದ್ಯಾರ್ಥಿಗಳಿಗೆ ಶೇ. 99 ಮೀರಿದ ಫಲಿತಾಂಶ; ವಿದ್ಯಾರ್ಥಿನಿಯರೇ ಮೇಲುಗೈ
Lok Sabha ಚುನಾವಣೆ ಪ್ರಕ್ರಿಯೆ ವೀಕ್ಷಣೆಗೆ 5 ದೇಶಗಳ ತಂಡ ಬೆಳಗಾವಿಗೆ
ರಾಜ್ಯ ಕಾಂಗ್ರೆಸ್ ಸರಕಾರ ಸಂಪೂರ್ಣ ನಿಷ್ಕ್ರಿಯ: ಬಿ.ವೈ.ವಿಜಯೇಂದ್ರ
Congress ಗೆಲುವಿನಲ್ಲಿದೆ ಮಹಿಳೆಯರ ಗೆಲುವು: ಸಿಎಂ ಸಿದ್ದರಾಮಯ್ಯ