ಕ್ಯಾನ್ಸರ್ ಜಾಗೃತಿಗೆ ವಾಕಾಥಾನ್
Team Udayavani, Jul 23, 2018, 12:06 PM IST
ಬೆಂಗಳೂರು: ಕ್ಯಾನ್ಸರ್ ಜಾಗೃತಿಗಾಗಿ “ಅಮೆರಿಕ ಕನ್ನಡ ಸಂಘಟನೆಗಳ ಒಕ್ಕೂಟ’ (ಅಕ್ಕ) ಭಾನುವಾರ ಕಬ್ಬನ್ಪಾರ್ಕ್ನಲ್ಲಿ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿತ್ತು. ಜಿಸಿಎಸ್ಆರ್ಟಿ ಸಂಸ್ಥೆ, ಸಂಜೆ ಸಮಯ ದಿನಪತ್ರಿಕೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಾಥಾಗೆ ಬಿಬಿಎಂಪಿ ಮೇಯರ್ ಆರ್.ಸಂಪತ್ರಾಜ್ ಚಾಲನೆ ನೀಡಿದರು.
ಜಾಥಾದಿಂದ ಸಂಗ್ರಹವಾಗುವ ಮೊತ್ತದಿಂದ ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸಿ ಕ್ಯಾನ್ಸರ್ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸುವ “ಮೊಬೈಲ್ ಮ್ಯಾಮೋಗ್ರಾಫಿ ಬಸ್’ ಖರೀದಿಸುವ ಉದ್ದೇಶ ಹೊಂದಲಾಗಿದೆ.
ಈ ವೇಳೆ ಮಾತನಾಡಿದ ಮೇಯರ್ ಸಂಪತ್ರಾಜ್, ಕ್ಯಾನ್ಸರ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಇಂತಹ ಜಾಥಾಗಳು ಸಹಕಾರಿಯಾಗಲಿವೆ ಎಂದರು. ಬಸವನಗುಡಿ ಶಾಸಕ ರವಿ ಸುಬ್ರಮಣ್ಯ, ಪಾಲಿಕೆ ಸದಸ್ಯ ವಾಜಿದ್, ಅಕ್ಕ ಸಂಸ್ಥೆ ಅಧ್ಯಕ್ಷ ಶಿವಮೂರ್ತಿ,
ಮಮತಾ ದೇವರಾಜ್, ಜೆ.ಎಚ್.ಅನಿಲಕುಮಾರ್, ಜಿಸಿಎಸ್ಆರ್ಟಿ ಸಂಸ್ಥೆಯ ಶುಭಾ ಸುನೀಲ್, ಚಿತ್ರ ನಟರಾದ ಅನಿರುದ್ಧ್, ಕಾವ್ಯಾ ಶೆಟ್ಟಿ, ಸಂಚಾರಿ ವಿಜಯ್, ಸಂಯುಕ್ತ ಹೊರನಾಡು, ಶಮಿತಾ ಮಲಾ°ಡ್, ಪ್ರಥಮ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪತಿಯಿಂದಲೇ ಭೀಕರವಾಗಿ ಹತ್ಯೆಗೀಡಾದ ಸ್ಯಾಂಡಲ್ ವುಡ್ ನಟಿ, ಕಾಂಗ್ರೆಸ್ ಮುಖಂಡೆ
ಬಿಜೆಪಿಯವರು ಬಜೆಟ್ ಓದುವುದಿಲ್ಲ,ಅವರಿಗೆ ಎಕನಾಮಿಕ್ಸ್ ಗೊತ್ತಾಗುವುದಿಲ್ಲ: ಸಿಎಂ ಸಿದ್ದರಾಮಯ್ಯ
ಅಪಘಾತದಿಂದ ತೀವ್ರ ಗಾಯ: ಆಂಬ್ಯುಲೆನ್ಸ್ ಬರುವವರೆಗೆ ಸೆಲ್ಫಿಗೆ ಪೋಸ್ ಕೊಟ್ಟ ಯುವತಿಯರು.!
Hunsur: ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಚಾವಣಿ, ಬ್ಯಾರನ್ಗೂ ಹಾನಿ
ಜಾರ್ಜಿಯಾದಲ್ಲಿ ಕಾರು ಪಲ್ಟಿಯಾಗಿ ಮೂವರು ಇಂಡೋ-ಅಮೆರಿಕನ್ ವಿದ್ಯಾರ್ಥಿಗಳು ದುರ್ಮರಣ