ಮನೆಗೆ ನಳ ಸಂಪರ್ಕ ಪಡೆಯಿರಿ


Team Udayavani, Dec 29, 2017, 3:31 PM IST

yad-1.jpg

ಯಾದಗಿರಿ: ನಗರಸಭೆ ಮೂಲಕ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಅನುಷ್ಠಾನಗೊಳ್ಳುತ್ತಿವೆ. ಅದರಲ್ಲಿ ನಿರಂತರ ಕುಡಿಯುವ ನೀರು ಸರಬರಾಜು ಯೋಜನೆ ಸಹ ಒಂದಾಗಿದೆ. ಈ ಯೋಜನೆಗೆ ಸುಮಾರು 50 ಕೋಟಿ ರೂ. ವ್ಯಯಿಸಲಾಗಿದೆ. ಆದ್ದರಿಂದ ಪ್ರತಿಯೊಂದು ಮನೆಗೆ ನಳ ಸಂಪರ್ಕ ಪಡೆಯಬೇಕು ಎಂದು ನಗರಸಭೆ ಪೌರಾಯುಕ್ತ
ಸಂಗಪ್ಪ ಉಪಾಸೆ ಹೇಳಿದರು.

ನಗರದ ವಾರ್ಡ್‌ ನಂ. 14ರ ಅಸರ್‌ ಮೋಹಲ್ಲಾದ ಮಿಲನ್‌ ಫಂಕ್ಷನ್‌ ಹಾಲ್‌ನಲ್ಲಿ ಕರ್ನಾಟಕ ನಗರ ಮೂಲಸೌಕರ್ಯ
ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ, ಉತ್ತರ ಕರ್ನಾಟಕ ನಗರ ವಲಯ ಬಂಡವಾಳ ಹೂಡಿಕೆ ಕಾರ್ಯಕ್ರಮ, ಯಾದಗಿರಿ ನಗರಸಭೆ ಹಾಗೂ ಕಲಬುರಗಿ ಗ್ರಾಮೀಣ ಮಹಿಳಾ ಅಭಿವೃದ್ಧಿ ಶಿಕ್ಷಣ ಸಂಸ್ಥೆ (ಗ್ರಾಮ್ಸ್‌), ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರಿಗೆ ಮನೆ ನಳ ಸಂಪರ್ಕಗಳ ಪ್ರೇರಣೆ ಮಾಹಿತಿ, ಸಂವಹನ ಹಾಗೂ ಶಿಕ್ಷಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನೀರು ಸರಬರಾಜು ಹಾಗೂ ನೀರಿನ ದರದ ಕುರಿತು ಸಮುದಾಯಾದವರಿಗೆ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ
ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರು ನಗರಸಭೆ ಕಾರ್ಯಗಳು ನಮ್ಮ ಮನೆ ಕಾರ್ಯದಂತೆ
ಪ್ರೀತಿಯಿಂದ ಕಾಳಜಿ ಮಾಡಿದಾಗ ಮಾತ್ರ ನಗರ ಅಭಿವೃದ್ಧಿಯಾಗುತ್ತದೆ. ಅದರ ಜತೆಗೆ ನಗರಕ್ಕೂ ಕೂಡ
ಒಳ್ಳೆ ಹೆಸರು ಬರುತ್ತದೆ. ಇನ್ನೂ 6 ತಿಂಗಳಲ್ಲಿ ನಳ ಸಂಪರ್ಕ ಹೊಂದಿದ ಮನೆಗಳಿಗೆ ಶುದ್ಧವಾದ ಕುಡಿಯುವ ನೀರು
ಸರಬರಾಜು ಆಗುತ್ತದೆ ಎಂದು ಹೇಳಿದರು.

ಕೆಯುಐಡಿಎಫ್‌ಸಿ ಯೋಜನಾಧಿಕಾರಿ ಮಹೇಶಕುಮಾರ ಮಾತನಾಡಿ, ಕೆಯುಐಡಿಎಫ್‌ಸಿ- ಎನ್‌ಕೆಯುಎಸ್‌ಐಪಿ
ಯೋಜನೆ ಯಾದಗಿರಿ ನಗರಕ್ಕೆ ಬಂದಿರುವುದು ಸಂತೋಷದ ವಿಷಯ. ಕರ್ನಾಟಕದ 20,460 ಗ್ರಾಮಗಳಿಗೆ ಕುಡಿಯಲು ಯೋಗ್ಯವಲ್ಲದ ನೀರು ಪೂರೈಕೆಯಾಗುತ್ತಿದೆ. ಇದರಿಂದ ಹಲವಾರು ರೋಗಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಯಾದಗಿರಿ ನಗರದ ಪ್ರತಿಯೊಂದು ಕುಟುಂಬದವರು ಮನೆಗಳಿಗೆ ನಳ ಸಂಪರ್ಕ ಪಡೆದು ಅದಕ್ಕೆ ತಗಲುವ ಕರವನ್ನು ನಗರಸಭೆಗೆ ನೀಡಬೇಕು ಮತ್ತು ಮನೆ ನಳ ಸಂಪರ್ಕ ಪಡೆಯಲು ಕೆಯುಐಡಿ ಎಫ್‌ಸಿ-ಎನ್‌ಕೆಯುಎಸ್‌ಐಪಿ
ಕ್ಷೇತ್ರ ಮಟ್ಟದ ಸಿಬ್ಬಂದಿಗಳು ನಿಮ್ಮ ಮನೆಗೆ ಬಂದು ಅರ್ಜಿ ತುಂಬುವ ವಿಧಾನದ ಮಾಹಿತಿ ಸಹ ನೀಡುತ್ತಾರೆ ಎಂದು
ಹೇಳಿದರು.

ಯೋಜನಾ ಸಂಯೋಜಕರಾದ ದೇವೆಂದ್ರಪ್ಪ ಚಿಂತಕುಂಟಾ ಮಾತನಾಡಿ, ಯೋಜನೆ ಕುರಿತು ಸಮಗ್ರವಾದ ಮಾಹಿತಿ
ನೀಡುವುದರ ಜತೆಗೆ ಯೋಜನೆಗೆ ಸಂಬಂಧಿ ಸಿದ ಕೆಲವು ಕಿರು ಚಿತ್ರ ಸಹ ಪ್ರದರ್ಶಿಸಿದರು.

ನಗರಸಭೆ ಸದಸ್ಯರಾದ ತಸ್ಲಿಮ್‌ ಬಾನು ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಕಾರ್ಯಪಾಲಕ ಅಭಿಯಂತರ
ಅಶೋಕ ಚಟ್ಟರ್ಕಿ, ಸಮುದಾಯ ಸಂಘಟನಾಧಿಕಾರಿ ಬಸಪ್ಪ ತಳವಡಿ, ವಕೀಲರಾದ ಶಫಿ ಅಹ್ಮದ್‌, ಎಂ.ಡಿ.ಇಸ್ಮಾಯಿಲ್‌, ಮಹಿಳಾ ಸಂಘದ ಮುಖಂಡರಾದ ಸಂಗೀತಾ ಇದ್ದರು. ಸಾಬಮ್ಮ ಪ್ರಾರ್ಥಿಸಿದರು. ದೇವಮ್ಮ ಅಬ್ಬೇತುಮಕೂರು ನಿರೂಪಿಸಿದರು. ಸಮುದಾಯ ಸಂಘಟಿಕರಾದ ಅವ್ವಮ್ಮ ವಂದಿಸಿದರು.

ಟಾಪ್ ನ್ಯೂಸ್

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

1-uu

‘U-WIN’ ಪೋರ್ಟ್‌ಲ್‌ಗೆ ಅಕ್ಟೋಬರ್‌ನಲ್ಲಿ ಚಾಲನೆ

MASIDI

Fiscal Crisis: ಅಯೋಧ್ಯೆ ಮಸೀದಿ ಟ್ರಸ್ಟ್‌ ಸಮಿತಿಗಳ ವಿಸರ್ಜನೆ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

suicide (2)

Shahapur; 10ನೇ ತರಗತಿ ವಿದ್ಯಾರ್ಥಿ ಹಠಾತ್‌ ಕುಸಿದು ಬಿದ್ದು ಸಾ*ವು

1-vrm

Ex MLA ವೆಂಕಟರೆಡ್ಡಿ‌ ಮುದ್ನಾಳ ಅಂತಿಮ‌ ದರ್ಶನ ಪಡೆದ ವಿಜಯೇಂದ್ರ

Yadgir: ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ ನಿಧನ

Yadgir: ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ ನಿಧನ

yadagiriYadagiri: ಶಾಸಕ ಚೆನ್ನಾರೆಡ್ಡಿ ಪಾಟೀಲ ವಿರುದ್ದ ಧಿಕ್ಕಾರ ಕೂಗಿದ ದಲಿತ ಮುಖಂಡರು

Yadagiri: ಶಾಸಕ ಚೆನ್ನಾರೆಡ್ಡಿ ಪಾಟೀಲ ವಿರುದ್ದ ಧಿಕ್ಕಾರ ಕೂಗಿದ ದಲಿತ ಮುಖಂಡರು

Yadagiri: ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ ರಾಜಿಯಾಗದ ದಲಿತರಿಗೆ ಬಹಿಷ್ಕಾರ!

Yadagiri: ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ ರಾಜಿಯಾಗದ ದಲಿತರಿಗೆ ಬಹಿಷ್ಕಾರ!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.