ಲೋಕಲ್‌ ಹುಡ್ಗನ ಕ್ಲಾಸಿಕ್‌ ಲವ್‌ ಸ್ಟೋರಿ


Team Udayavani, Aug 3, 2018, 6:00 AM IST

s-13.jpg

“ಒಂದು ಸಮುದ್ರ ತೀರ… ದೊಡ್ಡ ದೊಡ್ಡ ಅಲೆಗಳು… ಆ ಅಲೆಗಳಿಗೆ ಮೈಯೊಡ್ಡಿ ನಿಂತ ಕಲ್ಲು ಬಂಡೆಗಳು… ಅವುಗಳ ನಡುವೆ ಇಬ್ಬರು ಪ್ರೇಮಿಗಳು…!
– ಇದಿಷ್ಟೇ ವಿಷಯ ಇಟ್ಟುಕೊಂಡು ಬಂದ ಅದೆಷ್ಟೋ ಚಿತ್ರಗಳು ಇಂದಿಗೂ ಕಾಡುತ್ತಿವೆ. ಆ ರೀತಿಯ ಕಾಡುವ ಕಥೆ ಕಟ್ಟಿಕೊಡಬೇಕೆಂಬ ಕಾರಣಕ್ಕೆ “ಮನಸಿನ ಮರೆಯಲಿ’ ಎಂಬ ಚಿತ್ರ ಮಾಡಿದ್ದಾಗಿ ಹೇಳುತ್ತಾ ಹೋದರು ನಿರ್ದೇಶಕ “ಆಸ್ಕರ್‌’ ಕೃಷ್ಣ. ಸದ್ದಿಲ್ಲದೆಯೇ ಚಿತ್ರ ಮುಗಿಸಿ, ಈಗ ಬಿಡುಗಡೆಗೆ ಸಜ್ಜಾಗಿರುವ ಕೃಷ್ಣ, ಇತ್ತೀಚೆಗೆ ಆಡಿಯೋ ಸಿಡಿ ಬಿಡುಗಡೆ ಕಾರ್ಯಕ್ರಮ ಮಾಡಿದ್ದಾರೆ. ಮಂಡಳಿ ಕಾರ್ಯದರ್ಶಿ ಭಾ.ಮ.ಹರೀಶ್‌ ಆಡಿಯೋ ಸಿಡಿ ಬಿಡುಗಡೆ ಮಾಡಿ ಶುಭಹಾರೈಸಿದ್ದಾರೆ.

ನಿರ್ದೇಶ ಆಸ್ಕರ್‌ ಕೃಷ್ಣಗೆ ಈ ಚಿತ್ರ ಒಳ್ಳೆಯ ಮೆಚ್ಚುಗೆ ಪಡೆಯುತ್ತೆ ಎಂಬ ವಿಶ್ವಾಸ. ಕಾರಣ, ಇದೊಂದು ಅಪ್ಪಟ ಪ್ರೇಮಕಥೆ. ಇಲ್ಲಿ ಸಾಕಷ್ಟು ಏರಿಳಿತಗಳಿವೆ. ಪ್ರೀತಿ ಅಂದಮೇಲೆ, ವಿರೋಧ ಸಹಜ, ಜಾತಿ, ಧರ್ಮ ಇವೆಲ್ಲವೂ ಅಡ್ಡವಾಗುತ್ತವೆ, ಆಸ್ತಿ, ಅಂತಸ್ತು ಕೂಡ ಮುಖ್ಯವಾಗುತ್ತೆ. ಈ ವಿಷಯಗಳಿಗೆ ಪ್ರೀತಿ ಕಿತ್ತುಹೋಗುತ್ತೆ. ಆದರೆ, ಪ್ರೇಮಿಗಳ ನಡುವೆ ಸಣ್ಣದ್ದೊಂದು ಈಗೋ ಬಂದುಬಿಟ್ಟರೆ, ಅವರ ಪ್ರೀತಿ ಎಲ್ಲಿಗೆ ಬೇಕಾದ್ರೂ ಹೋಗಿಬಿಡುತ್ತೆ. ಅದೇ ಈ ಚಿತ್ರದ ಕಥಾವಸ್ತು’ ಎಂಬುದು ನಿರ್ದೇಶಕರ ಮಾತು.

“ಈ ಹಿಂದೆ ಸಿನಿಮಾಗಳಿಗೆ ಫ್ಯಾಮಿಲಿ ಆಡಿಯನ್ಸ್‌ ಬರಲ್ಲ ಎಂಬ ಮಾತಿತ್ತು. ಅದಕ್ಕೊಂದು ಚಿತ್ರ ಮಾಡಿದೆ. ಆದರೆ, ಫ್ಯಾಮಿಲಿ ಆಡಿಯನ್ಸ್‌ ಬರಲೇ ಇಲ್ಲ. ಆಮೇಲೆ ಇನ್ನೆರೆಡು ಚಿತ್ರ ಮಾಡಿದೆ. ಅದು ವಿನಾಕಾರಣ ವಿವಾದಕ್ಕೆ ಗುರಿಯಾಯ್ತು. ಅದೇಕಾಯೊ¤à ಗೊತ್ತಾಗಲೇ ಇಲ್ಲ. ಈಗ “ಮನಸಿನ ಮರೆಯಲಿ’ ಮಾಡಿದ್ದೇನೆ. ಇದು ರೊಮ್ಯಾಂಟಿಕ್‌ ಲವ್‌ಸ್ಟೋರಿ ಇರುವ ಚಿತ್ರ. ಎಲ್ಲಾ ವರ್ಗಕ್ಕೂ ಬೇಕೆನಿಸುವ ಅಂಶಗಳು ಇಲ್ಲಿವೆ. ಹೊಸ ತಂಡ ಕಟ್ಟಿಕೊಂಡು ಹೊಸದೇನನ್ನೋ ಮಾಡಿದ್ದೇನೆ. ಎಲ್ಲರ ಸಹಕಾರ ಇರಲಿ’ ಅಂದರು ಆಸ್ಕರ್‌ ಕೃಷ್ಣ.

ನಾಯಕ ಕಿಶೋರ್‌ಗೆ ಇದು ಮೊದಲ ಚಿತ್ರ. ನಿರ್ದೇಶಕರ ಕಥೆ ಕೇಳಿ, ಅವಕಾಶ ಬಿಡಬಾರದು ಅಂತ ಒಪ್ಪಿ ಮಾಡಿದ್ದಾರೆ. ಅವರದು ಲವ್ವರ್‌ ಬಾಯ್‌ ಪಾತ್ರ. ಯಾವುದೇ ಕಮರ್ಷಿಯಲ್‌ ಚಿತ್ರಗಳಿಗೆ ಕಮ್ಮಿ ಇಲ್ಲದಂತೆ ಚಿತ್ರ ಮಾಡಿರುವ ಬಗ್ಗೆ ಖುಷಿಗೊಳ್ಳುವ ಕಿಶೋರ್‌, ಒಬ್ಬ ಲೋಕಲ್‌ ಹುಡುಗ ಪ್ರೀತಿಗೆ ಬಿದ್ದದಾಗ, ಲೈಫ‌ಲ್ಲಿ ಏನೆಲ್ಲಾ ನಡೆದು ಹೋಗುತ್ತೆ ಎಂಬುದು ಕಥೆ’ ಎಂದರು ಕಿಶೋರ್‌.

ನಾಯಕಿ ದಿವ್ಯಾಗೌಡ ಅವರಿಗೂ ಇದು ಮೊದಲ ಚಿತ್ರವಂತೆ. ಅವರಿಲ್ಲಿ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾಗಿ ಹೇಳಿಕೊಂಡರು. ನಿರ್ಮಾಪಕ ಕಿಂಗ್‌ ಲಿಂಗರಾಜ್‌ಗೆ ಸದಭಿರುಚಿಯ ಚಿತ್ರ ನಿರ್ಮಿಸಿರುವ ಹೆಮ್ಮೆ. ಸಂಗೀತ ನಿರ್ದೇಶಕ ತ್ಯಾಗರಾಜ್‌, ಕಥೆಗೆ ಪೂರಕವಾಗಿರುವ ನಾಲ್ಕು ಹಾಡುಗಳಿಗೆ ಸಂಗೀತ ನೀಡಿದ್ದು, ಮೊದಲ ಸಲ ಹಾಡಿದ್ದಾರೆ. ಮತ್ತೂಬ್ಬ ನಿರ್ಮಾಪಕಿ ಶಬೀನಾ ಚಿತ್ರ ಶುರುವಾಗಿ, ಬಿಡುಗಡೆಯಾಗುತ್ತಿರುವುದಕ್ಕೆ ಖುಷಿಗೊಂಡಿದ್ದಾರೆ. ಆನಂದ್‌ ಆಡಿಯೋ ಮಾಲೀಕ ಶ್ಯಾಮ್‌, ಚಿತ್ರ ಗೆಲುವು ಕೊಡಲಿ ಎಂದು ಹಾರೈಸುತ್ತಿದ್ದಂತೆಯೇ, ಆಡಿಯೋ ಸಿಡಿ ಬಿಡುಗಡೆ ಕಾರ್ಯಕ್ರಮಕ್ಕೆ ತೆರೆಬಿತ್ತು. 

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.