ಆಕಾಶದಿಂದ ಕೆಳಗಿಳಿದ ಚಾಕಲೇಟು ಡಬ್ಬ


Team Udayavani, Oct 11, 2018, 6:00 AM IST

q-4.jpg

ಉತ್ತರ ಕೊರಿಯ ಮತ್ತು ದಕ್ಷಿಣ ಕೊರಿಯ ನಡುವಿನ ಯುದ್ಧದಲ್ಲಿ “ಚೋಶಿನ್‌ ರಿಸರ್‌ವಾಯರ್‌ ಸಮರ’ ಪ್ರಮುಖವಾದುದು. 1950ರಲ್ಲಿ ನಡೆದ ಈ ಯುದ್ಧದಲ್ಲಿ ಚೀನಾ ಮತ್ತು ಅಮೆರಿಕ ಕೂಡಾ ಧುಮುಕಿತ್ತು. ಸುಮಾರು 17 ದಿನಗಳ ಕಾಲ ಶೀತಲ ವಾತಾವರಣದಲ್ಲಿ ಭೀಕರ ಕಾಳಗ ನಡೆದಿದ್ದನ್ನು ಅನೇಕ ಹಿರಿಯ ಸೈನಿಕರು ನೆನಪಿಸಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಅಮೆರಿಕ ಸೈನ್ಯದ ತುಕಡಿಯೊಂದು ಶತ್ರುಗಳ ಮೇಲೆ ಶೆಲ್‌ ಬಾಂಬ್‌ ಧಾಳಿಯಲ್ಲಿ ತೊಡಗಿತ್ತು. ನಿರ್ಣಾಯಕ ಹಂತದಲ್ಲಿ ಅವರ ಬಳಿ ಇದ್ದ ಶೆಲ್‌ಗ‌ಳ ದಾಸ್ತಾನು ಖಾಲಿಯಾಗತೊಡಗಿತ್ತು. ಕಮಾಂಡರ್‌ ರೇಡಿಯೊ ಆಪರೇಟರ್‌ನನ್ನು ಕರೆದು ಸೇನಾ ನೆಲೆಯನ್ನು ಸಂಪರ್ಕಿಸಿ ಆದಷ್ಟು ಬೇಗ ಶೆಲ್‌ಗ‌ಳನ್ನು ಸರಬರಾಜು ಮಾಡಲು ತಿಳಿಸೆಂದು ಆಜ್ಞಾಪಿಸಿದ. ಆಪರೇಟರ್‌ ಸೈನಿಕ ಅದರಂತೆಯೇ ಸೇನಾ ನೆಲೆಯನ್ನು ಸಂಪರ್ಕಿಸಿ “ಚಾಕಲೇಟ್‌ ಖಾಲಿಯಾಗಿದೆ. ಆದಷ್ಟು ಬೇಗನೆ ಸಪ್ಲೆ„ ಮಾಡಿ. ಗಿರಾಕಿಗಳು ಕಾದಿದ್ದಾರೆ’ ಎಂದ. ಅಸಲಿಗೆ ಯುದ್ಧಕಾಲದಲ್ಲಿ ಫೋನ್‌ ಕರೆಗಳನ್ನು ಕದ್ದಾಲಿಸುವುದು ಸಾಮಾನ್ಯವಾಗಿರುವುದರಿಂದ ಸಂಕೇತ ಭಾಷೆಗಳನ್ನು ಬಳಸುತ್ತಾರೆ. ಇದರಿಂದ ಶತ್ರುಗಳು ಕದ್ದಾಲಿಸಿದರೂ ಅವರಿಗೆ ಅದು ಅರ್ಥವಾಗುವುದಿಲ್ಲ. ಅಮೆರಿಕ ಸೇನೆಯಲ್ಲಿ  ಬಾಂಬ್‌ ಶೆಲ್‌ಗ‌ಳಿಗೆ ಕೋಡ್‌ ವರ್ಡ್‌ “ಚಾಕಲೇಟ್‌’ ಎಂಬುದಾಗಿತ್ತು. ಇತ್ತ ಶೆಲ್‌ಗ‌ಳು ಯಾವಾಗ ಬಂದಾವೆಂದು ಸೈನಿಕರು ಕಾದರು. ಅಷ್ಟರಲ್ಲಿ ವಿಮಾನವೊಂದು ಬಂದಿತು. ದೊಡ್ಡ ಡಬ್ಬವನ್ನು ಪ್ಯಾರಾಚೂಟ್‌ ಮುಖಾಂತರ ಸುರಕ್ಷಿತವಾಗಿ ಇಳಿಸಿ ಅದು ಹಾರಿ ಹೋಯಿತು. ಸೈನಿಕರು ಡಬ್ಬ ತೆರೆದು ನೋಡಿದರೆ ಅದರಲ್ಲಿ ಶೆಲ್‌ಗ‌ಳಿಗೆ ಬದಲಾಗಿ ನಿಜಕ್ಕೂ ಚಾಕಲೇಟ್‌ಗಳಿದ್ದುವಂತೆ. ತಲೆ ಕೆಡಿಸಿಕೊಳ್ಳುವ ಸರದಿ ಅಮೆರಿಕನ್‌ ಸೈನಿಕರದಾಯಿತು. “ಚಾಕಲೇಟ್‌’ ಕೋಡ್‌ ವರ್ಡನ್ನು ಬೇಧಿಸಲು ಸಾಧ್ಯವಾಗದೆ ಹತಾಶರಾದ ಶತ್ರು ಸೈನ್ಯದವರೇ ಈ ಕೃತ್ಯದ ಹಿಂದಿರುವರೆಂದು ಅಮೆರಿಕನ್ನರು ತಿಳಿದರು.

ಹವನ

ಟಾಪ್ ನ್ಯೂಸ್

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

1-wewqewqe

BJP; ಭಾರತ ವಿಶ್ವ ಮಟ್ಟದಲ್ಲಿ ಮಿಂಚಿದ್ದು ಮೋದಿ ಅಭಿವೃದ್ಧಿಯಿಂದ: ಅಣ್ಣಾಮಲೈ

1-asdsad

Farmers ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೆ ಬೀದಿಗಿಳಿದು ಹೋರಾಟ:ಯಡಿಯೂರಪ್ಪ

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು

MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

VS Ugrappa: ಪ್ರಜ್ವಲ್‌ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ನಾಯಕರಿಂದ ಸಂಚು: ಉಗ್ರಪ್ಪ

VS Ugrappa: ಪ್ರಜ್ವಲ್‌ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ನಾಯಕರಿಂದ ಸಂಚು: ಉಗ್ರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

1-wewqewqe

BJP; ಭಾರತ ವಿಶ್ವ ಮಟ್ಟದಲ್ಲಿ ಮಿಂಚಿದ್ದು ಮೋದಿ ಅಭಿವೃದ್ಧಿಯಿಂದ: ಅಣ್ಣಾಮಲೈ

1-asdsad

Farmers ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೆ ಬೀದಿಗಿಳಿದು ಹೋರಾಟ:ಯಡಿಯೂರಪ್ಪ

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು

MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.