Congress ಮಾಜಿ ವಕ್ತಾರೆ ಆರೋಪ; ನನ್ನ ಕೂಡಿಹಾಕಿ, ಮದ್ಯಸೇವಿಸಲು ಪೀಡಿಸಿದ್ದರು!
Team Udayavani, May 7, 2024, 6:04 AM IST
ಹೊಸದಿಲ್ಲಿ: “ಚುನಾವಣೆ ಕೆಲಸದ ನಿಮಿತ್ತ ಛತ್ತೀಸ್ಗಢದಲ್ಲಿದ್ದಾಗ ಅಲ್ಲಿನ ಕಾಂಗ್ರೆಸ್ ಸಂವಹನ ಘಟಕದ ಮುಖ್ಯಸ್ಥ ನನ್ನನ್ನು ತೀವ್ರವಾಗಿ ಹಿಂಸಿಸಿದ್ದಾನೆ. ನನ್ನ ಕೊಠಡಿಯ ಬಾಗಿಲು ಬಡಿದು ಮದ್ಯ ಸೇವನೆ ಮಾಡುವಿರಾ? ಎಂದೆಲ್ಲ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ನನ್ನನ್ನು ಕೊಠಡಿಯಲ್ಲಿ ಕೂಡಿ ಹಾಕಿ ನಿಂದಿಸಿದ್ದಾನೆ’ ಎಂದು ಎಐಸಿಸಿ ಮಾಜಿ ವಕ್ತಾರೆ ರಾಧಿಕಾ ಖೇರಾ ಆರೋಪಿಸಿದ್ದಾರೆ.
ವಕ್ತಾರೆ ಸ್ಥಾನಕ್ಕೆ ರವಿವಾರ ರಾಜೀನಾಮೆ ನೀಡಿದ ರಾಧಿಕಾ ಸೋಮವಾರ ಮಾಧ್ಯಮಗಳ ಮುಂದೆ ಈ ವಿಚಾರ ಬಹಿರಂಗ ಪಡಿಸಿದ್ದಾರೆ. ಖುದ್ದು ಭಾರತ್ ಜೋಡೋ ನ್ಯಾಯಯಾತ್ರೆ ಛತ್ತೀಸ್ಗಢಕ್ಕೆ ಬಂದಾಗಲೂ ಕಾಂಗ್ರೆಸ್ ಸಂವಹನ ವಿಭಾಗದ ಮುಖ್ಯಸ್ಥ ಸುನಿಲ್ ಆನಂದ್ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದರು. ಈ ಬಗ್ಗೆ ನಾಯಕರಾದ ಬಘೇಲ್, ಜೈರಾಂ ರಮೇಶ್ರಿಗೆ ಹೇಳಿದರೂ ಯಾರೂ ನನ್ನ ನೆರವಿಗೆ ಬಂದಿಲ್ಲ ಎಂದು ಹೇಳಿದ್ದಾರೆ.
ಪಕ್ಷದಲ್ಲಿ ಮಹಿಳಾ ವಿರೋಧಿ ಧೋರಣೆ ಇದೆ. “ಲಡ್ ಕೀ ಹೂಂ ಲಡ್ ಸಖ್ತೀ ಹೂಂ'(ನಾನು ಮಹಿಳೆ, ಹೋರಾಡಬಲ್ಲೆ) ಬದಲಿಗೆ “ಲಡ್ಕೀ ಹೋ ತೋ ಪೀಟೋಗಿ'(ಹೆಣ್ಣಾಗಿದ್ದರೆ ಹೊಡೆತ ಬೀಳುತ್ತೆ) ಎಂಬುದೇ ಸ್ಲೋಗನ್ ಆಗಬೇಕಿತ್ತು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Threat: ವಿಮಾನಕ್ಕೆ ಬಾಂಬ್ ಬೆದರಿಕೆ… ಜೀವ ಭಯದಿಂದ ವಿಮಾನದ ಕಿಟಕಿಯಿಂದ ಹಾರಿದ ಪ್ರಯಾಣಿಕರು
Tamil filmmaker: ಹೃದಯಾಘಾತದಿಂದ ಕಾಲಿವುಡ್ನ ಖ್ಯಾತ ನಿರ್ದೇಶಕ ಸೂರ್ಯ ಪ್ರಕಾಶ್ ನಿಧನ
Producer Swagat Babu: ಕನ್ನಡದ ಖ್ಯಾತ ನಿರ್ಮಾಪಕ ಸ್ವಾಗತ್ ಬಾಬು ನಿಧನ
ಮತ್ತಿಮನೆ, ಸಂಪೇಕಟ್ಟೆ ಭಾಗದಲ್ಲಿ ಮೊಬೈಲ್ ನೆಟ್ ವರ್ಕ್ ಸಮಸ್ಯೆ: ಟವರ್ ಏರಿ ಪ್ರತಿಭಟನೆ
Train; ಜೂನ್ ತಿಂಗಳ ಮೊದಲ ವಾರದಲ್ಲಿ ರೈಲು ವ್ಯತ್ಯಯ