ಎಟಿಎಂ ಸ್ಕಿಮ್ಮಿಂಗ್‌ ಇರಲಿ ಎಚ್ಚರ


Team Udayavani, Sep 10, 2018, 3:11 PM IST

secptember-16.jpg

ಕೆಲವು ಸಮಯದ ಹಿಂದೆ ಮುಂಚೂಣಿ ಬ್ಯಾಂಕ್‌ಗಳ ಹಲವಾರು ಗ್ರಾಹಕರು ಎಟಿಎಂನಲ್ಲಿ ವಂಚನೆಗೊಳಗಾಗಿ ಲಕ್ಷಾಂತರ ಹಣ ಕಳೆದುಕೊಂಡ ಕುರಿತು ವರದಿಯಾಗಿತ್ತು. ತನಿಖೆ ನಡೆಸಿದಾಗ ಎಟಿಎಂನಲ್ಲಿ ಕಾರ್ಡ್‌ ಸ್ಕಿಮ್ಮಿಂಗ್‌ ತಂತ್ರಜ್ಞಾನ ಬಳಸಿರುವುದು ತಿಳಿದು ಬಂತು. ಇದೊಂದು ಹೈಟೆಕ್‌ ವಂಚನೆಯಾಗಿದ್ದು, ಈ ಕುರಿತು ತಿಳಿದುಕೊಂಡಿರುವುದು ಅಗತ್ಯ.

ಏನಿದು ಎಟಿಎಂ ಸ್ಕಿಮ್ಮಿಂಗ್‌?
ಯಂತ್ರವೊಂದನ್ನು ಬಳಸಿ ಎಟಿಎಂ ಕಾರ್ಡ್‌ನ ಮಾಹಿತಿಯನ್ನು ಕದ್ದು ನಡೆಸುವ ವಂಚನೆ ಇದಾಗಿದೆ. ಸ್ಕಿಮ್ಮರ್‌ ಎಂಬ ಹೆಸರಿನ ಚಿಕ್ಕ ಯಂತ್ರವೊಂದನ್ನು ಎಟಿಎಂ ಯಂತ್ರಕ್ಕೆ ಅಳವಡಿಸಲಾಗುತ್ತದೆ. ಇದು ಗ್ರಾಹಕರು ಎಟಿಎಂ ಕಾರ್ಡ್‌ನ್ನು ಸ್ಕೈಪ್‌ ಮಾಡುವಾಗ ಕಾರ್ಡ್‌ನ ಮ್ಯಾಗ್ನೆಟಿಕ್‌ ಸ್ಟ್ರಿಪ್‌ನಲ್ಲಿನ ಮಾಹಿತಿಯನ್ನು ಕದಿಯುತ್ತದೆ.

ಹಾಗೆಂದು ಕೇವಲ ಸ್ಕಿಮ್ಮರ್‌ ಮಾತ್ರ ಸಾಲುವುದಿಲ್ಲ. ವಂಚಕರು ಗ್ರಾಹಕರ ಎಟಿಎಂ ಪಿನ್‌ ನಂಬರ್‌ ತಿಳಿಯಲು ಎಟಿಎಂ ಗೆ ಕೆಮರಾ ಅಳವಡಿಸುತ್ತಾರೆ ಅಥವಾ ಬ್ಯಾಂಕ್‌ನ ಕೆಮರಾ ಹ್ಯಾಕ್‌ ಮಾಡುತ್ತಾರೆ. ಇದಾದ ಬಳಿಕ ಪಿನ್‌ ನಂಬರ್‌ ತಿಳಿದುಕೊಂಡು ಆನ್‌ಲೈನ್‌ ಖರೀದಿಗಳನ್ನು ನಡೆಸುತ್ತಾರೆ ಅಥವಾ ತದ್ರೂಪಿ ಕಾರ್ಡ್‌ ತಯಾರಿಸುತ್ತಾರೆ.

ಸ್ಕಿಮ್ಮಿಂಗ್‌: ಪತ್ತೆ ಹೇಗೆ?
ಎಟಿಎಂ ಬಳಸುವ ಮುನ್ನ ಯಂತ್ರವನ್ನೊಮ್ಮೆ ಪರಿಶೀಲಿಸುವುದು ಅಗತ್ಯ. ಕಾರ್ಡ್‌ ರೀಡರ್‌ ಸೆಕ್ಷನ್‌ (ಸ್ಕೈಪ್‌ ಮಾಡುವ ಜಾಗ) ಸಾಮಾನ್ಯಕ್ಕಿಂತ ಸ್ವಲ್ಪ ಭಿನ್ನವಾಗಿ ಮುಂಚಾಚಿಕೊಂಡಿದ್ದರೆ, ಕೀಪ್ಯಾಡ್‌ ಮೇಲೆ ಬಂದಂತಿದ್ದರೆ, ಕಾರ್ಡ್‌ ರೀಡರ್‌ ಸಡಿಲವಾಗಿದ್ದರೆ, ವಂಚನೆಗೊಳಗಾಗುವ ಅಪಾಯ ಇದೆ ಎಂದು ಭಾವಿಸಬಹುದು.

ಪಾರಾಗುವುದು ಹೇಗೆ?
ಇವೆಲ್ಲ ಮುಂಜಾಗರೂಕತೆಗಳ ಹೊರತಾಗಿಯೂ ಗ್ರಾಹಕರು ಮೋಸ ಹೋಗುವ ಸಂಭಾವ್ಯತೆ ಅಲ್ಲಗಳೆಯಲಾಗದು. ಹಿಡನ್‌ ಕೆಮರಾ ಗ್ರಾಹಕರ ಪಿನ್‌ ನಂಬರ್‌ ನೋಟ್‌ ಮಾಡಿಕೊಂಡಿದ್ದರೆ, ದೋಚುವವರಿಗೆ ಬಲುದೊಡ್ಡ ಉಪಕಾರ ಆದೀತು. ಆದ್ದರಿಂದ ಪಿನ್‌ ನಂಬರ್‌ ಬದಲಾ ಯಿಸಲು ಪಿನ್‌ ನಂಬರ್‌ ಎಂಟರ್‌ ಮಾಡುವಾಗ ಇನ್ನೊಂದು ಕೈಯಿಂದ ಮರೆ ಮಾಡಿಕೊಳ್ಳುವುದು ಉತ್ತಮ ಎನ್ನುವುದು ಬಲ್ಲವರ ಸಲಹೆ.

ಜತೆಗೆ ಬ್ಯಾಂಕ್‌ ಟ್ರಾನ್ಸಾಕ್ಷ್ಯನ್‌ ಸಂಬಂಧಿ ಎಸ್‌ ಎಂಎಸ್‌ ಅಲರ್ಟ್‌ ವ್ಯವಸ್ಥೆಗೆ ನೋಂದಣಿ ಮಾಡಿಕೊಳ್ಳುವುದು ಅಗತ್ಯ. ಬ್ಯಾಂಕ್‌ಗಳಲ್ಲಿ ಈಗ ಹೊಸ ಖಾತೆ ತೆರೆಯುವಾಗ ಈ ಆಯ್ಕೆ ಕೊಡುತ್ತಾರೆ. ಇಲ್ಲದೇ ಇದ್ದಲ್ಲಿ ಬ್ಯಾಂಕ್‌ನಲ್ಲಿ ಈ ಕುರಿತು ಮನವಿ ಸಲ್ಲಿಸಬಹುದು. ಇದರಿಂದ ಪ್ರತಿ ಬಾರಿ ಎಟಿಎಂನಿಂದ ದುಡ್ಡು ತೆಗೆದಾಗ ಅಥವಾ ಖಾತೆಗೆ ಹಣ ಬಂದಾಗ ಎಸ್‌ಎಂಎಸ್‌ ಬರುತ್ತದೆ. ಎಟಿಎಂ ನಲ್ಲಿ ಒಂದು ವೇಳೆ ಸ್ಲಿಪ್‌ ಬರದೇ ಇದ್ದರೂ, ಬ್ಯಾಂಕ್‌ ಮೆಸೇಜ್‌ ಶಾಶ್ವತವಾಗಿರುವುದರಿಂದ ಗ್ರಾಹಕರಿಗೆ ಬಲು ಉಪಯುಕ್ತವಾಗುತ್ತದೆ.

ಮೋಸ ಹೋದರೆ?
ಒಂದು ವೇಳೆ ಸ್ಕಿಮ್ಮಿಂಗ್‌ ಯಂತ್ರದಿಂದ ಮೋಸ ಹೋದರೆ? ಆದಷ್ಟು ಬೇಗ ಬ್ಯಾಂಕ್‌ಗೆ ವಿಷಯ ತಿಳಿಸಬೇಕು. ಒಂದು ವೇಳೆ ಗ್ರಾಹಕರು ಬೇರೊಂದು ಬ್ಯಾಂಕ್‌ನ ಎಟಿಎಂ ಯಂತ್ರದಲ್ಲಿ ಹಣ ಕಳೆದುಕೊಂಡರೆ, ಆಗ ತಮ್ಮ ಖಾತೆ ಇರುವ ಬ್ಯಾಂಕ್‌ಗೆ ಮಾಹಿತಿ ನೀಡಬೇಕು. ಆರ್‌ಬಿಐ ಪ್ರಕಾರ, ತಡವಾದಷ್ಟು ರಿಸ್ಕ್ ಹೆಚ್ಚು. ಆದ್ದರಿಂದ ಮೋಸ ಹೋಗದಂತೆ ಎಚ್ಚರ ವಹಿಸಿ ವ್ಯಾವಹಾರ ನಡೆಸುವುದು ಉತ್ತಮ.

 ಎಸ್ಕೆ

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.