ವಿಘ್ನ ವಿನಾಶಕನ ಹೆಸರಲ್ಲಿ 264 ಕೋಟಿ ರೂ.ಗಳ ವಿಮೆ
Team Udayavani, Sep 16, 2018, 10:39 AM IST
ಮುಂಬಯಿ: ಮಾಯಾನಗರಿ ಮುಂಬಯಿಯಲ್ಲಿ ಗಣೇಶೋತ್ಸವಕ್ಕೆಂದು ಖರ್ಚು ಮಾಡುವ ಮೊತ್ತ ಒಂದೆರಡು ಕೋಟಿಯಲ್ಲ, ನೂರಾರು ಕೋಟಿ ರೂಪಾಯಿ! ಹೌದು. ಇಲ್ಲಿ ಇದೊಂದು ರೀತಿಯ ಪ್ರತಿಷ್ಠೆಯ ಸ್ಪರ್ಧೆ ಇದ್ದಂತೆ. ಪ್ರತಿವರ್ಷದಂತೆ ಈ ಬಾರಿಯೂ ಇಲ್ಲಿನ ಶ್ರೀಮಂತ ಗಣೇಶ ಮಂಡಳಿಗಳಲ್ಲಿ ಒಂದಾದ ಜಿಎಸ್ಬಿ ಸೇವಾ ಮಂಡಳಿ ತಾನು ಪ್ರತಿಷ್ಠಾಪಿಸಿದ ಗಣೇಶನ ಹೆಸರಲ್ಲಿ ಬರೋಬ್ಬರಿ 264.8 ಕೋಟಿ ರೂ. ಮೊತ್ತದ ವಿಮೆ ಮಾಡಿಸಿ ಅಚ್ಚರಿ ಮೂಡಿಸಿದೆ.
ಆದರೆ ಈ ಸೇವಾ ಮಂಡಳಿಗೆ ಇದೇನೂ ಹೊಸದಲ್ಲ. 2016ರಲ್ಲಿ 300 ಕೋಟಿ ರೂ. ವಿಮೆ ಮಾಡಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿತ್ತು. ಅಲ್ಲದೆ, ಹೊಸ ದಾಖಲೆಯನ್ನೂ ನಿರ್ಮಿಸಿತ್ತು. ಆದರೆ, ಕಳೆದ ವರ್ಷ ವಿಮೆಯ ಮೊತ್ತ 264.3 ಕೋಟಿ ರೂ.ಗೆ ಸೀಮಿತವಾಗಿದೆ. ಈ ವರ್ಷ ಕೊಂಚ ಹೆಚ್ಚಿನ ವಿಮೆ ಮಾಡಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸೇವಾ ಮಂಡಳಿ ಸದಸ್ಯ ಆರ್.ಜಿ.ಭಟ್, “”ಈ ವಿಮೆಯಲ್ಲಿ ಅನೇಕ ಅಂಶಗಳು ಸೇರಿಕೊಂಡಿರುತ್ತವೆ. ಹೆಚ್ಚು ಕಡಿಮೆ 19 ಕೋಟಿ ರೂ.ನಷ್ಟು ಚಿನ್ನ, ಬೆಳ್ಳಿ ಆಭರಣಗಳು ಮತ್ತು ನಗದಿನ ಮೇಲಿನದ್ದಾಗಿರುತ್ತವೆ. ವಿದ್ಯುತ್ ಅವಘಡ, ಭೂಕಂಪಗಳಿಂದಾಗುವ ಹಾನಿಯನ್ನು ಭರಿಸಿಕೊಳ್ಳುವ ಹಿನ್ನೆಲೆಯಲ್ಲೂ ವಿಮೆ ಮಾಡಿಸಲಾಗಿರುತ್ತದೆ. ಅಲ್ಲದೆ, 2,244 ಕೆಲಸಗಾರರು, ಸದಸ್ಯರು ಹಾಗೂ ಸ್ವಯಂಸೇವಕರಿಗಾಗಿ ತಲಾ 10 ಲಕ್ಷ ರೂ.ನ ಅಪಘಾತ ವಿಮೆಯೂ ಒಳಗೊಂಡಿರುತ್ತದೆ” ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Taiwan; ಸಂಸತ್ನಲ್ಲಿ ಸಂಸದರ ಭಾರೀ ಬಡಿದಾಟ!
Singapore; ಹೆಚ್ಚಿದ ಕೋವಿಡ್: ಮಾಸ್ಕ್ ಕಡ್ಡಾಯಕ್ಕೆ ಮತ್ತೆ ಆದೇಶ
Gundmi Toll Plaza ಸ್ಥಳೀಯರಿಗೆ ಟೋಲ್ ಬರೆ; ಟೋಲ್ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ
Election data ಏರಿಕೆ ಬಗ್ಗೆ ಪ್ರತಿಕ್ರಿಯಿಸಿ: ಇಸಿಗೆ ಸುಪ್ರೀಂ
D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ; ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್’