ಹುಚ್ಚಾಟಕ್ಕೆ ಇಳಿಯುತ್ತಿರುವ ಯುವಜನರು: ಇನ್ನೊಂದು ಸವಾಲು 


Team Udayavani, Aug 2, 2018, 6:00 AM IST

22.jpg

ಚಲಿಸುತ್ತಿರುವಾಗಲೇ ಕಾರಿನಿಂದ ಜಿಗಿದು ನಡುರಸ್ತೆಯಲ್ಲಿ ಅದರೊಂದಿಗೆ ಕುಣಿಯುತ್ತಾ ಸಾಗುವುದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿರುವ ಗೇಮ್‌. ಭಾರತವೂ ಸೇರಿದಂತೆ ಜಗತ್ತಿನೆಲ್ಲೆಡೆಗಳಿಂದ ನಿತ್ಯ ಇದರ ಸಾವಿರಾರು ವೀಡಿಯೊಗಳು ಅಪ್‌ಲೋಡ್‌ ಆಗುತ್ತಿವೆ. ಇದೇ ವೇಳೆ ಈ ಹುಚ್ಚಾಟಕ್ಕೆ ಇಳಿಯುತ್ತಿರುವ ಕೆಲವು ಯುವಜನರು ಸಾಕಷ್ಟು ಸಮಸ್ಯೆಗಳನ್ನೂ ಸೃಷ್ಟಿಸುತ್ತಿದ್ದಾರೆ. ಈಗಾಗಲೇ ಈ ಗೇಮ್‌ನಿಂದ ಇಬ್ಬರು ಪ್ರಾಣ ಕಳೆದು ಕೊಂಡಿದ್ದಾರೆ. ಅಮೆರಿಕದಲ್ಲಿ ಓರ್ವ ತರುಣಿ ತಲೆಯೊಡೆದುಕೊಂಡಿದ್ದಾಳೆ. ಹಲವು ಮಂದಿ ರಸ್ತೆ ಬದಿಯ ಕಂಬಗಳಿಗೆ ಢಿಕ್ಕಿ ಹೊಡೆದು ಗಾಯಗೊಂಡಿದ್ದಾರೆ. ರಸ್ತೆ ಹೊಂಡಗಳಿಗೆ ಬಿದ್ದು ಕೈ ಕಾಲು ಮುರಿದುಕೊಂಡವರು ನೂರಾರು ಮಂದಿ. ಆಟ ಎಷ್ಟು ಗಂಭೀರ ಸಮಸ್ಯೆಯಾಗಿದೆ ಎಂದರೆ ಮುಂಬಯಿ, ದಿಲ್ಲಿ, ಚಂಡೀಗಢ ಸೇರಿದಂತೆ ಹಲವು ನಗರಗಳಲ್ಲಿ ಪೊಲೀಸರು ಈ ಆಟ ಆಡದಂತೆ ಎಚ್ಚರಿಸಿದ್ದಾರೆ. ಬೆಂಗಳೂರಿನಲ್ಲಿ ಈ ಆಟವಾಡಿ ಅಪ್‌ಲೋಡ್‌ ಮಾಡಿದ ನಟಿಯೊಬ್ಬಳ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಇದರಲ್ಲಿ ಸ್ವತಃ ಆಟಗಾರರು ಅವಘಡವನ್ನು ಆಹ್ವಾನಿಸಿಕೊಳ್ಳುವುದಲ್ಲದೆ ರಸ್ತೆಯಲ್ಲಿರುವ ಇತರ ವಾಹನಗಳು ಮತ್ತು ಜನರನ್ನೂ ಅಪಾಯಕ್ಕೆ ತಳ್ಳುತ್ತಿದ್ದಾರೆ.

ಕೀಕಿ ಚಾಲೆಂಜ್‌ ಎಂಬ ಇದು ಕೆಲ ಸಮಯದ ಹಿಂದೆ ಕೋಲಾಹಲ ಎಬ್ಬಿಸಿದ್ದ ಬ್ಲೂವೇಲ್‌ ಚಾಲೆಂಜ್‌ನಷ್ಟೇ ಅಪಾಯಕಾರಿಯಾದುದು. ಇದಕ್ಕೂ ಮೊದಲು ಪೋಕಿಮನ್‌ ಗೋ ಎಂಬ ಆಟವೊಂದು ಇಂಥದ್ದೇ ಅಪಾ ಯಕ್ಕೆ ದೂಡಿತ್ತು. ಬ್ಲೂವೇಲ್‌ ಚಾಲೆಂಜ್‌ನ ಗುಂಗಿನಿಂದ ಯುವ ಜನತೆ ಇನ್ನೂ ಹೊರಬಂದಿಲ್ಲ. ಕೆಲ ದಿನಗಳ ಹಿಂದೆಯಷ್ಟೆ ಬೆಂಗಳೂರಿನ ಬಾಲಕನೊಬ್ಬ ಗುರುವಾಯೂನಕೆರೆಯಲ್ಲಿ ನಿಗೂಢ ರೀತಿಯಲ್ಲಿ ಸಾವನ್ನ ಪ್ಪಿದ್ದಕ್ಕೂ ಇದಕ್ಕೂ ಸಂಬಂಧವಿದೆ ಎಂಬ ಅನುಮಾನವಿತ್ತು. 

ಕೆನಡದ ರ್ಯಾಪ್‌ ಸಂಗೀತಗಾರ ಡ್ರೇಕ್‌ನ ಹೊಸ ಆಲ್ಬಂನಲ್ಲಿರುವ ಇನ್‌ ಮೈ ಫೀಲಿಂಗ್ಸ್‌ ಎಂಬ ಹಾಡಿನಿಂದ ಸ್ಫೂರ್ತಿ ಪಡೆದು ಹುಟ್ಟಿಕೊಂಡ ದ್ದು ಕೀಕಿ ಚಾಲೆಂಜ್‌. ಇಂಟರ್‌ನೆಟ್‌ ಹಾಸ್ಯ ಕಲಾವಿದ ಶಿಗ್ಗಿ ಇನ್‌ ಮೈ ಫೀಲಿಂಗ್‌ ಹಾಡಿನ ಧಾಟಿಗೆ ತಕ್ಕಂತೆ ಕುಣಿಯುವ ಹಾಡನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್‌ ಮಾಡಿದ ಬಳಿಕ ಈ ಚಾಲೆಂಜ್‌ ವೈರಲ್‌ ಆಗಿದೆ. ವಿಲ್‌ ಸ್ಮಿತ್‌, ಸಿಯಾರ ಮತ್ತಿತರ ಸೆಲೆಬ್ರಿಟಿಗಳು ಈ ಸವಾಲಿನಲ್ಲಿ ಸಹಭಾಗಿಗಳಾದ ಬಳಿಕ ಆಟ ವಿಪರೀತ ವೈರಲ್‌ ಆಗಿದೆ. ಸೆಲೆಬ್ರಿಟಿಗಳು, ಸಿನೆಮಾ ತಾರೆಯರಂಥ ಕೆಲವು ಜನಪ್ರಿಯ ವ್ಯಕ್ತಿಗಳು ಈ ಮಾದರಿಯ ಪ್ರಾಣಕ್ಕೆ ಸಂಚಕಾರ ತರುವ ಆಟಗಳ ರಾಯಭಾರಿಗಳೆನಿಸುವಂತೆ ಪ್ರೋತ್ಸಾಹಿಸುತ್ತಿರುವುದು ದುರದೃಷ್ಟಕರ. 

ಜನಪ್ರಿಯ ಹಾಡು, ನೃತ್ಯ ಅಥವಾ ಆಟಗಳು ಜನರನ್ನು ಸಮೂಹ ಸನ್ನಿಗೊಳಪಡಿಸುವ ಸಾಮರ್ಥ್ಯ ಹೊಂದಿವೆ. ಕೆಲವು ವಿಚಿತ್ರ ಖಯಾಲಿಗಳ ವ್ಯಕ್ತಿಗಳು ಪರಿಣಾಮವನ್ನು ಲೆಕ್ಕಿಸದೆ ಇವುಗಳನ್ನು ಯಾವುದೋ ಸಾಹಸ ಕೃತ್ಯಕ್ಕೆ ಬಳಸುವುದು ಆನ್‌ಲೈನ್‌ ಯುಗದಲ್ಲಿ ಬಹುದೊಡ್ಡ ಸಮಸ್ಯೆ ಎನ್ನುತ್ತಾರೆ ಮನಶಾಸ್ತ್ರಜ್ಞರು. ನಿಜವಾಗಿ ನೋಡಿದರೆ ಕೀಕಿ ಚಾಲೆಂಜ್‌ನಿಂದ ಯಾರಿಗೂ ನಯಾಪೈಸೆಯ ಲಾಭವಿಲ್ಲ. ಥ್ರಿಲ್‌ ಬಯಸುವ ಯುವ ಜನತೆಯ “ಈಗೊ’ ಸಂತೃಪ್ತವಾಗಬಹುದೇನೋ. ಈ ರೀತಿಯ ಅಪಾಯ ಕಾರಿ ಆಟಗಳಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಿಗುವ ಮೆಚ್ಚುಗೆಗಳು ಅವರೊಳಗೆ ತಾವೇನೋ ದೊಡ್ಡ ಸಾಹಸ ಮಾಡಿ ಕೃತಾರ್ಥರಾಗಿದ್ದೇವೆ ಎಂಬ ಭಾವನೆ ಮೂಡಿಸುತ್ತದೆ. ಇದು ನಿಜದ ಯಶಸ್ಸಲ್ಲ. 

ಕೀಕಿ ಚಾಲೆಂಜ್‌ ಆಡುವವರು ಸದ್ಯಕ್ಕೆ ಕಾರನ್ನು ಬಳಸುತ್ತಿರುವವರು. ಆದರೆ ಇದುವೇ ಮುಂದೆ ಚಲಿಸುತ್ತಿರುವ ಬೈಕಿನಿಂದಲೋ, ಬಸ್ಸಿನಿಂದಲೋ ಜಿಗಿದು ಕುಣಿದು ಮತ್ತೆ ಹತ್ತುವಂಥ ವಿಚಿತ್ರ ಆಟಗಳಾಗಿ ಬದಲಾದರೆ ನಿರ್ವಹಿಸಲಾಗದು. ಇದಕ್ಕೂ ಮಿಗಿಲಾಗಿ ಇವು ತಂದೊಡ್ಡುತ್ತಿರುವ ಹಲವು ಸಮಸ್ಯೆಗಳನ್ನು ನಿರ್ವಹಿಸಲು ಸರಕಾರ ಆರಂಭದಲ್ಲೇ ತಡೆಯುವುದು ಸೂಕ್ತ.

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweqwe

Voting:ಹಿರಿಯ ನಾಗರಿಕರೇ ಮಾದರಿ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.