ಇಲ್ಯಾಸ್ ಕೊಲೆ ಪ್ರಕರಣ: ಆರೋಪಿಗಳು ವಶಕ್ಕೆ ?
Team Udayavani, Feb 9, 2018, 11:48 AM IST
ಮಂಗಳೂರು: ರೌಡಿಶೀಟರ್, ಉಳ್ಳಾಲ ಟಾರ್ಗೆಟ್ ಗ್ಯಾಂಗ್ ಮುಖಂಡ ಮೊಹಮ್ಮದ್ ಇಲ್ಯಾಸ್ (32) ಕೊಲೆ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ನಗರ ಪೊಲೀಸರು ಬಹುತೇಕ ಯಶಸ್ವಿಯಾಗಿದ್ದಾರೆ ಎಂದು ಕೆಲವು ಮೂಲಗಳು ತಿಳಿಸಿವೆ.
ಜ. 13ರಂದು ಬೆಳಗ್ಗೆ 9 ಗಂಟೆಗೆ ಇಬ್ಬರು ದುಷ್ಕರ್ಮಿಗಳು ಇಲ್ಯಾಸ್ನನ್ನು ಜಪ್ಪು ಕುಡುಪಾಡಿಯ ವಸತಿಗೃಹದಲ್ಲಿ ಬರ್ಬರ ಹತ್ಯೆಗೈದು ಪರಾರಿಯಾಗಿದ್ದರು.
ಈ ಪ್ರಕರಣದಲ್ಲಿ ತನಿಖಾ ತಂಡಕ್ಕೆ ಸಿಕ್ಕ ಮಹತ್ವದ ಮಾಹಿತಿಯಲ್ಲಿ ಕೇರಳಕ್ಕೆ ಹೋದ ಪೊಲೀಸರು ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಕೊಲೆಯ ಆರೋಪಿಗಳಿಗೆ ಸಹಕಾರ ನೀಡಿದವರನ್ನು ವಶಕ್ಕೆ ಪಡೆದು ಮತ್ತಷ್ಟು ಮಾಹಿತಿ ಕಲೆ ಹಾಕಿದ್ದಾರೆ. ಒಂದೆರಡು ದಿನಗಳಲ್ಲಿ ಈ ಕೊಲೆ ಹಿಂದಿರುವ ಆರೋಪಿಗಳ ಸ್ಪಷ್ಟ ಸುಳಿವು ಸಿಗಲಿದ್ದು, ಬಂಧನವಾಗುವ ಸಾಧ್ಯತೆಯಿದೆ ಎಂದು ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ತಿಳಿಸಿದ್ದಾರೆ.