ಮರೀಚಿಕೆಯಾದ ಸೂರು, ಕುಡಿಯಲೂ ಇಲ್ಲ ನೀರು


Team Udayavani, Sep 12, 2018, 11:05 AM IST

12-sepctember-5.jpg

ಪುತ್ತೂರು: ನಗರಸಭೆ ಪರಿಧಿಯೊಳಗೆ 2 ಕುಟುಂಬಗಳು ದಯನೀಯ ಸ್ಥಿತಿಯಲ್ಲಿ ಬದುಕುತ್ತಿರುವುದು ಇದೀಗವಷ್ಟೇ ಬೆಳಕಿಗೆ ಬಂದಿದೆ. ನೀರು, ಬೆಳಕಿನ ಸೌಲಭ್ಯಗಳು ಇಲ್ಲದೇ ಸಮಾಜದ ಮುಖ್ಯವಾಹಿನಿಯಿಂದ ಮೂಲೆಗೆ ತಳ್ಳಲ್ಪಟ್ಟಿರುವ ಇವರ ಬಗ್ಗೆ ಸ್ಥಳೀಯಾಡಳಿತವೂ ಮುತುವರ್ಜಿ ವಹಿಸಿಲ್ಲ. ಪಡೀಲು ಬಳಿಯ ಬಾಲಕ್ಕ ಹಾಗೂ ಮುದರು ಮನೆಗಳ ದಯನೀಯ ಸ್ಥಿತಿ ಇದು. ಹಲವಾರು ವರ್ಷಗಳ ಹಿಂದೆ ಧಣಿಗಳ ಮನೆಯ ಕೆಲಸಕ್ಕೆಂದು ಬಂದು ಕುಳಿತವರು, ಇಂದು ಕೂಡ ಅದೇ ಸ್ಥಿತಿಯಲ್ಲಿದ್ದಾರೆ.

ನೀರು, ಸೂರು, ಬೆಳಕು ಮೂಲಸೌಕರ್ಯಗಳು. ಪ್ರತಿಯೋರ್ವ ವ್ಯಕ್ತಿಗೂ ಇವಿಷ್ಟನ್ನು ಕನಿಷ್ಠ ಆದ್ಯತೆಯಾಗಿ ಪರಿಗಣಿಸಬೇಕು ಎಂದು ಘೋಷಣೆ ಕೂಗಲಾಗುತ್ತಿದೆ. ಆದರೆ ಇನ್ನೂ ಕೂಡ ಮೂಲಸೌಕರ್ಯ ತಲುಪದ ಮನೆಗಳಿವೆ ಎನ್ನುವುದು ಸುಳ್ಳಲ್ಲ. ಆದರೆ ಇವರ ಓಟು ಮಾತ್ರ ನಮ್ಮ ರಾಜಕೀಯ ಪಕ್ಷಗಳಿಗೆ ಬೇಕು.

ಮತದಾರರ ಗುರುತು ಚೀಟಿ, ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌ ಇದೆ. ಇವಿಷ್ಟನ್ನು ಹಿಡಿದುಕೊಂಡು ಸೂರು ನಿರ್ಮಿಸಿಕೊಡಿ ಎಂದು ನಗರಸಭೆಗೆ ಮನವಿ ನೀಡಿದರೆ, ಜಾಗದ ಸಮಸ್ಯೆ ಎದುರಾಗುತ್ತದೆ. ಪೈ ಕುಟುಂಬಕ್ಕೆ ಸೇರಿದ ಜಾಗದಲ್ಲಿ ಈ ಮನೆಯವರು ಕುಳಿತಿದ್ದಾರೆ. ಆದ್ದರಿಂದ ಜಾಗದಲ್ಲಿ ಭದ್ರವಾದ ಸೂರು, ಕುಡಿಯಲು ನೀರು, ಬೆಳಕಿನ ವ್ಯವಸ್ಥೆ ಮಾಡಿಕೊಳ್ಳಲು ಅಡ್ಡಿಯಾಗಿದೆ ಎನ್ನಲಾಗಿದೆ. 

ಅಂದ ಹಾಗೇ ಒಂದು ಮನೆಯವರು ಎಸ್ಸಿ, ಇನ್ನೊಂದು ಮನೆಯವರು ಎಸ್ಟಿ. ಇವರ ಧ್ವನಿ ಇನ್ನೂ ಮುನ್ನೆಲೆಗೆ ಬಾರದೇ ಇರುವುದು ವಿಪರ್ಯಾಸ.

ಸೀಮೆಎಣ್ಣೆ ಸಮಸ್ಯೆ
ವಿದ್ಯುತ್‌ ಇಲ್ಲದ ಮನೆಗಳು ಸೀಮೆಎಣ್ಣೆ ದೀಪವನ್ನೇ ಅವಲಂಬಿಸಿವೆ. ಆದರೆ ಈಗ ಸೀಮೆಎಣ್ಣೆಯೂ ಸಿಗುತ್ತಿಲ್ಲ. ಅನಿವಾರ್ಯವಾಗಿ ಕ್ಯಾಂಡಲ್‌ ಬೆಳಕಿಗೆ ಮೊರೆ ಹೋಗಲಾಗುತ್ತದೆ. ಮುದುರು ಅವರ ಮನೆಯಲ್ಲಿ ಸೋಲಾರ್‌ ಹಾಕಿಕೊಳ್ಳಲಾಗಿದೆ. ಆದರೆ ಬಾಲಕ್ಕ ಅವರ ಮನೆಯಲ್ಲಿ ಮಾತ್ರ ಹಗಲು ಬೆಳಕು, ರಾತ್ರಿ ಕತ್ತಲು.

ಸಾಕುಮಗ ದೂರವಾದ
ಸುಮಾರು 65 ವರ್ಷಗಳಿಂದ ಪಡೀಲು ಪರಿಸರದಲ್ಲಿ ವಾಸವಾಗಿದ್ದಾರೆ ಬಾಲಕ್ಕ ನಾಯ್ಕ. ಸಾಕು ಮಗನ ಜತೆ ವಾಸವಾಗಿದ್ದರು. ಬಳಿಕ ಸಾಕುಮಗನೂ ಬೇರೆಯಾದ. ಈಗ ಒಬ್ಬರೇ ದಿನ ಕಳೆಯುತ್ತಿದ್ದಾರೆ. ಹರಕಲು ಮನೆ, ಹರಿದು ಹೋಗುವ ಮಳೆನೀರು ಕುಡಿಯಲು ಬಳಕೆ, ಬೆಳಕಂತೂ ಇಲ್ಲವೇ ಇಲ್ಲ. ಇಲ್ಲಿಂದ ಶುರು ಆಗುತ್ತದೆ ಈ ಮನೆಯವರ ಗೋಳು. 92 ವರ್ಷದ ಬಾಲಕ್ಕ ಒಬ್ಬಂಟಿಯಾಗಿ ಮನೆಯಲ್ಲಿ ವಾಸವಾಗಿದ್ದಾರೆ. ಇವರಿಗೆ ಜತೆಗಾರರಾಗಿ ಎರಡು ಬೆಕ್ಕುಗಳಿವೆ.

ಮಳೆಗಾಲವನ್ನು ಎದುರಿಸುವಷ್ಟಾದರೂ ಭದ್ರ ಮನೆ ಬೇಕು ಎಂಬ ಬೇಡಿಕೆ ಬಾಲಕ್ಕನದು. ಆದರೆ ಈ ಕೂಗಿಗೆ ಯಾರೂ ಧ್ವನಿಯಾಗಿಲ್ಲ. ಸ್ವಲ್ಪ ದಿನಗಳ ಹಿಂದೆ ಯುವಕರ ತಂಡವೊಂದು ನಾಲ್ಕು ಟಾರ್ಪಲುಗಳನ್ನು ಹಾಕಿ ಅನುಕೂಲ ಮಾಡಿಕೊಟ್ಟಿದೆ. 

ಮುದರು ಮನೆ
ಗಂಡನ ಜತೆ ಧಣಿಗಳ ಮನೆ ಕೆಲಸಕ್ಕೆ ಬಂದು ನೆಲೆ ನಿಂತವರು ಮುದರು. 39 ವರ್ಷಗಳ ಹಿಂದೆ ಇಲ್ಲಿಗೆ ಬಂದಿದ್ದಾರೆ. ಗಂಡ ಕೆಲ ವರ್ಷಗಳ ಹಿಂದೆ ನಿಧನ ಹೊಂದಿದರು. ಇದೀಗ ಮಗಳ ಜತೆಗೆ ವಾಸವಾಗಿದ್ದಾರೆ. ಮಗಳು ಲಕ್ಷ್ಮೀ ಅವರು ಅಡಿಕೆ ಫ್ಯಾಕ್ಟರಿಗೆ ಹೋಗುತ್ತಿದ್ದು, ಇದೇ ಅವರ ಜೀವನಕ್ಕೆ ಆಧಾರ. ಕುಡಿಯಲು ನೀರು ಬೇಕೆಂದು ನಗರಸಭೆಗೆ ಅರ್ಜಿ ನೀಡಿದರು. ಇದು ಮಂಜೂರಾಗಲು ಭೂಮಾಲೀಕರ ಅನುಮತಿಬೇಕೆಂದು ತಿಳಿಸಿದರಂತೆ. ಆದ್ದರಿಂದ ಪ್ರಸ್ತಾಪ ಮೂಲೆಗುಂಪಾಯಿತು. ಮನೆ ನಿರ್ಮಿಸಿಕೊಡಲು ನಗರಸಭೆಗೆ ಅರ್ಜಿ ನೀಡಿದ್ದಾರೆ. ನಗರಸಭೆಯಲ್ಲಿ ಮೂಲೆಗುಂಪಾಗಿರುವ 4 ಸಾವಿರ ಅರ್ಜಿಗಳ ಪೈಕಿ ಇವರದ್ದು ಒಂದು.

 ಪರಿಗಣಿಸಬಹುದು
ಏಕಾಏಕೀ ಏನೂ ಮಾಡುವಂತಿಲ್ಲ. ನಗರಸಭೆಗೆ ಅರ್ಜಿ ನೀಡಿದರೆ, ವಿಶೇಷ ಪ್ರಕರಣ ಎಂದು ಪರಿಗಣಿಸಬಹುದು. ಅಥವಾ ಜಾಗ ಅವರ ಹೆಸರಿನಲ್ಲಿದ್ದರೆ 2.80 ಲಕ್ಷ ರೂ. ಸರಕಾರದಿಂದ ಸಿಗುತ್ತದೆ.
– ರೂಪಾ ಶೆಟ್ಟಿ
  ಪೌರಾಯುಕ್ತೆ, ಪುತ್ತೂರು ನಗರಸಭೆ

ಗಣೇಶ್‌ ಎನ್‌. ಕಲ್ಲರ್ಪೆ 

ಟಾಪ್ ನ್ಯೂಸ್

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

18-

UV Fusion: ತೇರು ಬೀದಿಗೆ ಬಂದಿದೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.