ಮಕ್ಕಳು ಆರಂಭಿಸಿದ ಗಣಪನಿಗೆ 8ರ ಹರೆಯ!


Team Udayavani, Sep 15, 2018, 10:45 AM IST

15-seoctember-3.jpg

ಸುಳ್ಯ : ಮಕ್ಕಳೇ ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿ, ಜಲಸ್ತಂಭನ ಮಾಡುವ ಗಣಪತಿ ದುಗಲಡ್ಕ ಸಮೀಪದ ಕೊಯಿಕುಳಿ ನೀರಬಿದಿರೆಯಲ್ಲಿ ಇದ್ದಾನೆ. ಎಂಟು ವರ್ಷಗಳ ಹಿಂದೆ ಆಟದ ರೂಪದಲ್ಲಿ ಆರಂಭಿಸಿದ ಈ ಆಚರಣೆ ಈಗ ಊರಿನ ಸಂಭ್ರಮದ ಹಬ್ಬ. ಅಂದು ಚೌತಿ ಸಂದರ್ಭ ಮಣ್ಣಿನ ಗಣಪ ತಯಾರಿಸಿ, ಕೈಗಾಡಿ ಮೂಲಕ ಕೊಂಡೊಯ್ದು ಸಂಭ್ರಮಿಸುತ್ತಿದ್ದ ಮಕ್ಕಳಾಟ ಮರೆಗೆ ಸರಿದಿಲ್ಲ. ಆ ಮಕ್ಕಳು ಈಗ ಹೈಸ್ಕೂಲು, ಕಾಲೇಜು ಹಂತದಲ್ಲಿದ್ದಾರೆ. ಅಂದಿನ ಸಂಭ್ರಮವನ್ನು ಈಗಲೂ ಮುಂದುವರಿಸಿದ್ದಾರೆ. ದಿನವಿಡಿ ಸಾಗುವ ಕಾರ್ಯಕ್ರಮದ ಎಲ್ಲ ಹಂತಗಳಲ್ಲಿ ಮಕ್ಕಳೇ ನೇತೃತ್ವ ವಹಿಸಿರುತ್ತಾರೆ.

ಬಾಲಕರ ತಂಡ
ಕೊಯಿಕುಳಿ, ನೀರಬಿದಿರೆ ಪರಿಸರದ ಹರಿಪ್ರಸಾದ್‌, ಶಿವಪ್ರಸಾದ್‌, ಯತಿನ್‌, ಧರ್ಮಪಾಲ, ಪ್ರಸಾದ್‌ ಎನ್‌. ಮೊದಲಾದ ಬಾಲಕರು ಎಂಟು ವರ್ಷಗಳ ಹಿಂದೆ ಗಣೇಶನ ವಿಶಿಷ್ಟ ಆರಾಧನೆ ಆರಂಭಿಸಿದರು. ಈಗ ಶ್ರೀದುರ್ಗಾ ಗೆಳೆಯರ ಬಳಗ ಎಂಬ ಸಮಿತಿ ರಚಿಸಿಕೊಂಡು, ಸ್ಥಳೀಯರ ಸಹಕಾರ ಪಡೆದು, ಆಮಂತ್ರಣ ಮುದ್ರಿಸಿ ಆಹ್ವಾನ ನೀಡುತ್ತಾರೆ. ಮಾವಿನ ಮರದ ಕೆಳಗೆ ಪುಟ್ಟ ಚಪ್ಪರ ರಚಿಸಿ, ತಳಿರು ತೋರಣಗಳಿಂದ ಶೃಂಗರಿಸುತ್ತಾರೆ. ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ನಡೆಯುತ್ತದೆ. ನೀರಬಿದಿರೆ ಅಖಿಲೇಶ್‌ ಪೂಜಾ ವಿಧಿ- ವಿಧಾನದ ನೇತೃತ್ವ ವಹಿಸುತ್ತಾರೆ. ಅವರು ಒಂದನೇ ತರಗತಿಯಲ್ಲಿದ್ದಾಗ ಈ ಆಚರಣೆ ಪ್ರಾರಂಭವಾಯಿತು. 

ಈಗ 9ನೇ ತರಗತಿ ವಿದ್ಯಾರ್ಥಿ. ಉಳಿದವರು ಪಿಯುಸಿ, ಡಿಗ್ರಿ ಹಂತದಲ್ಲಿ ಇದ್ದಾರೆ. ಕೆಲವರು ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ. ಚೌತಿ ದಿನ ಎಲ್ಲರೂ ಜತೆಗೂಡುತ್ತಾರೆ.

ಆರಾಧನೆ ಹೀಗೆ…
ಬೆಳಗ್ಗೆ 6.30ಕ್ಕೆ ಗಣಪತಿಯ ಪ್ರತಿಷ್ಠೆ ನಡೆಯುತ್ತದೆ. ಪೂಜೆ, ನೈವೇದ್ಯ ಅರ್ಪಿಸಲಾಗುತ್ತದೆ. ವಠಾರದ ಮಕ್ಕಳು ಸೇರಿ ಭಜನೆ ಮಾಡುತ್ತಾರೆ. ಮಧ್ಯಾಹ್ನದ ಪೂಜೆ ನಡೆಯುತ್ತದೆ. ಸ್ಥಳೀಯ ಮನೆಯೊಂದರಲ್ಲಿ ತಯಾರಿಸಿದ ಪಾಯಸ, ಅವಲಕ್ಕಿ, ಶರಬತ್ತನ್ನು ಭಕ್ತರಿಗೆ ನೀಡಲಾಗುತ್ತದೆ. ಮಧ್ಯಾಹ್ನದ ಬಳಿಕ ಮಕ್ಕಳಿಗೆ ಆಟೋಟ ಸ್ಪರ್ಧೆ ನಡೆಸಿ, ಬಹುಮಾನ ವಿತರಿಸುತ್ತಾರೆ. ಸಾಯಂಕಲ 6ಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆ ಆರಂಭಗೊಳ್ಳುತ್ತದೆ. ರಸ್ತೆಯ ಎರಡು ಬದಿಯಲ್ಲಿ ಸಾಗಿ, ಅಶ್ವತ್ಥ ಗಿಡಕ್ಕೆ ಸುತ್ತು ಹೊಡೆದು ಅನಂತರ ನೀರಬಿದಿರೆ ವಿಷ್ಣು ಕಿರಣ್‌ ಭಟ್‌ ಅವರ ತೋಟದ ಕೆರೆಯಲ್ಲಿ ವಿರ್ಸಜನ ಕಾರ್ಯ ನಡೆಯುತ್ತದೆ. ಮೆರವಣಿಗೆ ಒಟ್ಟು 1 ಕಿ.ಮೀ.ನಷ್ಟು ದೂರ ಶೋಭಾಯಾತ್ರೆ ಸಂಚರಿಸುತ್ತದೆ.

ಮಕ್ಕಳ ಗಣಪ 
ಸುಮಾರು 50ಕ್ಕೂ ಅಧಿಕ ಮಕ್ಕಳು ಇಲ್ಲಿ ಸೇರುತ್ತಾರೆ. ಈಗ ಈ ಆಚರಣೆ ಪ್ರಚಾರ ಪಡೆದು ಹೊರಗಿನಿಂದಲೂ ಜನರು ಬರುತ್ತಾರೆ. 150ಕ್ಕೂ ಅಧಿಕ ಮಂದಿ ಸೇರುತ್ತಾರೆ. ಈ ಕಾರ್ಯಕ್ರಮಕ್ಕೆ ತಿಂಗಳ ಹಿಂದಿನಿಂದಲೇ ಪೂರ್ವಸಿದ್ಧತೆ ನಡೆಯುತ್ತದೆ. 

ವಿಶಿಷ್ಟ ಆಚರಣೆ
ನನ್ನ ಮಗ ಅಖಿ ಲೇಶ್‌ 1ನೇ ತರಗತಿಯಲ್ಲಿ ಇರುವ ಸಂದರ್ಭ ಊರಿನ ಕೆಲ ಮಕ್ಕಳು ಜತೆಗೂಡಿ ಚೌತಿ ದಿನ ಗಣೇಶನನ್ನು ವಿಶಿಷ್ಟ ರೀತಿಯಲ್ಲಿ ಆರಾಧಿಸಿದ್ದರು. ಅದು ಈಗಲೂ ಮುಂದುವರಿದಿದೆ. ಪೂಜೆ, ಮೆರವಣಿಗೆ ಎಲ್ಲವೂ ನಡೆಯುತ್ತದೆ.
– ವಿಷ್ಣು ಕಿರಣ್‌ ಭಟ್‌,
ನೀರಬಿದಿರೆ 

ವಿಶೇಷ ವರದಿ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.