ಮಳೆ ತಡೆಯಲು ಊರಿಗೇ ಚಪ್ಪರ!


Team Udayavani, Feb 22, 2018, 6:30 AM IST

male-tade.jpg

ಒಂದೂರಲ್ಲಿ ರಾಜನಿದ್ದ. ಆವನ ಆಳ್ವಿಕೆಯಲ್ಲಿ ಜನರು ಬಹಳ ಸಂತೋಷವಾಗಿದ್ದರು, ರಾಜ್ಯ ಸುಭಿಕ್ಷವಾಗಿತ್ತು. ಒಂದು ಸಲ ರಾಜನಿಗೆ ದೂರದ ತೀರ್ಥಕ್ಷೇತ್ರ ಹಾಗೂ ಐತಿಹಾಸಿಕ ಸ್ಥಳಗಳಿಗೆ ಭೇಟಿ ಕೊಡುವ ಮನಸ್ಸಾಯಿತು. ಪಾದಯಾತ್ರೆಯ ಮೂಲಕವಾಗಿ ಪ್ರಯಾಣಿಸಲು ತೀರ್ಮಾನಿಸಿದ. ದಾರಿ ಮಧ್ಯ ರಾಜನು ಪ್ರಜೆಗಳ ಕಷ್ಟ ಸುಖವನ್ನು ವಿಚಾರಿಸಿ ಅವರ ಸ್ಥಿತಿಗತಿಯನ್ನು ತಿಳಿಯಲು ಉತ್ಸುಕನಾಗಿದ್ದ.

ರಾಜನ ಲೋಕಸಂಚಾರದ ವಿಚಾರ ತಿಳಿದ ಪ್ರಜೆಗಳು ತುಂಬಾ ಸಂತಸಗೊಂಡರು. ರಾಜನನ್ನು ಎದುರುಗೊಳ್ಳಲು ಪ್ರಜೆಗಳು ಉತ್ಸಾಹಿತರಾದರು. ಅಂದುಕೊಂಡಂತೆಯೇ ರಾಜನನ್ನು ಅವನ ಪ್ರಜೆಗಳು ಬಾರಿ ಸಂಭ್ರಮ ಸಡಗರದಿಂದ ಸ್ವಾಗತಿಸಿದರು. ರಾಜ್ಯದ ಉದ್ದಗಲಕ್ಕೂ ಸಂಚರಿಸಿದ ರಾಜ ತನ್ನ ಜನರು ಸುಖ ಸಂತೋಷವಾಗಿರುವುದನ್ನು ಕಂಡು ಸಂತುಷ್ಟನಾದ. ರಾಜ್ಯ ಸಂಪದ್ಭರಿತವಾಗಿರುವುದನ್ನು ಕಂಡು ರಾಜನ ಮನಸ್ಸು ನಲಿಯಿತು.

ದೀರ್ಘ‌ಪ್ರಯಾಣದಿಂದಾಗಿ ಅವನ ದೇಹ ದಣಿದಿತ್ತು. ವಿಶ್ರಾಂತಿ ತೆಗೆದುಕೊಂಡರೆ ಎಲ್ಲವೂ ಸರಿಹೋಗುತ್ತೆ ಎಂದು ರಾಜ ಅಂದುಕೊಂಡಿದ್ದು ಸುಳ್ಳಾಯಿತು. ಆವಾಗ ಅವನಿಗೆ ತನ್ನ ಕಾಲುಗಳು ನೋಯುತ್ತಿರುವುದು ಗಮನಕ್ಕೆ ಬಂದಿತು. ಪಾದವನ್ನು ನೋಡಿದರೆ ಕೆಂಪಾಗಿ ಬೊಬ್ಬೆಗಳು ಎದ್ದಿದ್ದವು.  ತಾನಾದರೂ ಮರದ ಪಾದರಕ್ಷೆಗಳನ್ನು ಧರಿಸುತ್ತೇನೆ, ಆದರೆ ಪ್ರಜೆಗಳು ಬರಿಗಾಲಲ್ಲಿ ನಡೆಯುತ್ತಾರೆ,

ಅವರ ಪಾಡೇನಾಗಿರಬೇಡ ಎಂದು ಊಹಿಸಿ ರಾಜ ದುಃಖೀತನಾದ. ಆವಾಗ ತನ್ನ ರಾಜ್ಯದಲ್ಲಿ ರಸ್ತೆಗಳು ಸುಸ್ಥಿತಿಯಲ್ಲಿಲ್ಲ ಅನ್ನೋದು ಅರಿವಿಗೆ ಬಂತು. ಅದೇ ಒಂದು ಕೊರಗಾಯಿತು. ಹೇಗಾದರೂ ಮಾಡಿ ರಸ್ತೆಗಳನ್ನು ದುರಸ್ತಿಗೊಳಿಸಬೇಕೆಂದು ತಜ್ಞರ ತಂಡವನ್ನು ಕಟ್ಟಿದ. ರಸ್ತೆಗಳನ್ನು ಮೃದುವಾಗಿ ತಯಾರಿಸಬೇಕೆಂದು ಆಜ್ಞಾಪಿಸಿದ. ಅದಕ್ಕಾಗಿ ಪ್ರಾಣಿಗಳ ಚರ್ಮವನ್ನು ಬಳಸಿ ರಸ್ತೆ ತಯಾರಿಸಬೇಕೆಂದು ಸಲಹೆಯನ್ನೂ ನೀಡಿದ.

ತಜ್ಞರು ಅದು ಕಷ್ಟದ ಕೆಲಸವೆಂದು ಹೇಳಿದಾಗ ರಾಜ ಕೋಪಗೊಂಡು ಎಷ್ಟು ಖರ್ಚಾದರೂ ಪರವಾಗಿಲ್ಲ, ತಿಂಗಳುಗಳಲ್ಲಿ ಚರ್ಮದ ರಸ್ತೆಗಳು ರಾಜ್ಯದಲ್ಲಿ ತಯಾರಾಗಬೇಕೆಂದು ಕರಾರು ವಿಧಿಸಿದ. ಇದನ್ನು ಮೀರಿದರೆ ಶಿಕ್ಷೆ ನೀಡುವುದಾಗಿ ಎಚ್ಚರಿಕೆಯನ್ನೂ ನೀಡಿದ. ಮಂತ್ರಿಗೆ ಚಿಂತೆಯಾಯಿತು. ಈ ಯೋಜನೆ ಅನುಷ್ಠಾನಕ್ಕೆ ಬಂದರೆ ಲಕ್ಷಾಂತರ ಪ್ರಾಣಿಗಳು ಪ್ರಾಣ ಕಳೆದುಕೊಳ್ಳುತ್ತಿದ್ದವು.

ಮತ್ತು ರಾಜ್ಯದ ಬೊಕ್ಕಸವೆಲ್ಲ ರಸ್ತೆ ತಯಾರಿಗೆ ಸುರಿದುಬಿಟ್ಟರೆ ಇನ್ನು ಕೆಲವೇ ವರ್ಷಗಳಲ್ಲಿ ಸುಭಿಕ್ಷವಾಗಿರುವ ರಾಜ್ಯ ದರಿದ್ರವಾಗುವುದು ಖಂಡಿತ ಎನ್ನುವುದು ಮಂತ್ರಿಯ ಚಿಂತೆಗೆ ಕಾರಣವಾಗಿತ್ತು. ಅದಕ್ಕೇ ಹೇಗಾದರೂ ಮಾಡಿ ರಾಜನ ಮನವೊಲಿಸಬೇಕೆಂದು ನಿರ್ಧರಿಸಿದ. ಆದರೆ ರಾಜ ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿ ಮಂತ್ರಿ ಒಂದು ಉಪಾಯವನ್ನು ಹೂಡಿದ. 

ಒಂದು ದಿನ ರಾಜ ಮತ್ತು ಮಂತ್ರಿ ವಾಯುವಿಹಾರಕ್ಕೆ ಹೊರಟಿದ್ದರು. ಅದೇ ಸಮಯಕ್ಕೆ ಜೋರಾಗಿ ಮಳೆ ಬಂದಿತು. ಮಂತ್ರಿ ಸೇವಕರಲ್ಲಿ ರಾಜ ಹೋಗುವ ದಾರಿಯಿಡೀ ಚಪ್ಪರವನ್ನು ತಯಾರಿಸುವಂತೆ ಆಜ್ಞಾಪಿಸಿದ. ರಾಜ ನಗುತ್ತಾ “ಅಲ್ಲಾ ಮಂತ್ರಿವರ್ಯರೇ ನಿಮ್ಮನ್ನು ಬುದ್ಧಿವಂತನೆಂದು ಅಂದುಕೊಂಡಿದ್ದೆ. ನಾವು ಹೋಗುವ ದಾರಿಯಲ್ಲಿ ಚಪ್ಪರ ಕಟ್ಟುವುದು ವೃಥಾ ಖರ್ಚಲ್ಲವೆ? ಊರಿಗೇ ಚಪ್ಪರ ಕಟ್ಟುವುದಕ್ಕೆ ಬದಲಾಗಿ ನಾವು ಚತ್ರಿಯನ್ನು ಹಿಡಿದುಕೊಂಡು ಹೋಗಬಹುದಲ್ಲವೆ?’ ಎಂದು ಹೇಳಿದ.

ಮಂತ್ರಿಗೂ ಇದೇ ಬೇಕಿತ್ತು. “ರಾಜ ಸರಿಯಾಗಿ ಹೇಳಿದಿರಿ ನೀವು. ಆದೇ ರೀತಿ ರಾಜ್ಯವಿಡೀ ಚರ್ಮದ ರಸ್ತೆಯನ್ನು ಮಾಡಿಸುವುದಕ್ಕಿಂತ ಚರ್ಮದ ಪಾದರಕ್ಷೆಯನ್ನು ಧರಿಸಿ ಓಡಾಡುವುದು ಒಳ್ಳೆಯದಲ್ಲವೆ?’ ಎಂದು ಪ್ರಶ್ನಿಸಿದ. ರಾಜನಿಗೆ ಮಂತ್ರಿಯ ಉಪಾಯ ಗೊತ್ತಾಯಿತು. ಮಂತ್ರಿಯ ಜಾಣತನಕ್ಕೆ ತಲೆದೂಗಿದ. ಕೂಡಲೆ ತಜ್ಞರ ತಂಡಕ್ಕೆ ಚರ್ಮದ ರಸ್ತೆಗೆ ಬದಲಾಗಿ ಪಾದರಕ್ಷೆಗಳನ್ನು ತಯಾರಿಸಿ ಪ್ರಜೆಗಳಿಗೆ ಹಂಚುವಂತೆ ಆಜ್ಞಾಪಿಸಿದ.

* ಸುಮನ್‌ ದುಬೈ

ಟಾಪ್ ನ್ಯೂಸ್

3-kmc

Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ

hdk

Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್20

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-kmc

Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ

ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು

ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು

hdk

Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.