ಅಪ್ಪ ನನಗೆ ATM ಮಷಿನ್ ಆಗಿರಲಿಲ್ಲ, ಕಾಳಜಿಯ ಚಿಲುಮೆಯಾಗಿದ್ದರು!


Team Udayavani, Jun 16, 2018, 4:35 PM IST

amrutha-student.jpg

ನೆನಪಿನಂಗಳದಲ್ಲಿ ಮೊಗೆದಷ್ಟು ಇದೆ ನನ್ನಪ್ಪ ನೀಡಿದ ಸಣ್ಣ ಪುಟ್ಟ ಖುಷಿಗಳ ದಿಬ್ಬಣ. ನಾನು ಸೈಕಲ್ ಪೆಡಲ್ ತುಳಿದದ್ದೇ ಇಪ್ಪತ್ತರ ಹರೆಯದಲ್ಲಿ. ಚಿಕ್ಕವಳಿದ್ದಾಗ ಸೈಕಲ್ ಸವಾರಿ ಇಲ್ಲದಿದ್ದರೇನಂತೆ, ಅಪ್ಪನ ಹೆಗಲ ಮೇಲೆ ಕುಳಿತು ನವರಾತ್ರಿ ದೇವಿ ನೋಡಲು ಹೋದ ಆ ಸಿಹಿ ಕ್ಷಣವಿನ್ನೂ ಸ್ಮೃತಿಪಟಲದಲ್ಲಿದೆ. ಅಷ್ಟಕ್ಕೂ ನಾನೆಂದೂ ಸೈಕಲ್ ತುಳಿಯಬೇಕೆಂದು ಬಯಸಿದೆನೋ, ಆಗ ನನ್ನ ಐವತ್ತರ ಅಪ್ಪ, ಈ ಇಪ್ಪತ್ತರ ಕೋಣನಿಗೆ ಸೈಕಲ್ ಕಲಿಸಿಯೇ ಬಿಟ್ಟರು.

ಚಿಕ್ಕ ಮಗುವಿದ್ದಾಗಿನಿಂದ ಇಂದಿನವರೆಗೂ ತಾವು ಉಣ್ಣುವಾಗ ಒಂದು ತುತ್ತಾದರೂ ತಿನ್ನಿಸುವ ನನ್ನಪ್ಪನೇ ನನ್ನ ನಳಪಾಕ ಪ್ರಯೋಗಕ್ಕೆ ಮೊದಲ ಬಲಿಪಶು! ಅಮ್ಮ ಮನೆಯಲ್ಲಿ ಇಲ್ಲದ ಆ ಒಂದು ತಿಂಗಳು ನಾ ಮಾಡಿದ ಉಪ್ಪಿಲ್ಲದ, ಖಾರ ಹುಳಿಯ ಗೌಜೇ ಇಲ್ಲದ ಆ ಸಪ್ಪೆ ಅಡುಗೆಯನ್ನು ತುಟಿ ಪಿಟಕ್ ಎನ್ನದೇ ಪ್ರೀತಿಯಿಂದ ಚಪ್ಪರಿಸಿ ತಿಂದದ್ದು, ಆ ನಾಲಗೆ ಸಹಿಸಿದ್ದು, ಗಂಟಲಿಗೆ ತುರುಕಿಸಿಕೊಂಡದ್ದು ತನ್ನ ಮಗಳು ಮಾಡಿದ ಅಡುಗೆ ಎಂಬ ಮಮತೆಯಿಂದ. “ಪುಟ್ಟ” ಅಡುಗೆ ರುಚಿಯಾಯಿತು ಎಂದಾಡುವ ಆ ಒಂದು ಸುಳ್ಳು, ತನ್ನ ಮಗಳ ಮುಖದಲ್ಲಿ ಕಿರುನಗೆ ಮೂಡಿಸುತ್ತದೆಯೆಂಬ ಒಂದೇ ಕಾರಣಕ್ಕೆ, ಅಪ್ಪ ಪದೇ ಪದೇ ಹೇಳುತ್ತಿದ್ದ ಆ ಸುಳ್ಳೇ ನಿಜಕ್ಕೂ ರುಚಿಯಾಗಿತ್ತು..

ಅಷ್ಟಕ್ಕೂ ಅಪ್ಪನ ಕೊಂಗಾಟವೆಷ್ಟು ಚಂದವೋ, ಅಂದಿನ ಬೆನ್ನು ಬಿಸಿ ಮಾಡುವ ಪೆಟ್ಟು, ಇಂದಿನ ಕಿವಿ ತಂಪು ಮಾಡುವ ಬೈಗುಳವೂ ಅಷ್ಟೇ ಚೆಂದ. ಶಾಲಾ ವಾರ್ಷಿಕೋತ್ಸವದಲ್ಲಿ ನಾನ್ ಕುಣಿದು ಕುಪ್ಪಳಿಸಿದ್ದನ್ನು ಕಂಡವರಲ್ಲಿ ನನ್ನಪ್ಪ. ಬೇರೆಯವರನ್ನು ಕಂಡಾಗ ಒಮ್ಮೊಮ್ಮೆ ಅನ್ನಿಸಿದ್ದುಂಟು, ನನ್ನಪ್ಪ ಯಾಕೆ ಹೀಗೆ? ಆದರೆ ಅಂದು ಉತ್ತರ ಸಿಗದ ಈ ಪ್ರಶ್ನೆಗೆ ಇಂದು ಉತ್ತರ ಸಿಕ್ಕಿದೆ.

ನಾವು ಚಾಪೆಯಿಂದೇಳುವ ಮುನ್ನವೇ ಮನೆಬಿಟ್ಟು, ರಾತ್ರಿ ಚಾಪೆಗೊರಗುವ ಹೊತ್ತಿಗೆ ಮನೆಗೆ ಬರುತ್ತಿದ್ದ ಆ ಶ್ರಮಿಕ ಜೀವಕ್ಕೆ ಹೆಂಡತಿ, ಮೂರು ಮಕ್ಕಳ ಹೊಟ್ಟೆ ತುಂಬುವ ಚಿಂತೆ ಬಿಟ್ಟರೆ ಬೇರೆಲ್ಲಿಯ ಆಲೋಚನೆ? ನಾವೇನನ್ನು ಓದುತ್ತಿದ್ದೇವೆಂದು ಹೇಳಲೂ ಬಾರದ ನನ್ನಪ್ಪನಿಗೆ, ನಮ್ಮಿಷ್ಟದಂತೆಯೇ ಓದಿಸುವುದು, ಆ ಓದಿಗಾಗಿ ಮಾಡಿದ ಸಾಲ ತುಂಬುವುದೊಂದೇ ಪ್ರಪಂಚ.

ಹೀಗಿದ್ದೂ, ಬದುಕಲ್ಲಿ ಖುಷಿಗೆ ಕಿಂಚಿತ್ತೂ ಕೊರತೆಯಿಲ್ಲದಂತೆ ಸಾಕಿದ ನನ್ನಪ್ಪ ಬಣ್ಣ, ಬಣ್ಣದ ಫ್ಯಾಶನೇಬಲ್ ಬಟ್ಟೆಗಳನ್ನೋ, ಟ್ರೆಂಡಿ ಸ್ಮಾರ್ಟ್ ಫೋನ್, ಐ ಫೋನ್, ಟೂ ವೀಲರ್ ಗಳನ್ನೋ ಕೊಡಿಸಿದವರಲ್ಲ. ಬದಲಾಗಿ ಈ ಎಲ್ಲಾ ಭೋಗಿಕ ವಸ್ತುಗಳಿಲ್ಲದೆಯೂ ನೆಮ್ಮದಿಯ ಬದುಕ ಕಟ್ಟಿಕೊಳ್ಳುವ ಕಲೆಯನ್ನು ಕಲಿಸಿದವರು ಹೌದು. ಅವರು ನನ್ನ ಪಾಲಿಗೆ ಎಟಿಎಂ ಮಷಿನ್ ಅಲ್ಲ, ಕಾಳಜಿಯ ಚಿಲುಮೆ. ಆತ ನನಗಾಗಿ ಬೆವರಿಳಿಸಿದ್ದು, ದಣಿದಿದ್ದು, ಸಹಿಸಿದ್ದು, ನನ್ನ ಹಸಿದ ಹೊಟ್ಟೆಯ ತಣಿಸಿದ್ದು, ನಾ ತಪ್ಪಿದಾಗ ಮುನಿಸಿದ್ದು, ನನ್ನ ಖುಷಿಯ ಪಾಲುದಾರನಾಗಿದ್ದು, ನನ್ನ ನೋವಿಗೆ ಮರುಗಿದ್ದು, ತನ್ಮೂಲಕ ನನ್ನ ಬದುಕ ರೂಪಿಸುವಲ್ಲಿ ಶ್ರಮಿಸಿದ ನನ್ನಪ್ಪನ ಪ್ರೀತಿಯನ್ನು ಪದಗಳಲ್ಲಿ ಕಟ್ಟಿಕೊಡುವಲ್ಲಿ ನಾ ಅಬಲೆ…

ಅಮೃತಾ, ಕುಂದಾಪುರ

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.