ಭೂತಾನ್‌ನಲ್ಲಿ  ಸ್ಮರಣೀಯ ಗೌರವ


Team Udayavani, May 27, 2018, 4:30 PM IST

27-may-18.jpg

ಬೆಳ್ತಂಗಡಿ : ನೆರೆಯ ರಾಷ್ಟ್ರ ಭೂತಾನ್‌ನಲ್ಲಿ ಮೇ 2 ರಂದು ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಮೂಲದ ಶಿಕ್ಷಕ ಎಂ.ಎಸ್‌. ರಮೇಶ್‌ ರಾವ್‌ ಸಹಿತ ದೇಶದ 43 ಮಂದಿ ಶಿಕ್ಷಕರನ್ನು ಗೌರವಿಸಲಾಗಿದೆ. ಇದರಲ್ಲಿ ಕೇರಳದ 28 ಮಂದಿ ಶಿಕ್ಷಕರೂ ಸೇರಿದ್ದಾರೆ. ಉಳಿದವರೆಲ್ಲರೂ ಉತ್ತರ ಭಾರತೀಯರು. ರಾಜ್ಯದಿಂದ ಭಾಗವಹಿಸಿದ ಏಕೈಕ ಪ್ರತಿನಿಧಿ ಎಂ.ಎಸ್‌. ರಮೇಶ್‌ ರಾವ್‌ ಎಂಬುದು ವಿಶೇಷ. ಅವರು ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

ಭಾರತ-ಭೂತಾನ್‌ ದೇಶಗಳ ಮಧುರ ಬಾಂಧವ್ಯದ 50ನೇ ವರ್ಷಾಚರಣೆ ಹಿನ್ನೆಲೆ 5ನೇ ರಾಜ ಜಿಗ್ಮಿ ಗೇಸರ್‌ ನಾಮ್‌ಗೆಲ್‌
ವಾಂಗ್‌ಚುಕ್‌ ಆದೇಶದಂತೆ, ಭಾರತದಿಂದ 1980ರಿಂದ 90ರ ವರೆಗೆ ಭೂತಾನ್‌ಗೆ ತೆರಳಿ 20ರಿಂದ 30 ವರ್ಷ ಸೇವೆ ಸಲ್ಲಿಸಿದ ಶಿಕ್ಷಕರನ್ನು ಅಲ್ಲಿನ ಪ್ರಧಾನಿ ಷೆಲಿಂಗ್‌ ತೊಟ್ಗಿ  ಮೇ 2ರಂದು ಚಾಮ್‌ಲಿಮಿತಾಂಗೆ ಗ್ರೌಂಡ್‌ನ‌ಲ್ಲಿ ಗುರುತಿಸಿ, ಪ್ರಮಾಣ ಪತ್ರ, ಸ್ಮರಣಿಕೆ ನೀಡಿ ವಿಶೇಷವಾಗಿ ಗೌರವಿಸಿದ್ದಾರೆ.

20 ವರ್ಷಗಳ ಸೇವೆ
1983ರಲ್ಲಿ ಮಂಗಳೂರಿನಲ್ಲಿ ಬಿ.ಎಡ್‌. ಶಿಕ್ಷಣ ಮುಗಿಸಿದ ಬಳಿಕ ರಮೇಶ್‌ ಅವರು ವಿವಿಧೆಡೆ ಕೆಲಸಗಳಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಚೆನ್ನೈನಲ್ಲಿ ಸಂದರ್ಶನ ಪ್ರಕ್ರಿಯೆ ನಡೆದು ಭೂತಾನ್‌ನಲ್ಲಿ ಕೆಲಸ ಲಭಿಸಿತು. ಆ ವೇಳೆಗೆ 20ರ ಹರೆಯದವರಾದ್ದರಿಂದ ಭೂತಾನ್‌ಗೆ ತೆರಳಿದರು. ಆ ವೇಳೆಗೆ 3 ರೈಲುಗಳನ್ನು ಬಳಸಿಕೊಂಡು ತೆರಳಬೇಕಿತ್ತು. ಆರಂಭದಲ್ಲಿ ಸಂಪರ್ಕ ಎನ್ನುವುದೇ ಅಪರೂಪವಾಗಿತ್ತು. ಸಂದೇಶಗಳನ್ನು ಟೆಲಿಗ್ರಾಂ ಮೂಲಕ ಕಳುಹಿಸಬೇಕಾಗಿದ್ದು, ಅದೂ ಸಮರ್ಪಕವಾಗಿರಲಿಲ್ಲ. ಆರಂಭದಲ್ಲಿ ಪ್ರಾಥಮಿಕ ಶಾಲೆಯಲ್ಲಿ
ಶಿಕ್ಷಕನಾಗಿ ಉದ್ಯೋಗ ಪ್ರಾರಂಭಿಸಿದ್ದು, ಬಳಿಕ ಪ್ರೌಢಶಾಲೆಗಳಲ್ಲಿ ಕಾರ್ಯ ನಿರ್ವಹಿಸಿದೆ. 2003ರ ವರೆಗೆ 3 ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದು, ವೈಯಕ್ತಿಕ ಕಾರಣಗಳಿಂದ ಭಾರತಕ್ಕೆ ಹಿಂದಿರುಗಿದೆ ಎನ್ನುತ್ತಾರೆ ರಮೇಶ್‌ ರಾವ್‌.

ಕಾಡುಪ್ರಾಣಿಗಳ ಭೀತಿ
ಭೂತಾನ್‌ನಲ್ಲಿ ಶಾಲೆಗೆ ಮಕ್ಕಳನ್ನು ಹೆತ್ತವರು ಗುಡ್ಡಗಾಡು ಹತ್ತಿಕೊಂಡು, ನದಿ-ತೊರೆಗಳನ್ನು ದಾಟಿಕೊಂಡು ಬರಬೇಕಾಗಿತ್ತು. ಈ ವೇಳೆಗೆ ಕಾಡು ಪ್ರಾಣಿಗಳೂ ಹೆಚ್ಚಾಗಿರುವುದರಿಂದ ಜಾಗ್ರತೆ ವಹಿಸಬೇಕಾಗಿತ್ತು. ಹಿಮಾಲಯ ಸಮೀಪವಿರುವು ದರಿಂದ ಚಳಿಯ ಪ್ರಮಾಣವೂ ಹೆಚ್ಚಾಗಿದ್ದು, ಮೈನಸ್‌ ಡಿಗ್ರಿಯಲ್ಲಿ ವಾತಾವರಣ ಇರುತ್ತಿದ್ದುದರಿಂದ ಹೆಚ್ಚಿನ ಸಮಸ್ಯೆ ಉಂಟಾಗುತ್ತಿತ್ತು. ಆಹಾರವೂ ಹೆಚ್ಚಾಗಿ ಮಾಂಸಾಹಾರ. ನಾನು ಸಸ್ಯಾಹಾರಿಯಾಗಿದ್ದು, ಮನೆಯಲ್ಲಿಯೇ ತಯಾರಿಸಿ ತಿನ್ನಬೇಕಾಗಿತ್ತು.

ಭೂತಾನ್‌ಗೂ ತರಿಸುತ್ತಿದ್ದರು ತರಂಗ, ಉದಯವಾಣಿ
ಉದಯವಾಣಿ ಹಾಗೂ ತರಂಗವನ್ನು ಅಲ್ಲೂ ಓದುತ್ತಿದ್ದೆ. ಆದರೆ ಅಲ್ಲಿಗೆ ತರಿಸುವ ವೇಳೆಗೆ 20 ದಿನಗಳಿಗಿಂತಲೂ ಹೆಚ್ಚಿನ ಸಮಯ ಬೇಕಾಗಿತ್ತು. ಆದರೂ ಊರಿನ ಸುದ್ದಿಗಳನ್ನು ಅರಿಯುವ ದೃಷ್ಟಿಯಿಂದ ಓದುತ್ತಿದ್ದೆ.

ಸಂತೋಷದ ಕ್ಷಣ
ತಮ್ಮ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರಿಯಾದುದನ್ನು ಸ್ಮರಿಸಿ ಭಾರತೀಯ ಶಿಕ್ಷಕರನ್ನು ಭೂತಾನ್‌ನಲ್ಲಿ ಗುರುತಿಸಿದ್ದು ಸಂತೋಷದ ಕ್ಷಣ. ಅನಿವಾರ್ಯವಾಗಿ ಉದ್ಯೋಗದ ದೃಷ್ಟಿಯಿಂದ ತೆರಳಿದ್ದೆ. ಪ್ರಥಮ ಬಾರಿಗೆ ತೆರಳುವ ವೇಳೆಗೆ ಭೂತಾನ್‌ ಅಭಿವೃದ್ಧಿ ದೃಷ್ಟಿಯಿಂದ ಹಿಂದುಳಿದಿದ್ದು, ಇದೀಗ ಸ್ವಾವಲಂಬಿಯಾಗುವತ್ತ ಮುಂದುವರಿಯುತ್ತಿದೆ. ಅಲ್ಲಿ ಕಾರ್ಯ ನಿರ್ವಹಿಸುವ ಭಾರತೀಯ ಶಿಕ್ಷಕರ ಸಂಖ್ಯೆ ನಾನು ಇರುವ ವೇಳೆಗೆ ಸುಮಾರು 3 ಸಾವಿರದಷ್ಟಿದ್ದು, ಇದೀಗ 143 ಮಂದಿ ಇರುವ ಮಟ್ಟಿಗೆ ಬಂದಿದೆ. ಅಷ್ಟರ ಮಟ್ಟಿಗೆ
ಸ್ಥಳೀಯರಿಗೆ ಆದ್ಯತೆ ನೀಡಲಾಗುತ್ತಿದೆ. 
– ಎಂ.ಎಸ್‌. ರಮೇಶ್‌ ರಾವ್‌
ಶಿಕ್ಷಕರು

ಟಾಪ್ ನ್ಯೂಸ್

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.