ಮೊದಲ ಟೆಸ್ಟ್‌ ಪಂದ್ಯದಿಂದಹೊರಬಿದ್ದ ಶಿಖರ್‌ ಧವನ್‌


Team Udayavani, Dec 31, 2017, 6:15 AM IST

Shikhar-Dhawan-30207.jpg

ಹೊಸದಿಲ್ಲಿ: ದಕ್ಷಿಣ ಆಫ್ರಿಕಾದಲ್ಲಿ ಸುದೀರ್ಘ‌ ಕ್ರಿಕೆಟ್‌ ಸರಣಿ ಆಡಬೇಕಿರುವ ಭಾರತ, ಇದರ ಆರಂಭಕ್ಕೂ ಮೊದಲೇ ಆಘಾತಕ್ಕೆ ಸಿಲುಕಿದೆ. ಎಡಗೈ ಆರಂಭಕಾರ ಶಿಖರ್‌ ಧವನ್‌ ಗಾಯಾಳಾಗಿ ಮೊದಲ ಟೆಸ್ಟ್‌ ಪಂದ್ಯದಿಂದ ಹೊರಬಿದ್ದಿದ್ದಾರೆ. ವರ್ಷಾರಂಭದ ಈ ಟೆಸ್ಟ್‌ ಜ. 5ರಿಂದ ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್‌ ಅಂಗಳದಲ್ಲಿ ಆರಂಭವಾಗಲಿದೆ.

ಶಿಖರ್‌ ಧವನ್‌ ಕಳೆದ ಮಂಗಳವಾರ ಮುಂಬಯಿಯಲ್ಲಿ ವಿರಾಟ್‌ ಕೊಹ್ಲಿ-ಅನುಷ್ಕಾ ಶರ್ಮ ಜೋಡಿಯ ಆರತಕ್ಷತೆಯಲ್ಲಿ ಪಾಲ್ಗೊಂಡಿದ್ದರು. ಅದೇ ದಿನ ಪಾದದ ನೋವಿಗೆ ಸಿಲುಕಿದರು. ಈಗ ನೋವು ತೀವ್ರಗೊಂಡಿದೆ. ಎಂಆರ್‌ಐ ಸ್ಕ್ಯಾನಿಂಗ್‌ ವರದಿ ಲಭಿಸಿದ್ದು, ಧವನ್‌ ಅವರಿಗೆ ಜ. 10ರ ತನಕ ವಿಶ್ರಾಂತಿ ಸೂಚಿಸಲಾಗಿದೆ. ಜ. 13ರಿಂದ ಆರಂಭವಾಗಲಿರುವ ಸೆಂಚುರಿಯನ್‌ ಟೆಸ್ಟ್‌ ಪಂದ್ಯಕ್ಕೆ ಧವನ್‌ ಲಭ್ಯರಾಗುವ ನಿರೀಕ್ಷೆ ಇದೆ.

ಈ ಸರಣಿಯಲ್ಲಿ ಶಿಖರ್‌ ಧವನ್‌ ಮತ್ತು ಮುರಳಿ ವಿಜಯ್‌ ಭಾರತದ ಮೊದಲ ಆಯ್ಕೆಯ ಆರಂಭಿಕರಾಗಿದ್ದರು. ಈಗ ಧವನ್‌ ಅನುಪಸ್ಥಿತಿಯಲ್ಲಿ ಕೆ.ಎಲ್‌. ರಾಹುಲ್‌ ಇನ್ನಿಂಗ್ಸ್‌ ಆರಂಭಿಸಲು ಇಳಿಯಬೇಕಿದೆ.

ವಿರಾಟ್‌ ಕೊಹ್ಲಿ ಅಸಮಾಧಾನ
ಶಿಖರ್‌ ಧವನ್‌ ಗಾಯಾಳಾಗಿ ಮೊದಲ ಟೆಸ್ಟ್‌ ಪಂದ್ಯದಿಂದ ಹೊರಬಿದ್ದಿರುವುದಕ್ಕೆ ನಾಯಕ ವಿರಾಟ್‌ ಕೊಹ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅತ್ಯಂತ ಮಹತ್ವದ ಹಾಗೂ ಕಠಿನ ಸರಣಿ ಎದುರಿದ್ದಾಗ ಧವನ್‌ ಎಚ್ಚರಿಕೆ ವಹಿಸಬೇಕಿತ್ತು ಎಂದಿದ್ದಾರೆ.

ಬೋಲ್ಯಾಂಡ್‌ ಪಾರ್ಕ್‌ನಲ್ಲಿ ಅಭ್ಯಾಸ
ಟೆಸ್ಟ್‌ ಸರಣಿಗೂ ಮುನ್ನ ಆಡಬೇಕಿದ್ದ 2 ದಿನಗಳ ಅಭ್ಯಾಸ ಪಂದ್ಯವನ್ನು ಭಾರತ ರದ್ದುಗೊಳಿಸಿದ ಕಾರಣ ನೇರವಾಗಿ ನೆಟ್‌ ಪ್ರ್ಯಾಕ್ಟೀಸ್‌ಗೆ ಇಳಿಯಲಿದೆ. ಇದಕ್ಕಾಗಿ ಪಾರ್ಲ್ನ “ಬೋಲ್ಯಾಂಡ್‌ ಪಾರ್ಕ್‌’ ಅಂಗಳವನ್ನು ಒದಗಿಸಲಾಗಿದೆ.

ಅಭ್ಯಾಸಕ್ಕಾಗಿ ಪಾರ್ಲ್ನ “ಸೆಂಟರ್‌ ಪಿಚ್‌’ ಅನ್ನೇ ಒದಗಿಸಬೇಕೆಂದು ತಂಡದ ಆಡಳಿತ ಮಂಡಳಿ ಬಿಸಿಸಿಐಗೆ ಮನವಿ ಮಾಡಿತ್ತು. ಭಾರತೀಯ ಕ್ರಿಕೆಟ್‌ ಮಂಡಳಿಯ ಕೋರಿಕೆಗೆ “ಕ್ರಿಕೆಟ್‌ ಸೌತ್‌ ಆಫ್ರಿಕಾ’ (ಸಿಎಸ್‌ಎ) ಅನುಮತಿ ನೀಡಿರಲಿಲ್ಲ. ಈಗ ಇದಕ್ಕೆ ಸಮ್ಮತಿಸಿದೆ. ಟೀಮ್‌ ಇಂಡಿಯಾ ಕ್ರಿಕೆಟಿಗರು ಸದ್ಯದಲ್ಲೇ ಇಲ್ಲಿ ಅಭ್ಯಾಸ ಆರಂಭಿಸಲಿದ್ದಾರೆ.
ಭಾರತ 2013-14ರ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆಯೂ ಇಂಥದೇ ಮನವಿ ಮಾಡಿತ್ತು. ಆದರೆ ಇದಕ್ಕೆ ಅಂದು ಸಿಎಸ್‌ಎ ಅನುಮತಿ ಕೊಟ್ಟಿರಲಿಲ್ಲ.

ಟಾಪ್ ನ್ಯೂಸ್

ಚಿಕಿತ್ಸೆಗೆಂದು ಭಾರತಕ್ಕೆ ಬಂದು ನಾಪತ್ತೆಯಾಗಿದ್ದ ಬಾಂಗ್ಲಾದೇಶದ ಸಂಸದ ಶವವಾಗಿ ಪತ್ತೆ

ಚಿಕಿತ್ಸೆಗೆಂದು ಭಾರತಕ್ಕೆ ಬಂದು ನಾಪತ್ತೆಯಾಗಿದ್ದ ಬಾಂಗ್ಲಾದೇಶದ ಸಂಸದ ಶವವಾಗಿ ಪತ್ತೆ

7-bantwala

Bantwala: ಸ್ಕೂಟರ್ ಅಪಘಾತ ಪ್ರಕರಣ; ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಮೃತ್ಯು

1-adasas

Ballari: 55 ಕೆಜಿ ಗಾಂಜಾ ಸಹಿತ ಐವರ ಬಂಧನ

Loksabha poll: ಇವಿಎಂ ನೆಲಕ್ಕೆ ಎಸೆದು ಪುಡಿಗೈದ ಶಾಸಕ, ಕೃತ್ಯ ಸಿಸಿಟಿವಿಯಲ್ಲಿ ಸೆರೆ

Loksabha poll: ಇವಿಎಂ ನೆಲಕ್ಕೆ ಎಸೆದು ಪುಡಿಗೈದ ಶಾಸಕ, ಕೃತ್ಯ ಸಿಸಿಟಿವಿಯಲ್ಲಿ ಸೆರೆ

police crime

Vijayapura ಜಿಲ್ಲೆಯ ವೈದ್ಯ ಸೇರಿ ಇಬ್ಬರಿಗೆ ಆನ್‍ಲೈನ್ ವಂಚನೆ : 68.77 ಲಕ್ಷ ರೂ. ಪಂಗನಾಮ

5-udupi

Udupi: ರಾಮ್ ಅಡ್ವಟೈಸರ್ಸ್ ಮಾಲಕ ರಾಮಚಂದ್ರ ಆಚಾರ್ಯ ನಿಧನ

H C MAhadev

Mysuru;ಕೆ.ಸಾಲುಂಡಿ ಗ್ರಾಮದಲ್ಲಿ ಕಾಲರಾ ಲಕ್ಷಣಗಳು‌: ಸಚಿವ ಡಾ.ಮಹದೇವಪ್ಪ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eqwwqewqe

KKR ಫೈನಲ್ ಲಗ್ಗೆ ಸಂಭ್ರಮ : ಶಾರುಖ್ ಖಾನ್ ಕ್ಷಮೆ ಕೇಳಿದ್ದು ಯಾಕೆ? Watch Video

Vijay Mallya

Eliminator ಪಂದ್ಯಕ್ಕೆ ಶುಭ ಕೋರಿದ ಮಲ್ಯ; ನಾನು ಆರ್‌ಸಿಬಿ ಫ್ರಾಂಚೈಸಿಗಾಗಿ…

IPL Eliminator match between RCB and RR

IPL 2024: ರಾಜಸ್ಥಾನಕ್ಕೆ ಬಿಸಿ ಮುಟ್ಟಿಸುವ ತವಕದಲ್ಲಿ ಆರ್‌ಸಿಬಿ

ಸ್ಟಾರ್ಕ್‌ ಸುಂಟರಗಾಳಿ ; ಕೋಲ್ಕತಾ ಫೈನಲ್‌ ಸವಾರಿ

IPL 2024; ಸ್ಟಾರ್ಕ್‌ ಸುಂಟರಗಾಳಿ ; ಕೋಲ್ಕತಾ ಫೈನಲ್‌ ಸವಾರಿ

T20 World Cup: McGurk is Australia’s reserve player

T20 World Cup: ಮೆಕ್‌ಗರ್ಕ್‌ ಆಸ್ಟ್ರೇಲಿಯದ ಮೀಸಲು ಆಟಗಾರ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

ಚಿಕಿತ್ಸೆಗೆಂದು ಭಾರತಕ್ಕೆ ಬಂದು ನಾಪತ್ತೆಯಾಗಿದ್ದ ಬಾಂಗ್ಲಾದೇಶದ ಸಂಸದ ಶವವಾಗಿ ಪತ್ತೆ

ಚಿಕಿತ್ಸೆಗೆಂದು ಭಾರತಕ್ಕೆ ಬಂದು ನಾಪತ್ತೆಯಾಗಿದ್ದ ಬಾಂಗ್ಲಾದೇಶದ ಸಂಸದ ಶವವಾಗಿ ಪತ್ತೆ

7-bantwala

Bantwala: ಸ್ಕೂಟರ್ ಅಪಘಾತ ಪ್ರಕರಣ; ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಮೃತ್ಯು

6-thirthahalli

Thirthahalli ತಾಲೂಕುಆಸ್ಪತ್ರೆ ಪಕ್ಕದ ಜನೌಷಧಿ ಕೇಂದ್ರ ಬಾಗಿಲು ಬಂದ್​:ರೋಗಿಗಳ ತೀವ್ರ ಪರದಾಟ

1-adasas

Ballari: 55 ಕೆಜಿ ಗಾಂಜಾ ಸಹಿತ ಐವರ ಬಂಧನ

Loksabha poll: ಇವಿಎಂ ನೆಲಕ್ಕೆ ಎಸೆದು ಪುಡಿಗೈದ ಶಾಸಕ, ಕೃತ್ಯ ಸಿಸಿಟಿವಿಯಲ್ಲಿ ಸೆರೆ

Loksabha poll: ಇವಿಎಂ ನೆಲಕ್ಕೆ ಎಸೆದು ಪುಡಿಗೈದ ಶಾಸಕ, ಕೃತ್ಯ ಸಿಸಿಟಿವಿಯಲ್ಲಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.