ಶಿವು ಮಾತಿಗೆ ಸಿಗದವರೇ ಪಾರು


Team Udayavani, Dec 22, 2017, 6:30 AM IST

Shivu-Paru_(106).jpg

ಸಾಮಾನ್ಯವಾಗಿ ಸಿನಿಮಾ ಪತ್ರಿಕಾಗೋಷ್ಠಿಗಳಲ್ಲಿ ಆಗಾಗ ಹಾಸ್ಯ ಸುಳಿದಾಡೋದು ಸಹಜ. ಅದರಲ್ಲೂ ಪತ್ರಕರ್ತರ ಪ್ರಶ್ನೆಗಳಿಗೆ ಕೆಲ ಚಿತ್ರತಂಡ ಗಲಿಬಿಲಿ ಆಗೋದು ಅಷ್ಟೇ ಸಹಜ. ಆದರೆ, ಬಹಳಷ್ಟು ಗಂಭೀರ ಪ್ರಶ್ನೆಗಳಿಂದಾಗಿ  ಅನೇಕ ಚಿತ್ರತಂಡದವರು ಒಂದಷ್ಟು ಗೊಂದಲಕ್ಕೀಡಾಗುವುದೂ ಉಂಟು. ಇಂತಹ ಅದೆಷ್ಟೋ ಸಂದರ್ಭಗಳು ಬಂದು ಹೋದರೂ, ಅವ್ಯಾವೂ ನೆನಪಲ್ಲುಳಿಯೋದು ಕಷ್ಟ. ಆದರೆ, ಇತ್ತೀಚೆಗೆ ನಡೆದ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ನಗದೇ ಇದ್ದ ಪತ್ರಕರ್ತರೇ ಇರಲಿಲ್ಲ. ಅದೊಂದು ಪತ್ರಿಕಾಗೋಷ್ಠಿಯೋ, ಹಾಸ್ಯಗೋಷ್ಠಿಯೋ ಎಂಬಂತಿತ್ತು. ಅಷ್ಟೊಂದು ಮಜಬೂತೆನಿಸುವ ಪ್ರಶ್ನೆಗಳು ಅದಕ್ಕೆ ತಕ್ಕ ಉತ್ತರಗಳು ಆ ಗೋಷ್ಠಿಯನ್ನು ನಗೆಗಡಲಲ್ಲಿಟ್ಟಿದ್ದು ಸುಳ್ಳಲ್ಲ.

ಅಂದಹಾಗೆ, ಅದು “ಶಿವು-ಪಾರು’ ಚಿತ್ರದ ಮೊದಲ ಪತ್ರಿಕಾಗೋಷ್ಠಿ. ಅದರ ಹೈಲೈಟ್‌ ಅಮೆರಿಕ ಸುರೇಶ್‌. ಚಿತ್ರಕ್ಕೆ ಹಣ ಹಾಕಿದ್ದು, ಕಥೆ ಬರೆದಿದ್ದು, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು, ಸಂಗೀತ ನೀಡಿದ್ದಲ್ಲದೆ, ನಿರ್ದೇಶನವನ್ನೂ ಮಾಡುವ ಮೂಲಕ ಸಕಲಕಲಾವಲ್ಲಭ ಎನಿಸಿಕೊಂಡವರು. ಇದಷ್ಟೇ ಅಲ್ಲ, ತೆರೆಯ ಮೇಲೆ ಅವರೇ ಹೀರೋ. ಚಿತ್ರವನ್ನು ಪೂರ್ಣಗೊಳಿಸಿ, ಇದೀಗ ಪ್ರೇಕ್ಷಕರ ಮುಂದೆ ತರೋಕೆ ಅಣಿಯಾಗಿದ್ದಾರೆ ನಿರ್ದೇಶಕರು.

ಎಲ್ಲಾ ಸರಿ, ಪತ್ರಕರ್ತರು ಅಷ್ಟೊಂದು ನಕ್ಕಿದ್ದುಂಟಾ ಅನ್ನೋ ಪ್ರಶ್ನೆ ಎದುರಾಗಬಹುದು. ಅದಕ್ಕೆ ನಿರ್ದೇಶಕರಿಗೆ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಅವರ ಉತ್ತರವನ್ನೊಮ್ಮೆ ಆಲಿಸಿದರೆ, ನಗು ಮೂಡಿದರಲ್ಲಿ ಅರ್ಥವಿದೆ ಅಂತ ಗೊತ್ತಾಗುತ್ತೆ.

– ನಿಮ್ಮ ಚಿತ್ರಕ್ಕೆ ಎಷ್ಟು ಖರ್ಚಾಗಿದೆ?
ನನ್ನ ಸಂಭಾವನೆಯೇ ಮೂರು ಕೋಟಿ ಅಂದುಕೊಳ್ಳಿ. ಇನ್ನು ಚಿತ್ರಕ್ಕೆಷ್ಟಾಗಿರಬಹುದು? ಇಲ್ಲಿ ಹೆಚ್ಚು ಖರ್ಚಾಗಿದ್ದು ಗ್ಲಿಸರಿನ್‌ಗೆ!

– ಅಷ್ಟೊಂದು ಅಳಿಸುತ್ತೀರಾ?
ನಾಯಕಿ ಸಿಕ್ಕಾಪಟ್ಟೆ ಅಳ್ತಾರೆ.ಅವರಷ್ಟೇ ಅಲ್ಲ, ಅವರೊಂದಿಗೆ ಸುಮಾರು 50 ಜನ ಜೂನಿಯರ್ ಕೂಡ ಅಳ್ತಾರೆ. ಅದಕ್ಕೆ ಅಷ್ಟೊಂದು ಗ್ಲಿಸರಿನ್‌ ತರಿಸಿಕೊಟ್ಟೆ.

– ಹಾಗಾದರೆ, ನೋಡೋರು ಅತ್ತು ಹೊರಬರ್ತಾರೆ ಅನ್ನಿ?
ಅಳದೇ ಇದ್ದವರಿಗೆ ಬಹುಮಾನವಿದೆ.

– ಮೊದಲರ್ಧದಲ್ಲಿ ಅಳ್ತಾರಾ, ದ್ವಿತಿಯಾರ್ಧದಲ್ಲಿ ಅಳ್ತಾರಾ, ಅಥವಾ ಸಿನ್ಮಾ ಮುಗಿದ್ಮೇಲೆ ಅಳ್ತಾರಾ?
ಇಡೀ ಸಿನ್ಮಾ ಅಳ್ತಾನೇ ಇರ್ತಾರೆ.

– ಚಿತ್ರದ ಬಗ್ಗೆ ಇಷ್ಟೊಂದು ಕರಪತ್ರ ಕೊಟ್ಟಿದ್ದೀರಿ. ಯಾಕೆ?
ನಿಮ್ಮನೇಲಿರೋರಿಗೆ, ನಿಮ್ಮ ಕಚೇರಿಯಲ್ಲಿರೋರಿಗೆ ಅದನ್ನೆಲ್ಲಾ ಹಂಚಿಬಿಡಿ.

– ಚಿತ್ರದಲ್ಲಿ ತುಂಬಾ ವಿಶೇಷ ಅನ್ನೋದೇನಿದೆ?
ಇಲ್ಲಿ 60 ದಿನ ಹನಿಮೂನ್‌ ಮಾಡೋದಿದೆ. ಅದಕ್ಕೆ ಸಿನ್ಮಾದಲ್ಲಿ ಉತ್ತರ ಸಿಗಲಿದೆ.

– ಇದು ಯಾವ ಜಾನರ್‌ನ ಸಿನಿಮಾ?
ಜನ್ಮಜನ್ಮಾಂತರದ ಕಥೆಯದ್ದು

– ಜನ್ಮಾಂತರದ ಕಥೆ ಹೊಸದೇನಲ್ವಲ್ಲಾ? ಯಾಕೆ ನೋಡ್ಬೇಕು?
ನೋಡ್ಲೆàಬೇಕು. ಸಾಯೋಕೆ ಮುಂಚೆ ಎಲ್ಲರೂ ಒಂದ್ಸಲ ನೋಡ್ಬೇಕು. ನೀವೂ ಕೂಡ…
ಹೀಗೆ ಇನ್ನೂ ಅನೇಕ ಪ್ರಶ್ನೆಗಳಿಗೆ ಒಂದಷ್ಟೂ ಬೇಸರಿಸಿಕೊಳ್ಳದೆ ನಗ್ತಾನೇ ಉತ್ತರಿಸುತ್ತ ಹೋದರು ಅಮೆರಿಕ ಸುರೇಶ್‌. ಹೊಸಕೋಟೆ ತಾಲೂಕಿನ ಹಳ್ಳಿಯೊಂದರ ಹೈದ ಕಳೆದ ಎರಡು ದಶಕಗಳ ಕಾಲ ಅಮೆರಿಕದಲ್ಲಿ ಸಾಫ್ಟ್ವೇರ್‌ ಎಂಜಿನಿಯರ್‌ ಆಗಿ ಕೆಲಸ ಮಾಡಿದವರು. ಸಿನ್ಮಾ ಸಂಬಂಧಿಸಿದಂತೆ ಹತ್ತು ವರ್ಷ ಕಾಲ ಅಲ್ಲೇ ಕುಳಿತು ಒಂದಷ್ಟು ಅವಲೋಕನ ಮಾಡಿ, ಅವರೊಂದು ಕಥೆ ಹೆಣೆದು, ಏನಾದರೊಂದು ಮಾಡಬೇಕು ಅಂತ ಇಲ್ಲಿಗೆ ಬಂದು “ಶಿವು-ಪಾರು’ ಸಿನಿಮಾ ಮಾಡಿದ್ದಾರೆ.

ರೋಮಿಯೋ-ಜ್ಯೂಲಿಯಟ್‌, ಲೈಲಾ- ಮಜು°, “ಪಾರು-ದೇವದಾಸ್‌’ಗಿಂತ ಕಮ್ಮಿ ಇಲ್ಲದಂತಹ ರೊಮ್ಯಾಂಟಿಕ್‌ ಲವ್‌ಸ್ಟೋರಿ ಹೆಣೆದಿದ್ದಾರಂತೆ. ಇದು ಜನ್ಮಜನ್ಮಾಂತರದ ಕಥೆ. ಶಿವ ಪಾರ್ವತಿ ಮಾನವ ಜನ್ಮ ತಾಳಿ ಭೂಮಿಗಿಳಿದು ಏನೆಲ್ಲಾ ಮಾಡ್ತಾರೆ ಅನ್ನೋ ಕಥೆ ಮೇಲೆ ಚಿತ್ರ ಸಾಗಲಿದೆ. ಆರು ಹಾಡುಗಳಿವೆ. ಚಿತ್ರಕ್ಕೆ ದಿಶಾ ಪೂವಯ್ಯ ನಾಯಕಿ. ಅವರಿಲ್ಲಿ ಪಾರು ಪಾತ್ರ ಮಾಡಿದ್ದಾರೆ. ಎರಡು ಶೇಡ್‌ ಇರುವಂತಹ ಪಾತ್ರವಂತೆ. ಉಳಿದಂತೆ ಇಲ್ಲಿ ರಮೇಶ್‌ಭಟ್‌, ಹೊನ್ನವಳ್ಳಿ ಕೃಷ್ಣ, ಚಿತ್ರಾ ಶೆಣೈ, ಸುಂದರ್‌, ವಿಶ್ವ, ಕ್ರಿಷಿ ಇತರರು ನಟಿಸಿದ್ದಾರೆ.

– ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.