ಬಾಬುಗುಡ್ಡೆ ರಸ್ತೆಯ ದುರಸ್ತಿ ಕಾರ್ಯ
Team Udayavani, Jun 13, 2018, 1:03 PM IST
ಮಹಾನಗರ: ಅತ್ತಾವರ ವಾರ್ಡಿನ ಬಾಬುಗುಡ್ಡೆಯ ರಸ್ತೆ ಯಲ್ಲಿ ಮಣ್ಣು ತುಂಬಿ ವಾಹನ ಹಾಗೂ ಪಾದಾಚಾರಿಗಳ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಈ ಬಗ್ಗೆ ಸಾರ್ವಜನಿಕರ ದೂರು ಸ್ವೀಕರಿಸಿದ ದ.ಕ. ಜಿಲ್ಲಾ ಬಿ.ಜೆ.ಪಿ. ಸ್ಲಂ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಚೇತಕ್ ಪೂಜಾರಿ ಅವರು ಮಂಗಳೂರು ಮ.ನ.ಪಾ. ಆಯುಕ್ತರ ಗಮನಕ್ಕೆ ತಂದು ತುರ್ತಾಗಿ ಈ ಮಣ್ಣನ್ನು ತೆರವುಮಾಡುವಂತೆ ಮನವರಿಕೆ ಮಾಡಿದರು.
ಇದಕ್ಕೆ ಸ್ಪಂದಿಸಿದ ಮ.ನ.ಪಾ. ಅಧಿಕಾರಿಗಳು ಎರಡು ದಿನದಲ್ಲಿ ಅಲ್ಲಿ ತುಂಬಿಕೊಂಡಿದ್ದ ಮಣ್ಣನ್ನೆಲ್ಲಾ ತೆರವು ಮಾಡಿ ಮುಕ್ತ ಸಂಚಾರಕ್ಕೆ ವ್ಯವಸ್ಥೆ ಮಾಡಿದರು. ಈ ಸಂದರ್ಭದಲ್ಲಿ ವಾರ್ಡಿನ ಪ್ರಮುಖರಾದ ನಾಗೇಶ್ ಪೂಜಾರಿ, ದಿನೇಶ್ ಕುಮಾರ್, ಪ್ರವೀಣ್ ಮಾಬಿನ್ ಮೊದಲಾದವರು ಉಪಸ್ಥಿತರಿದ್ದರು.