ಕೋಗಿಲೆ ಮಾತಿಗೆ ಪೆಚ್ಚಾಯ್ತು ಗೂಬೆ


Team Udayavani, Jun 14, 2018, 6:00 AM IST

m-11.jpg

ಒಂದು ದಿನ ಗೂಬೆ ಅರ್ಧ ಕಣ್ಣು ಮುಚ್ಚಿಕೊಂಡು ಏನೋ ಯೋಚನೆ ಮಾಡುತ್ತಿರುವಂತೆ ಕುಳಿತಿತ್ತು. ಆಗ ಪಕ್ಕದ ಕಾಡಿನಿಂದ ಬಂದ ಕೋಗಿಲೆಯೊಂದು ಅದೇ ಮರದ ಇನ್ನೊಂದು ಕೊಂಬೆಯಲ್ಲಿ ಕುಳಿತು ತನ್ನ ಇಂಪಾದ ಧ್ವನಿಯಲ್ಲಿ ಹಾಡಲಾರಂಭಿಸಿತು.

ಒಂದೂರಿನಲ್ಲಿ ಒಂದು ದೊಡ್ಡ ಗ್ರಂಥಾಲಯವಿತ್ತು. ಗೂಬೆಯೊಂದು ಅಲ್ಲಿಯೇ ವಾಸವಾಗಿತ್ತು. ಗೂಬೆ ದಿನವೂ ಪುಸ್ತಕ ಓದಿಕೊಂಡು ಮಹಾಜ್ಞಾನಿ ಎಂದು ಹೆಸರು ಮಾಡಿತ್ತು. ಊರಿನಲ್ಲಿ ಏನು ತೊಂದರೆ ಬಂದರೂ ಗೂಬೆ ಪರಿಹಾರ ಹೇಳುತ್ತಿತ್ತು. ಈ ಕಾರಣಕ್ಕೆ ಲೋಕಜ್ಞಾನದಲ್ಲಿ ನನ್ನನ್ನು ಮೀರಿಸುವವರಿಲ್ಲಾ ಎಂದು ಅದು ಬೀಗುತ್ತಿತ್ತು. ಕಾಡಿನಲ್ಲಿ ತನಗಿಂತ ಬುದ್ಧಿವಂತ ಜೀವಿಗಳಿಲ್ಲ ಎಂದು ಅದು ಭಾವಿಸಿತ್ತು.

ಯಾವಾಗಲೂ ಓದಿ ಓದಿ ಮರದ ಕೊಂಬೆಯ ಮೇಲೆ ಏನೋ ಆಳವಾದ ಯೋಚನೆಯಲ್ಲಿರುವಂತೆ ಕೂರುತಿತ್ತು. ಬೇರೆ ಪ್ರಾಣಿ ಪಕ್ಷಿಗಳು ಮಾತನಾಡಿಸಿದರೂ ಪ್ರತಿಕ್ರಿಯಿಸುತ್ತಿರಲಿಲ್ಲ. ತಾನು ಅವರೊಂದಿಗೆ ಮಾತನಾಡಿದರೆ ತನ್ನ ಬೆಲೆ ಕಡಿಮೆಯಾಗುವುದೆಂದು ಮುಖ ತಿರುಗಿಸುತ್ತಿತ್ತು. ಒಂದು ದಿನ ಗೂಬೆ ಅರ್ಧ ಕಣ್ಣು ಮುಚ್ಚಿಕೊಂಡು ಏನೋ ಯೋಚನೆ ಮಾಡುತ್ತಿರುವಂತೆ ಕುಳಿತಿತ್ತು. ಆಗ ಪಕ್ಕದ ಕಾಡಿನಿಂದ ಬಂದ ಕೋಗಿಲೆಯೊಂದು ಅದೇ ಮರದ ಇನ್ನೊಂದು ಕೊಂಬೆಯಲ್ಲಿ ಕುಳಿತು ತನ್ನ ಇಂಪಾದ ಧ್ವನಿಯಲ್ಲಿ ಹಾಡಲಾರಂಭಿಸಿತು. ಅರ್ಧ ಕಣ್ಣು ತೆರೆದ ಗೂಬೆ ಕೋಗಿಲೆಯನ್ನು ಕುರಿತು, “ಓ ಕೋಗಿಲೆಯೆ, ನಿನ್ನ ಕರ್ಕಶ ಹಾಡನ್ನು ಸ್ವಲ್ಪ ನಿಲ್ಲಿಸುತ್ತೀಯಾ? ನಾನು ಏನೋ ಗಹನವಾದ ವಿಚಾರದ ಬಗ್ಗೆ ಯೋಚಿಸುತ್ತಿರುವೆ. ನಿನ್ನ ಈ ಹಾಡಿನಿಂದ ನನ್ನ ಯೋಚನಾ ಲಹರಿಗೆ ತೊಂದರೆಯಾಗುತ್ತಿದೆ’ ಎಂದಿತು. 

ಇದರಿಂದ ಕೋಪಗೊಂಡ ಕೋಗಿಲೆ, “ನನ್ನ ಹಾಡು ನಿನಗೆ ಕರ್ಕಶವಾಗಿ ಕೇಳಿಸುತ್ತಿದೆಯೆ? ನಿನಗೆ ಪ್ರಪಂಚ ಜ್ಞಾನವಿಲ್ಲವೆನ್ನಿಸುತ್ತಿದೆ. ಮೂರ್ಖ ಗೂಬೆಯೇ, ಬರೀ ಪುಸ್ತಕಗಳನ್ನು ಓದಿದರೆ ಸಾಲದು. ಬರೀ ಪುಸ್ತಕಗಳನ್ನು ಓದಿ ಕಣ್ಣುಮುಚ್ಚಿ ಕುಳಿತರೆ ಏನೂ ಆಗುವುದಿಲ್ಲ. ಹೊರಗಿನ ಪ್ರಪಂಚ ಜ್ಞಾನವೂ ಇರಬೇಕು. ನೀನು ಪುಸ್ತಕದಲ್ಲಿ ಕಲಿತದ್ದೆಲ್ಲಾ ಸಹಾಯಕ್ಕೆ ಬರೋದು ಹೊರ ಪ್ರಪಂಚದಲ್ಲಿ ಆ ವಿಚಾರಗಳನ್ನು ಅಳವಡಿಸಿದಾಗ ಮಾತ್ರ.’ ಎಂದಿತು. ಗೂಬೆಗೆ ಏನು ಹೇಳಬೇಕೆಂದು ತೋಚಲೇ ಇಲ್ಲ. ಪಂಡಿತನೆಂದು ಬೀಗುತ್ತಿದ್ದ ಗೂಬೆಯ ಬಾಯಿ ಮುಚ್ಚಿಸಿದ ಕೋಗಿಲೆಯತ್ತ ಎಲ್ಲರೂ ಆಶ್ಚರ್ಯದ ನೋಟ ಬೀರಿದವು. ಕೋಗಿಲೆ ಮಾತನ್ನು ಮುಂದುವರಿಸಿತು “ನನ್ನ ಗಾನಕ್ಕೆ ಮರುಳಾಗದವರಿÇÉ. ವಸಂತ ಮಾಸದಲ್ಲಿ ನನ್ನ ಧ್ವನಿಯನ್ನು ಕೇಳಲು ಜನ ಕಾತರರಾಗಿ ಕಾಯುತ್ತಿರುತ್ತಾರೆ. ಅನೇಕ ಕವಿಗಳು, ಪಂಡಿತರು ನನ್ನ ಕುರಿತೇ ಕವನಗಳನ್ನು ರಚಿಸಿ¨ªಾರೆ. ನನ್ನ ಮಧುರವಾದ ಧ್ವನಿಯನ್ನು ನಿಜವಾಗಲೂ ಹೊಗಳಲು ಬಹಳ ಮಂದಿ ಇದ್ದಾರೆ.’ ಎನ್ನುತ್ತಾ ಹಾರಿಹೋಯಿತು. ಗೂಬೆ ಪೆಚ್ಚಾಗಿ ಕೂತಿತು. ಆವತ್ತಿನಿಂದ ಜನರೊಂದಿಗೆ ಬೆರೆಯಲು ಪ್ರಾರಂಭಿಸಿತು. ಕಾಡಿನ ಪ್ರಾಣಿಗಳು ಗೂಬೆಯ ಮನ ಪರಿವರ್ತನೆ ಮಾಡಿದ ಆ ಕೋಗಿಲೆಗೆ ಅಭಿನಂದನೆ ಸಲ್ಲಿಸಿದವು.

ಪ್ರಕಾಶ್‌ ಕೆ.ನಾಡಿಗ್‌

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.