6 ಸಹಸ್ರ ಚಿತಾಭಸ್ಮ ವಿಸರ್ಜನೆ
Team Udayavani, Oct 1, 2018, 8:30 AM IST
ಡೆಹ್ರಾಡೂನ್: ಪವಿತ್ರ ಗಂಗಾನದಿಯಲ್ಲಿ ಶನಿವಾರ ಒಂದೇ ದಿನ 6,980 ಮಂದಿಯ ಚಿತಾಭಸ್ಮವನ್ನು ವಿಸರ್ಜಿಸಲಾಗಿದೆ. ಡೆಹ್ರಾಡೂನ್ನ ಕಂಖಾಲ್ ಎಂಬಲ್ಲಿರುವ ಸತಿ ಘಾಟ್ನಲ್ಲಿ ಶ್ರೀ ದೇವೋತ್ಥಾನ ಸೇವಾ ಸಮಿತಿ ಆಶ್ರಯದಲ್ಲಿ ಅದನ್ನು ನೆರವೇರಿಸಲಾಗಿದೆ. ದೇಶದ ಹಲವು ಭಾಗಗಳಿಂದ ಚಿತಾಭಸ್ಮ ತರಲಾಗಿತ್ತು. ಅನಾಮಧೇಯ ವ್ಯಕ್ತಿಗಳ ಚಿತಾಭಸ್ಮ ವಿಸರ್ಜಿಸುವ ಕೆಲಸವನ್ನು 17 ವರ್ಷಗಳಿಂದ ಸಮಿತಿ ನಡೆಸುತ್ತಿದೆ.