ಜೋಕಟ್ಟೆ :ಬಗೆಹರಿಯದ ತ್ಯಾಜ್ಯ ವಿಲೇವಾರಿ ಸಮಸ್ಯೆ; ಸಂಚಾರಕ್ಕೆ ತೊಂದರೆ
Team Udayavani, May 15, 2018, 11:07 AM IST
ಜೋಕಟ್ಟೆ: ಜೋಕಟ್ಟೆ ಸಾಗುವ ರೈಲ್ವೇ ಟ್ರ್ಯಾಕ್ ಬಳಿ ಸಾರ್ವಜನಿಕರು ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಬಿಸಾಡುವ ಕಸ ವಿಲೇವಾರಿ ಯಾಗದೇ, ಪರಿಸರ ತುಂಬೆಲ್ಲ ಗಬ್ಬು ವಾಸನೆ ಪಸರಿಸಿದೆ. ಸ್ಥಳೀಯ ಕಂಪೆನಿಗಳ ಕೆಲಸಗಾರರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಿರುವುದು ಮತ್ತಷ್ಟು ಸಮಸ್ಯೆಗೆ ಕಾರಣವಾಗಿದೆ. ರಸ್ತೆ ಬದಿಯೇ ತ್ಯಾಜ್ಯ, ಪ್ಲಾಸ್ಟಿಕ್ ಕಟ್ಟುಗಳು ಸ್ವಾಗತಿಸಿದ್ದು, ಸಂಚಾರಕ್ಕೆ ತೊಂದರೆಯಾಗಿದೆ.
ಈ ಹಿಂದೆ ಉದಯವಾಣಿ ವರದಿ ಮಾಡಿದ ಸಂದರ್ಭ ಒಂದಿಷ್ಟು ಶುಚಿತ್ವಕ್ಕೆ ಆದ್ಯತೆ ನೀಡಲಾಗಿತ್ತಾದರೂ ಈಗ ತ್ಯಾಜ್ಯ ರಾಶಿ ಮತ್ತೆ ಕಂಡು ಬರುತ್ತಿದೆ. ಇನ್ನು ಕೊಳೆತ ಕೋಳಿ, ಕೋಳಿಯ ತ್ಯಾಜ್ಯವನ್ನು ಸಮೀಪವೇ ಇರುವ ನೀರಿಗೆ ಬಿಸಾಡಲಾಗುತ್ತಿದೆ. ಒಂದು ಕಾಲದಲ್ಲಿ ಮೀನು ಹಿಡಿಯುತ್ತಿದ್ದ ನೀರಿನ ಗುಂಡಿಗಳು ಮಲೀನವಾಗಿದ್ದು, ಈಗ ಇಳಿದರೆ ರೋಗ ಬರುವಂತಿದೆ. ತತ್ಕ್ಷಣ ತ್ಯಾಜ್ಯವನ್ನು ಸೂಕ್ತವಾಗಿ ವಿಲೇವಾರಿ ಮಾಡುವ ಮೂಲಕ ಸಾರ್ವಜನಿಕವಾಗಿ ರೋಗಾಣುಗಳು ಹರಡದಂತೆ ಕ್ರಮ ಕೈಗೊಳ್ಳಬೇಕು ಎಂದು ಹೋರಾಟಗಾರ ಇಮ್ತಿಯಾ ಝ್ ಸಂಬಂಧ ಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.