ನಾರಾವಿ: ಗ್ರಾಮಸ್ಥರಿಂದ ರಸ್ತೆ ನಿರ್ಮಾಣದ ಪಣ
Team Udayavani, Feb 2, 2018, 3:38 PM IST
ವೇಣೂರು: ರಸ್ತೆಯಿಲ್ಲದೆ ಶತಮಾನಗಳಿಂದ ಪರದಾಡುತ್ತಿದ್ದ ಕುಟುಂಬಕ್ಕೆ ಗ್ರಾಮಸ್ಥರೇ ಹಾರೆ ಪಿಕ್ಕಾಸುಗಳನ್ನು ಹೆಗಲಿಗೇರಿಸಿ ಶ್ರಮದಾನದ ಮೂಲಕ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ನಾರಾವಿ ಗಾ.ಪಂ. ವ್ಯಾಪ್ತಿಯ ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯೊಳಗಿನ ಮೂಡಾಡಿ ಗ್ರಾಮದ ಸಂಪರ್ಕಕ್ಕೆ ರಸ್ತೆ ನಿರ್ಮಾಣವಾಗಲಿದೆ. ಅಲ್ಲಿರುವುದು ಒಂದೇ ಮನೆ. ತಲೆ ತಲಾಂತರದಿಂದಲೂ ಅಲ್ಲೇ ವಾಸ್ತವ್ಯವಿದ್ದಾರೆ. ‘ಅಲ್ಪಮೊತ್ತದ ಹಣದ ಆಸೆಗೆ ನಾವು ಬದುಕಿದ ಮನೆ, ಪರಿಸರ ಬಿಟ್ಟು ಹೊರ ಹೋಗಲಾರೆವು’ ಎಂದು ಕಾಡಿನೊಳಗಿರುವ ಕುಟುಂಬಕ್ಕೆ ರಸ್ತೆ ಸೌಲಭ್ಯವೇ ಇಲ್ಲವಾಗಿತ್ತು. ಈ ಕುಟುಂಬದಲ್ಲಿ ಶಾಲೆಗೆ ಹೋಗುವ ಮೂವರು ಸಣ್ಣ ಮಕ್ಕಳಿದ್ದಾರೆ. ಶಾಲೆ ಬಲುದೂರ. ಇವರಿಗೆ ಬೆಳಗ್ಗಿನ ಕಾಲ್ನಡಿಗೆಯೇ ದಿನನಿತ್ಯದ ಪಾಠವಾಗಿತ್ತು. ಹೆತ್ತವರೂ ಮಕ್ಕಳೊಂದಿಗೆ ಶಾಲಾ ಬಸ್ ಬರುವಲ್ಲಿಯವರೆಗಿನ ಸುಮಾರು ಒಂದೂವರೆ ಕಿ.ಮೀ. ದೂರ ನಡೆದೇ ಬಸ್ ಹತ್ತಿಸಿ ಮನೆಗೆ ಹಿಂದಿರುಗುತ್ತಾರೆ. ಸಂಜೆಯೂ ಕಾಲ್ನಡಿಗೆ. ಇದು ನಿತ್ಯದ ಕೆಲಸ.
ಇಂತಹ ಪ್ರದೇಶಕ್ಕೆ ಮೂಲ ಸೌಕರ್ಯವಾದ ರಸ್ತೆ ನಿರ್ಮಾಣಕ್ಕೆ ಅನುಮತಿ ಇಲ್ಲ. ಸರಕಾರದ ನಿಲುವಿನಿಂದ ಬೇಸತ್ತಿರುವ ರಾಷ್ಟ್ರೀಯ ಉದ್ಯಾನವಾಸಿಗಳು ಕಾಡಿನ ಕೊನೆಯ ಮನೆಯವರೆಗೂ ರಸ್ತೆ ನಿರ್ಮಾಣ ಆಗಬೇಕೆಂದು ಪಣತೊಟ್ಟು ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಗ್ರಾಮಸ್ಥರೆಲ್ಲರೂ ಜತೆಯಾಗಿಯೇ ಶ್ರಮದಾನದಲ್ಲಿ ಪಾಲ್ಗೊಂಡು ರಸ್ತೆ ನಿರ್ಮಿಸುತ್ತಿದ್ದು, ಶತಮಾನದ ನೋವೊಂದು ಅಂತ್ಯ ಕಾಣುವ ನಿರೀಕ್ಷೆಯಲ್ಲಿದೆ.
ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಮತ್ತು ಡಿ.ವೈ.ಎಫ್.ಐ. ಕುತ್ಲೂರು ಘಟಕದ ನಿರಂತರ ಶ್ರಮದ ಫಲವಾಗಿ ಮಣ್ಣು ಹದಗೊಂಡಿದೆ. ರಸ್ತೆಯ ಗುರುತು ನಿರ್ಮಾಣವಾಗಿದೆ. ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿದೆ. ನಮ್ಮೂರಿನ ಒಂಟಿ ಮನೆಗೂ ವಾಹನದ ಚಕ್ರ ತಿರುಗಿಯೇ ತಿರುಗುತ್ತದೆಂಬ ಭರವಸೆ ಜನರಲ್ಲಿ ಮೂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Panaji; ಮೇ 11 ರಿಂದ ಗೋವಾದಲ್ಲಿ ಕೆಲವೆಡೆ ತುಂತುರು ಮಳೆ ಸಾಧ್ಯತೆ
ಶಿವಮೊಗ್ಗ: ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ, ಬಿಗುವಿನ ವಾತಾವರಣ
Sangeeth Sivan: ಮಾಲಿವುಡ್, ಬಾಲಿವುಡ್ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ
Thirthahalli ಕುಪ್ಪಳ್ಳಿ; ಮನೆಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ!
ಎಲ್ಲಾ ಶೆಡ್ಯೂಲ್ ಮುಗಿದ ಬಳಿಕವಷ್ಟೇ ʼKGF -3ʼ.. ಬಿಗ್ ಅಪ್ಡೇಟ್ ಕೊಟ್ಟ ನಿರ್ದೇಶಕ ನೀಲ್