ಚುನಾವಣಾ ನೀತಿ ಸಂಹಿತೆ: ನಿಂತ ಕಾಮಗಾರಿ ಮತ್ತೆ ಪ್ರಾರಂಭ
Team Udayavani, May 15, 2018, 11:30 AM IST
ಮೂಡಬಿದಿರೆ: ದಶಕಗಳಿಂದ ಅಭಿವೃದ್ಧಿಯ ಚಿಂತನೆಯಲ್ಲಿದ್ದ ಶಿರ್ತಾಡಿ- ಹೊಸ್ಮಾರು 10 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿಯನ್ನು ಅಗಲಗೊಳಿಸಿ ಅಭಿವೃದ್ಧಿಗೊಳಿಸುವ ರೂ. 5 ಕೋಟಿಯ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಜನವರಿ 8ರಂದು ಶಂಕುಸ್ಥಾಪನೆ ನೆರವೇರಿಸಿದ್ದರು. ಒಂದಿಷ್ಟು ಕಾಲ ಕಾಮಗಾರಿಯೂ ನಡೆದಿತ್ತು.
ಚುನಾವಣೆ ಘೋಷಣೆಯಾದ ಬಳಿಕ ಕೆಲಸ ಸ್ಥಗಿತಗೊಳಿಸಲಾಗಿತ್ತು. ಈಗ ಚುನಾವಣೆ ಮುಗಿದಿದೆ. ಮತ್ತೆ ಜಲ್ಲಿ ಹಾಕುವ ಕಾರ್ಯ ಪ್ರಾರಂಭವಾಗಿದೆ. ಈ ಹಾದಿಯುದ್ದಕ್ಕೂ ಸಾಕಷ್ಟು ಸಂಖ್ಯೆಯಲ್ಲಿ ಮೋರಿಗಳನ್ನು ನಿರ್ಮಿಸಲು ಸಿದ್ಧತೆ ನಡೆದಿದೆ.