ಕಮಲೇಶ್ಚಂದ್ರ ವರದಿಅನುಷ್ಠಾನಗೊಳಿಸಿ,ತಾರತಮ್ಯ ನಿವಾರಿಸಲುನೌಕರರಒತ್ತಾಯ


Team Udayavani, May 25, 2018, 11:08 AM IST

25-may-5.jpg

ಆಲಂಕಾರು: ಭಾರತೀಯ ಅಂಚೆ ಇಲಾಖೆ ಇಂದಿಗೂ ವಿಶ್ವದಲ್ಲೇ ಮುಂಚೂಣಿಯಲ್ಲಿದೆ. ಆದರೆ, ದೇಶಕ್ಕೆ ಆದಾಯ ತಂದುಕೊಡುವ ಇಲಾಖೆಯ ಆಧಾರ ಸ್ತಂಭವೇ ಅಲುಗಾಡುತ್ತಿದೆ. ಇಲಾಖೆಯ ಉನ್ನತಿಗೆ ಕಾರಣರಾದವರೇ ಹೊಟ್ಟೆಗೆ ಅನ್ನವಿಲ್ಲದೆ ದೇಶದ ಮೂಲೆ ಮೂಲೆಯಲ್ಲಿರುವ ಬಡವರ ಸೇವೆ ಮಾಡಬೇಕಾಗಿದೆ. ತಮ್ಮ ಹಕ್ಕನ್ನು ಮುಷ್ಕರದ ಮೂಲಕವೇ ಪಡೆಯಬೇಕಾಗಿದೆ. ದೇಶದಲ್ಲಿ 2.75 ಲಕ್ಷ ಇಲಾಖೇತರ ನೌಕರರು ಬ್ರಿಟಿಷರು ಬಿಟ್ಟು ಹೋದ ಜೀತಪದ್ಧತಿಯಲ್ಲೇ ದುಡಿಯುವಂತಾಗಿದೆ.

ಜಾರಿಯಾಗದ ವೇತನ ಆಯೋಗ
ಗ್ರಾಮೀಣ ಅಂಚೆ ನೌಕರರ ಕುರಿತು ಕೇಂದ್ರ ಸರಕಾರ ತಾರತಮ್ಯ ಮಾಡುತ್ತಿದೆ. ತನ್ನ ಇಲಾಖೆಯ ನೌಕರರಿಗೆ 2016ರಲ್ಲೇ 7ನೇ ವೇತನ ಆಯೋಗವನ್ನು ಜಾರಿಗೊಳಿಸಿ ವೇತನವನ್ನು ಪರಿಷ್ಕರಿಸಿದೆ. ಆದರೆ ಇಲಾಖೇತರ ನೌಕರರಿಗೆ ವೇತನ ಪರಿಷ್ಕರಿಸದೆ ಸತಾಯಿಸುತ್ತಿದೆ. ನ್ಯಾಯಯುತ ಬೇಡಿಕೆಗಾಗಿ ಪ್ರತ್ಯೇಕ ಕಮಲೇಶ್ಚಂದ್ರ ಸಮಿತಿಯನ್ನು ರಚಿಸಿ ಸರಕಾರಕ್ಕೆ ವರದಿಯನ್ನು ನೀಡಲಾಯಿತು. ಆಯೋಗ ನೀಡಿದ 7ನೇ ವೇತನ ಆಯೋಗದ ವರದಿ ಮಂಡನೆಯಾಗಿ 16 ತಿಂಗಳು ಕಳೆದಿವೆ. ಹಣಕಾಸು ಇಲಾಖೆ ಅನುಮೋದಿಸಿ ಕಡತವನ್ನು ಕ್ಯಾಬಿನೆಟ್‌ ಗೆ ಕಳುಹಿಸಿ ತಿಂಗಳು ಎರಡು ಸಂದರೂ ಇನ್ನೂ ಅಲ್ಲೇ ಕೊಳೆಯುತ್ತಿದೆ.

ಎಲ್ಲವೂ ಹೋರಾಟದ ಫ‌ಲ
ಸ್ವಾತಂತ್ರ್ಯ ಪೂರ್ವದಿಂದಲೇ ಭಾರತದಲ್ಲಿ ಅಂಚೆ ಸೇವೆಗಳಿದ್ದರೂ ಇಲಾಖೆ ಮತ್ತು ಇಲಾಖೇತರ ಸಿಬಂದಿ ಎಂದು ಎರಡು ಬಗೆಯ ನೌಕರರನ್ನು ಸೃಷ್ಟಿಸಿ ದೌರ್ಜನ್ಯ ಎಸಗಿದೆ. 2004ರ ತನಕ ಇಲಾಖೇತರ ಹಾಗೂ ಇಲಾಖೆ ನೌಕರರು ಪ್ರತಿಯೊಂದು ಬೇಡಿಕೆಗೆ ಜಂಟಿಯಾಗಿ ಹೋರಾಟ ನಡೆಸುತ್ತಿದ್ದರು. ಆದರೆ ಇದರ ಫ‌ಲವನ್ನು ಇಲಾಖೆ ನೌಕರರು ಪಡೆಯುತ್ತಿದ್ದರೇ ಹೊರತು ಇಲಾಖೇತರರನ್ನು ವಂಚಿಸಲಾಗುತ್ತಿತ್ತು. 2004ರಲ್ಲಿ ಎಸ್‌.ಎಸ್‌. ಮಹಾದೇವಯ್ಯ ನೇತೃತ್ವದಲ್ಲಿ ಇಲಾಖೇತರ ನೌಕರರ ಪ್ರತ್ಯೇಕ ಸಂಘಟನೆ ಕಟ್ಟುವುದರ ಮೂಲಕ ಇಲಾಖೇತರ ಸಿಬಂದಿಯ ಬೇಡಿಕೆಗಳಿಗೆ ಹೋರಾಟದ ಕಿಚ್ಚು ಹೊತ್ತಿಸಲಾಯಿತು. ಇದರ ಪರಿಣಾಮ ಸಮಾನಾಂತರ ಬೋನಸ್‌, ಎಂಟಿಎಸ್‌ ಪರೀಕ್ಷೆಗಳಿಗೆ ಜಿಡಿಎಸ್‌ ನೌಕರರಿಗೆ ಮಾತ್ರ ಅವಕಾಶ, ಪೆನ್ಶನ್‌, ಪೋಸ್ಟ್‌ಮೆನ್‌ ಪರೀಕ್ಷೆಗೆ ಶೇ. 50 ಜಿಡಿಎಸ್‌ ನೌಕರರಿಗೆ ಅವಕಾಶ, 20 ದಿನ ವಾರ್ಷಿಕ ರಜೆ, ಮಹಿಳಾ ನೌಕರರಿಗೆ ವೆಲ್‌ಫೇರ್‌ ಫ‌ಂಡ್‌ ಮೂಲಕ ಹೆರಿಗೆ ಭತ್ತೆ – ಎಲ್ಲವನ್ನೂ ಹೋರಾಟ, ಮುಷ್ಕರದ ಮೂಲಕವೇ ಪಡೆಯಬೇಕಾಯಿತು. 

ಉಳಿತಾಯಕ್ಕೆ ಇಲ್ಲಿದೆ ಉಪಾಯ
ಈ ನೌಕರರು ರೆಗ್ಯುಲರ್‌ ನೌಕರರಿಗೆ ಸಮಾನರಲ್ಲ. ಓರ್ವ ಇಲಾಖೇತರ ಸಿಬಂದಿ ತನ್ನ ಜೀವನ ನಿರ್ವಹಣೆಗಾಗಿ ಇತರ ಆದಾಯದ ಮೂಲವನ್ನು ಹೊಂದಿರುತ್ತಾನೆ ಎಂದು ಇಲಾಖೆ ಸಬೂಬು ಹೇಳಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದೆ. ಇಲಾಖೆ ಇವರಿಗೆ ಬಿಡಿಗಾಸು ನೀಡಿ ಸಾಕಷ್ಟು ಉಳಿತಾಯ ಮಾಡುತ್ತಿದೆ ಎಂಬ ಮನೋಭಾವನೆ ಬೆಳೆಸಿಕೊಂಡಿದೆ.

ಹಾಗಾದರೆ ಇಲಾಖೇತರ ನೌಕರರ ಮಾದರಿ ಇಲಾಖೇತರ ಪೋಸ್ಟ್‌ ಮಾಸ್ಟರ್‌ ಜನರಲ್‌, ಇಲಾಖೇತರ ಪೋಸ್ಟಲ್‌ ಡೈರಡಕ್ಟರ್‌ ಹುದ್ದೆ ಏಕೆ ಸೃಷ್ಟಿಸಬಾರದು? ಇಂತಹ ಕ್ರಮಗಳಿಂದ ಇಲಾಖೆಗೆ ಇನ್ನಷ್ಟು ಕೋಟಿ ರೂ. ಉಳಿತಾಯವಾಗುವ ಸಾಧ್ಯತೆಯಿಲ್ಲವೇ? ಅಂಚೆ ಇಲಾಖೆಯನ್ನೇ ಸಂಪೂರ್ಣ ಇಲಾಖೇತರ ಸಿಬಂದಿಯಾಗಿ ಪರಿವರ್ತಿಸಿದರೆ ಹೇಗೆ? ದೇಶದ ಎಲ್ಲ ಇಲಾಖೆಗಳಲ್ಲೂ ಇದೇ ಮಾದರಿ ಅನುಷ್ಠಾನವಾದರೆ ದೇಶ ಉದ್ಧಾರ ಸಾಧ್ಯವಿಲ್ಲವೇ? ಎಂದು ಇಲಾಖೇತರ ನೌಕರರು ನೋವಿನಿಂದಲೇ ಪ್ರಶ್ನಿಸುತ್ತಿದ್ದಾರೆ.

ಸದಾನಂದ ಆಲಂಕಾರು

ಟಾಪ್ ನ್ಯೂಸ್

Revanna 2

Parappana Agrahara Central Prison; ಸಾಮಾನ್ಯರಂತೆ ದಿನ ಕಳೆದ ರೇವಣ್ಣ

sensex

Election result ಅನಿಶ್ಚಿತತೆ: 1,062 ಅಂಕ ಕುಸಿದ ಸೆನ್ಸೆಕ್ಸ್‌

1-wqeeqw

K. Vasantha Bangera; ಬೆಳ್ತಂಗಡಿಯ ಬಂಗಾರ ಕೇದೆಯ ಮಣ್ಣಲ್ಲಿ ಲೀನ; ಸಕಲ ಸರಕಾರಿ ಗೌರವ

1-qwewqwqe

IPL;ಪಂಜಾಬ್ ವಿರುದ್ಧ 60 ರನ್ ಗಳ ಗೆಲುವು ಸಾಧಿಸಿದ ಆರ್ ಸಿಬಿ: ಪ್ಲೇ ಆಫ್ ಆಸೆ ಜೀವಂತ

suicide

Heatstroke; ಬಸವಕಲ್ಯಾಣದಲ್ಲಿ ಬಿಸಿಲಿನ ಝಳಕ್ಕೆ ಕಾರ್ಮಿಕ‌ ಸಾವು‌?

1-ww-ewq

SSLC Result; ಜ್ಞಾನಸುಧಾ ಕಾರ್ಕಳ ಶೇ. 100 ಫ‌ಲಿತಾಂಶ: ಸಹನಾ ರಾಜ್ಯಕ್ಕೆ ತೃತೀಯ

Chikkaballapur: ಎಸ್ಸೆಸ್ಸೆಲ್ಸಿ ಫೇಲ್; ವಿದ್ಯಾರ್ಥಿನಿ ನೇಣಿಗೆ ಶರಣು

Chikkaballapur: ಎಸ್ಸೆಸ್ಸೆಲ್ಸಿ ಫೇಲ್; ವಿದ್ಯಾರ್ಥಿನಿ ನೇಣಿಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Revanna 2

Parappana Agrahara Central Prison; ಸಾಮಾನ್ಯರಂತೆ ದಿನ ಕಳೆದ ರೇವಣ್ಣ

1-wqewee

Saudi Arabia; ಭೂಮಿ ನೀಡಲು ಒಪ್ಪದಿದ್ದರೆ ಹತ್ಯೆ: ಬಿಬಿಸಿ ವರದಿ

MOdi (3)

Hate speech ಪ್ರಚಾರ: ಮೋದಿ ವಿರುದ್ಧ ಕ್ರಮಕ್ಕೆ ಸುಪ್ರೀಂನಲ್ಲಿ ರಿಟ್‌ ಅರ್ಜಿ

sensex

Election result ಅನಿಶ್ಚಿತತೆ: 1,062 ಅಂಕ ಕುಸಿದ ಸೆನ್ಸೆಕ್ಸ್‌

Himanth-Bisw

BJP ಗೆದ್ದರೆ 5 ಲಕ್ಷ ಜನರಿಗೆ ಅಯೋಧ್ಯೆ ರಾಮನ ದರ್ಶನ: ಹಿಮಂತ್‌ ಬಿಸ್ವಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.