ಮಲೆನಾಡಿನ ಅಡಕೆ ವ್ಯಾಪಾರದಲ್ಲಿ ಹೆಚ್ಚಾಯ್ತು ಗೋಲ್‌ಮಾಲ್‌ ​​​​​​​


Team Udayavani, Dec 7, 2018, 6:35 AM IST

arecanu.jpg

ಶಿವಮೊಗ್ಗ: ಬೇರೆ ರಾಜ್ಯಗಳ ಕಡಿಮೆ ಗುಣಮಟ್ಟದ ಅಡಕೆಯನ್ನು ಶಿವಮೊಗ್ಗಕ್ಕೆ ತಂದು ಇಲ್ಲಿ ಮಿಕ್ಸಿಂಗ್‌ ಮಾಡುತ್ತಿರುವ ಆರೋಪದ ಬೆನ್ನಲ್ಲೇ ಉತ್ತರ ಭಾರತದ ಮಾರುಕಟ್ಟೆಯಿಂದ ಮಲೆನಾಡಿನ ಅಡಕೆ ವಾಪಸ್ಸಾಗುತ್ತಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.

ಪ್ರತಿ ದಿನ 10ರಿಂದ 20 ಲಾರಿಗಳಲ್ಲಿ ಉತ್ತರ ಭಾರತದ ಗುಜರಾತ್‌, ಮಹಾರಾಷ್ಟ್ರಗಳಿಗೆ ಶಿವಮೊಗ್ಗದ ಎಪಿಎಂಸಿಯಿಂದ ಅಡಕೆ ರವಾನೆಯಾಗುತ್ತದೆ. ಇದರಲ್ಲಿ ಒಂದು ಅಥವಾ ಎರಡು ಲಾರಿಗಳು ಕಳಪೆ ಗುಣಮಟ್ಟದ್ದು ಎಂಬ ಕಾರಣಕ್ಕೆ ವಾಪಸ್ಸಾಗುತ್ತಿವೆ. ಹೀಗೆ ವಾಪಸ್‌ ಆಗುವ ಅಡಕೆಗೆ ತೆರಿಗೆ ವಾಪಸ್‌ ನೀಡಲಾಗುತ್ತಿದೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ವ್ಯಾಪಾರಸ್ಥರು ಸರಕಾರಕ್ಕೆ ಕೋಟ್ಯಂತರ ರೂ.ತೆರಿಗೆ ವಂಚಿಸುತ್ತಿದ್ದಾರೆ. ಎಲ್ಲ ವಹಿವಾಟುಗಳು ನಿಯಾಮವಳಿ ಪ್ರಕಾರವೇ ನಡೆಯುವುದರಿಂದ ಈ ಜಾಲ ಪತ್ತೆ ಹಚ್ಚಲು ಅಧಿ ಕಾರಿಗಳೂ ವಿಫಲರಾಗಿದ್ದಾರೆ.

ತಿರಸ್ಕೃತ ಪ್ರಮಾಣ ದುಪ್ಪಟ್ಟು:
2016, 2017ರಲ್ಲಿ ವರ್ಷಕ್ಕೆ ಎರಡೂ¾ರು ಲಾರಿ ಲೋಡ್‌ ಅಡಕೆ ವಾಪಸ್‌ ಬರುತ್ತಿದ್ದವು. ಆದರೆ, ಈ ವರ್ಷ ಇದರ ಪ್ರಮಾಣ ಒಮ್ಮೇಲೇ ಹೆಚ್ಚಾಗಿದೆ. ಅಕ್ಟೋಬರ್‌ ಹಾಗೂ ನವೆಂಬರ್‌ನಲ್ಲಿಯೇ 18 ಲೋಡ್‌ಗಳಿಗೂ ಹೆಚ್ಚು ಅಡಕೆ ವಾಪಸ್ಸಾಗಿದೆ. ಇಷ್ಟು ವರ್ಷ ಇಲ್ಲದಿದ್ದ ಕಳಪೆ ಗುಣಮಟ್ಟದ ಅಡಕೆ ಈಗ ಹೇಗೆ ಸಿಗುತ್ತಿದೆ ಎಂಬುದೇ ಪ್ರಶ್ನೆಯಾಗಿದ್ದು, ಉತ್ತರ ಸಿಗುತ್ತಿಲ್ಲ. ಮಲೆನಾಡಿನ ಅಡಕೆಯಲ್ಲಿ ಗುಣಮಟ್ಟದ ಕೊರತೆ ಇರೋದು ತೀರಾ ಕಡಿಮೆ. ಅಲ್ಲದೆ ಗ್ರೇಡಿಂಗ್‌ ಸಹ ಸರಿಯಾಗಿ ಮಾಡಲಾಗುತ್ತದೆ. ಆದರೂ ಇದ್ದಕ್ಕಿದ್ದಂತೆ ಇಷ್ಟೊಂದು ಪ್ರಮಾಣದಲ್ಲಿ ಅಡಕೆ ವಾಪಸ್ಸಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ತಿರಸ್ಕೃತ ಅಡಕೆ ಯಾರಿಗೆ ಲಾಭ?
ಗುಟ್ಕಾ ಮತ್ತು ಅಡಕೆ ಪುಡಿ ಉತ್ಪಾದನಾ ಕಂಪನಿಗಳ ಬೇಡಿಕೆಗೆ ಅನುಗುಣವಾಗಿ ಶಿವಮೊಗ್ಗದಿಂದ ಉತ್ತರ ಭಾರತದ ನಿಗದಿತ ವಿಳಾಸಕ್ಕೆ ಅಡಕೆ ವಿಲೇವಾರಿಯಾಗುತ್ತದೆ. ಆದರೆ, ಅದೇ ಲಾರಿಯಲ್ಲಿ ಕಳಪೆ ಗುಣಮಟ್ಟದ ಅಡಕೆ ತುಂಬಿ ತಿರಸ್ಕೃತದ ಲೇಬಲ್‌ ಅಂಟಿಸಿಕೊಂಡು ಶಿವಮೊಗ್ಗಕ್ಕೆ ತರಲಾಗುತ್ತದೆ. ಎಪಿಎಂಸಿಯಲ್ಲಿ ಖರೀದಿಯಾಗಿ ಹೊರಗೆ ಹೋಗುವ ಅಡಕೆಗೆ ಶೇ.1.50 ಎಪಿಎಂಸಿ ಸೆಸ್‌ ಮತ್ತು ಶೇ.3ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. ಒಟ್ಟಾರೆ ಶೇ.4.50ರಷ್ಟು ತೆರಿಗೆ ಬೀಳುತ್ತದೆ. ಸಾಮಾನ್ಯವಾಗಿ ಲಾರಿಗಳಲ್ಲಿ 70ರಿಂದ 80 ಲಕ್ಷ ರೂ.ಮೌಲ್ಯದ 20ರಿಂದ 21 ಟನ್‌ ಅಡಕೆ ತುಂಬಲಾಗುತ್ತದೆ. ಅಂದರೆ, ಅದಕ್ಕೆ 3ರಿಂದ 4 ಲಕ್ಷ ರೂ.ನಷ್ಟು ತೆರಿಗೆ ವಿಧಿಸಲಾಗುತ್ತದೆ. ಅಕಸ್ಮಾತ್‌ ಅಡಕೆ ತಿರಸ್ಕೃತಗೊಂಡಲ್ಲಿ ಸಂಪೂರ್ಣ ತೆರಿಗೆ ಮನ್ನಾ ಆಗಲಿದೆ. ಹೀಗೆ ತಿರಸ್ಕೃತಗೊಂಡ ಅಡಕೆಯಿಂದ ಅಕ್ಟೋಬರ್‌ ತಿಂಗಳಲ್ಲೇ ವರ್ತಕರು 70ರಿಂದ 80 ಲಕ್ಷ ರೂ. ತೆರಿಗೆ ವಾಪಸ್‌ ಪಡೆದಿದ್ದಾರೆ.

ಈ ಅವಕಾಶವನ್ನೇ ಬಳಸಿಕೊಂಡು ವರ್ತಕರು ಉತ್ತರ ಭಾರತದ ಕಡೆಯಿಂದ ಕಳಪೆ ಗುಣಮಟ್ಟದ ಅಡಕೆಯನ್ನು ತಿರಸ್ಕೃತದ ಲೆಕ್ಕದಲ್ಲಿ ಶಿವಮೊಗ್ಗಕ್ಕೆ ತರಿಸಿಕೊಳ್ಳುತ್ತಿದ್ದಾರೆಂದು ಹೇಳಲಾಗುತ್ತಿದೆ. ರೈತರು ಅಡಕೆಯನ್ನು ಎಪಿಎಂಸಿಗೆ ತಂದಾಗ  “ಎ’ ಬಿಲ್‌ ನೀಡಲಾಗುತ್ತದೆ. ಖರೀದಿಯಾದ ಬಳಿಕ  “ಬಿ’ ಬಿಲ್‌ ಹಾಗೂ ಅದೇ ಅಡಕೆಯನ್ನು ಹೊರಗೆ ಮಾರಾಟ ಮಾಡಿದಾಗ  “ಸಿ’ ಬಿಲ್‌ ನೀಡಲಾಗುತ್ತದೆ. ಆದರೆ, ಸಿ ಬಿಲ್‌ನಲ್ಲಿ ಅಡಕೆಯ ತೂಕ ಮತ್ತು ಧಾರಣೆ ಇರುತ್ತದೆಯೇ ಹೊರತು ಯಾವ ಮಾದರಿ ಎಂಬುದು ಇರುವುದಿಲ್ಲ.

ಕಳಪೆ ಗುಣಮಟ್ಟದ ಅಡಕೆ ತಿರಸ್ಕೃತಗೊಂಡು ವಾಪಸಾಗುವುದು ವರ್ತಕರಿಗೆ ನಷ್ಟ. ಮಲೆನಾಡಿನ ಅಡಕೆಗೆ ಅವಮಾನವೆಂದು ಎಪಿಎಂಸಿ ಭಾವಿಸಿತ್ತು. ಆದರೆ, ಇದರ ಹಿಂದೆ ತೆರಿಗೆ ವಂಚನೆಯ ಹುನ್ನಾರ ಅಡಗಿರಬಹುದೆಂಬ ಸಂಶಯವೂ ಮೂಡಿದೆ.

ಹಿಂದೆಲ್ಲ ಇಷ್ಟೊಂದು ಪ್ರಮಾಣದಲ್ಲಿ ಅಡಕೆ ವಾಪಸ್‌ ಬರುತ್ತಿರಲಿಲ್ಲ. ಈ ವರ್ಷ ಇದರ ಪ್ರಮಾಣ ತೀವ್ರವಾಗಿ ಏರಿದೆ. ಕೆಲ ವ್ಯಾಪಾರಿಗಳ ಪ್ರಕಾರ ದೆಹಲಿಯ ವ್ಯಾಪಾರಿಯೊಬ್ಬರೇ ಈ ರೀತಿ ಮಾಡುತ್ತಿದ್ದಾರೆ. ಆ ಕಂಪನಿಯಲ್ಲಿ ಹೊಸದಾಗಿ ಬಂದಿರುವ ಯುವಕರು ಮುಲಾಜಿಲ್ಲದೆ ಮಾಲನ್ನು ರಿಜೆಕ್ಟ್ ಮಾಡುತ್ತಿದ್ದಾರೆ ಎನ್ನುತ್ತಾರೆ. ಇತ್ತೀಚೆಗೆ ಅಡಕೆ ವಾಪಸ್‌ ಬರುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
– ಹೆಸರು ಹೇಳಲಿಚ್ಛಿಸದ ಎಪಿಎಂಸಿ ಅಧಿಕಾರಿ.

ಭಾರೀ ಪ್ರಮಾಣದಲ್ಲಿ ಅಡಕೆ ವಾಪಸ್ಸಾಗುತ್ತಿರುವುದು ಅನುಮಾನ ಮೂಡಿಸಿದೆ. ಈ ಬಗ್ಗೆ ಮೇಲಧಿ ಕಾರಿಗಳಿಗೆ ಮನವಿ ಮಾಡಿದ್ದೇವೆ. ಸಚಿವರಿಗೂ ಈ ಬಗ್ಗೆ ಗಮನಕ್ಕೆ ತರಲಾಗುವುದು. ಇದುವರೆಗೆ ಎಷ್ಟು ಲಾರಿಗಳು ತಿರಸ್ಕೃತದ ಹೆಸರಲ್ಲಿ ವಾಪಸ್ಸಾಗಿದೆ, ಎಲ್ಲಿಂದ ಬಂದಿದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ.
– ದುಗ್ಗಪ್ಪಗೌಡ, ಅಧ್ಯಕ್ಷರು, ಎಪಿಎಂಸಿ, ಶಿವಮೊಗ್ಗ.

– ಶರತ್‌ ಭದ್ರಾವತಿ

ಟಾಪ್ ನ್ಯೂಸ್

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

B.Y. Raghavendra: ಕಾಂಗ್ರೆಸ್‌ನವರ ಬಳಿ ಗ್ಯಾರಂಟಿ ಅಡ್ವಾನ್ಸ್‌ ಹಣ ಕೇಳಿ: ಬಿವೈಆರ್‌

B.Y. Raghavendra: ಕಾಂಗ್ರೆಸ್‌ನವರ ಬಳಿ ಗ್ಯಾರಂಟಿ ಅಡ್ವಾನ್ಸ್‌ ಹಣ ಕೇಳಿ: ಬಿವೈಆರ್‌

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.