ಸೌಲಭ್ಯ ಕಲ್ಪಿಸಲು ಪ್ರಥಮ ಆದ್ಯತೆ
Team Udayavani, Feb 25, 2018, 5:37 PM IST
ಶಹಾಪುರ: ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣದಿಂದ ಕನ್ಯಾಕೋಳೂರ ಗ್ರಾಮ ಸುತ್ತಲಿನ ಅಂದಾಜು 75 ಹೆಕ್ಟೇರ್ ಪ್ರದೇಶ ಜಮೀನಿಗೆ ನೀರಿನ ಸೌಲಭ್ಯ ದೊರೆಯಲಿದೆ ಎಂದು ಶಾಸಕ ಗುರು ಪಾಟೀಲ್ ಶಿರವಾಳ ಹೇಳಿದರು.
ತಾಲೂಕಿನ ಕನ್ಯಾಕೋಳೂರ ಗ್ರಾಮದ ಸರ್ವೇ ನಂ. 393ರ ಬಳಿ ಸೇತುವೆ ಬಾಂದಾರ ನಿರ್ಮಾಣ ಮತ್ತು ನಿಜಶರಣ
ಅಂಬಿಗರ ಚೌಡಯ್ಯನವರ ಭವನ, ಉರ್ದು ಶಾಲಾ ಕೋಣೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ
ಅವರು ಮಾತನಾಡಿದರು.ಚ ಅಂದಾಜು ಕನ್ಯಾಳೂರ ಗ್ರಾಮ ವ್ಯಾಪ್ತಿ ಜನರಿಗೆ ಕುಡಿಯುವ ನೀರು, ರಸ್ತೆ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳ ಮೂಲಕ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣದಿಂದ ಈ ಭಾಗದ ರೈತಾಪಿ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಜಮೀನಿಗೆ ನೀರು ಸೇರಿದಂತೆ, ಈ ಭಾಗದ ಅಂತರಜಲ ಮಟ್ಟ ಹೆಚ್ಚಳವಾಗಲಿದೆ. ಅಂದಾಜು 185 ಎಕರೆ ಪ್ರದೇಶ ಜಮೀನಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಸೇತುವೆ ನಿರ್ಮಾಣದಿಂದ ಕನ್ಯಾಕೋಳೂರ, ಅನವಾರ ಹಯ್ನಾಳ (ಕೆ) ಗ್ರಾಮಗಳ ನಡುವೆ ಜನರ ಸಂಪರ್ಕ ಕಲ್ಪಿಸಲು ಈ ಸೇತುವೆ ನೆರವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಎಂಎಲ್ಸಿ ಅಮಾತೆಪ್ಪ ಕಂದಕೂರ, ಮಲ್ಲಣ್ಣ ಮಡ್ಡಿ, ಲಾಲನಸಾಬ ಖುರೇಶಿ, ಅಯ್ಯಣ್ಣ ಕನ್ಯಾಕೋಳೂರ, ಅಂಬಣ್ಣ ನಾಟೇ ಕಾರ, ಮಂಜುನಾಥ, ರಾಚಣ್ಣ ಕರದಳ್ಳಿ, ಮಹಾದೇವಪ್ಪ ಜಗಶಟ್ಟಿ, ಮಹಾಂತಯ್ಯ ಸ್ವಾಮಿ, ಶಂಕರಗೌಡ, ಅಯ್ಯಣ್ಣ, ಬನ್ನಪ್ಪ ನಾಟೇಕಾರ, ಶಾಂತಪ್ಪ, ಶರಣಪ್ಪ ಶಿರವಾಳ, ಶರಣಬಸ್ಸಪ್ಪಗೌಡ, ರಾಜಶೇಖರ ಮಲ್ಹಾರ, ಸುರೇಶ ಹೊಸಮನಿ, ಮಲ್ಲಪ್ಪ ಬೇವಿನಳ್ಳಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wadgera; ಜಮೀನಿನಲ್ಲಿ ಕಾಣಿಸಿಕೊಂಡು ರೈತರಿಗೆ ಆತಂಕ ತಂದ ಮೊಸಳೆ
Eknath Shindeಗೆ ತಾಕತ್ ಇದ್ದರೆ ನಮ್ಮ ರಾಜ್ಯಕ್ಕೆ ಬರಲಿ: ಸಚಿವ ದರ್ಶನಾಪುರ ಸವಾಲ್
Yadgir: ಸಿಡಿಲು ಬಡಿದು ಕುರಿಗಾಹಿ ಮೃತ್ಯು, 17 ಕುರಿಗಳು ಸಾವು
SSLC Exam Result; ಮತ್ತೆ ಕೊನೆಯ ಸ್ಥಾನ ಪಡೆದ ಯಾದಗಿರಿ..; ಕಾರಣವೇನು?
CD ಮಾಡುವುದರಲ್ಲಿ ಡಿಕೆಶಿ ನುರಿತವರು: ಬಿಜೆಪಿ ಅಭ್ಯರ್ಥಿ ರಾಜುಗೌಡ ವ್ಯಂಗ್ಯ
MUST WATCH
ಹೊಸ ಸೇರ್ಪಡೆ
Preetismita Bhoi: ಕ್ಲೀನ್ ಆ್ಯಂಡ್ ಜರ್ಕ್: ಪ್ರೀತಿಸ್ಮಿತಾಗೆ ವಿಶ್ವ ದಾಖಲೆಯ ಚಿನ್ನ
T20 World Cup: ನೇಪಾಳ ಸ್ಪಿನ್ನರ್ ಲಮಿಚ್ಚಾನೆಗೆ ಅಮೆರಿಕ ವೀಸಾ ಇಲ್ಲ
ಮಲೇಷ್ಯಾ ಬ್ಯಾಡ್ಮಿಂಟನ್: ಸಿಂಧು, ಅಶ್ಮಿತಾ ಕ್ವಾರ್ಟರ್ಫೈನಲಿಗೆ
Mangalore: ಮಟ್ಕಾ ಜೂಜು; ಇಬ್ಬರು ವಶಕ್ಕೆ
M K Stalin: ತಮಿಳುನಾಡಲ್ಲಿ ಗೂಗಲ್ ಪಿಕ್ಸೆಲ್ ಫೋನ್ ತಯಾರಿಕೆ ಆರಂಭ: ಸ್ಟಾಲಿನ್