ನಿರ್ಲಕ್ಷ್ಯದ ರನೌಟ್ಗೆ ಟ್ವೀಟರ್ನಲ್ಲಿ ಗಂಭೀರ್ ಅಪಹಾಸ್ಯ
Team Udayavani, Nov 17, 2018, 6:40 AM IST
ನವದೆಹಲಿ: ಖ್ಯಾತ ಕ್ರಿಕೆಟಿಗ ಪ್ರಸ್ತುತ ದಿಲ್ಲಿ ತಂಡದ ಪರ ರಣಜಿ ಕ್ರಿಕೆಟ್ ಪಂದ್ಯದಲ್ಲಿ ಆಡುತ್ತಿರುವ ಗೌತಮ್ ಗಂಭೀರ್ ನಿರ್ಲಕ್ಷ್ಯದ ರನೌಟ್ಗೆ ತುತ್ತಾಗಿ ಅಪಹಾಸ್ಯಕ್ಕೊಳಗಾದ ಘಟನೆ ನಡೆದಿದೆ.
ನ.14ರಂದು ಹಿಮಾಚಲ ಪ್ರದೇಶ ವಿರುದ್ಧದ ಪಂದ್ಯದ ವೇಳೆ ಗಂಭೀರ್ ಎರಡನೇ ಇನಿಂಗ್ಸ್ನಲ್ಲಿ 20 ಓವರ್ ಆಗಿದ್ದಾಗ ಎರಡು ರನ್ ಕದಿಯಲು ಹೋಗಿ ರನೌಟಾಗಿದ್ದರು. ವಾಸ್ತವವಾಗಿ ಸುಲಭವಾಗಿ ರನೌಟ್ ಆಗುವುದನ್ನು ತಪ್ಪಿಸಿಕೊಳ್ಳಬಹುದಾಗಿದ್ದ ಸನ್ನಿವೇಶದಲ್ಲಿ ಗಂಭೀರ್ ರನೌಟಾಗಿದ್ದರು. ಒಟ್ಟಾರೆ ಇದೊಂದು ನಿರ್ಲಕ್ಷ್ಯದ ರನೌಟಾಗಿತ್ತು. ಪಂದ್ಯದ ಬಳಿಕ ಸ್ವತಃ ಈ ಬಗ್ಗೆ ಗಂಭೀರ್ ತಮ್ಮನ್ನು ತಾವೇ ಟ್ವೀಟರ್ನಲ್ಲಿ ಅಣಕವಾಡಿಕೊಂಡಿದ್ದಾರೆ.
ತಮ್ಮ ಮಗಳು ಅಝೀನ್ ಮಕ್ಕಳ ದಿನಾಚರಣೆಯಂದು ಪ್ರತಿಕ್ರಿಯೆ ನೀಡಿರುವಂತೆ “ಪಪ್ಪ ನೀನು ಇಂದು ರಣಜಿ ಕ್ರಿಕೆಟ್ನಲ್ಲಿ ಮಗುವಿನಂತೆ ರನೌಟಾಗಿದ್ದೀಯ’ ಎಂದು ಪ್ರಕಟಿಸಿಕೊಂಡಿದ್ದಾರೆ. ತಮ್ಮನ್ನು ತಾವೇ ಅಣಕವಾಡಿಕೊಂಡಿದ್ದಾರೆ.