ಕುಡುಪು: ಬ್ರಹ್ಮರಥೋತ್ಸವಕ್ಕೆ  ಸಾವಿರಾರು ಭಕ್ತರ ದಂಡು


Team Udayavani, Dec 14, 2018, 11:14 AM IST

14-december-5.gif

ವಾಮಂಜೂರು (ಕುಡುಪು) : ಶ್ರೀ ಅನಂತ ಪದ್ಮನಾಭ ದೇವಸ್ಥಾನ ಕುಡುಪಿನಲ್ಲಿ ನಡೆದ ಷಷ್ಠಿ ಮಹೋತ್ಸವದ ಸಂಭ್ರಮ ಮುಗಿಲು ಮುಟ್ಟಿದ್ದು, ಮಧ್ಯಾಹ್ನದ ವೇಳೆ ನಡೆದ ಬ್ರಹ್ಮರಥೋತ್ಸವಕ್ಕೆ ಸಾವಿರಾರು ಮಂದಿ ಭಕ್ತರು ಆಗಮಿಸಿ ದೇವರ ದಿವ್ಯ ದರ್ಶನ ಪಡೆದರು.

ಬೆಳಗ್ಗಿನಿಂದಲೇ ಜಿಲ್ಲೆಯ ನಾನಾ ಕಡೆಗಳಿಂದ ಆಗಮಿಸಿದ ಭಕ್ತರು ಸರದಿ ಸಾಲಿನಲ್ಲಿ ನಿಂತು ಅನಂತಪದ್ಮನಾಭನ ದರ್ಶನ ಪಡೆದರು. ಹಲವು ಭಕ್ತರು ಮಡೆಸ್ನಾನದಲ್ಲಿ ಪಾಲ್ಗೊಂಡರು. ದೇಗುಲದ ಹಿಂಭಾಗದಲ್ಲಿರುವ ನಾಗಬನದಲ್ಲಿ ದೇವರ ದರ್ಶನ ಪಡೆದರು. ಅನಂತ ಪದ್ಮನಾಭನ ಪ್ರೀತ್ಯರ್ಥ ವಾಗಿರುವ ತಂಬಿಲ ಸೇವೆ, ಆಶ್ಲೇಷಾ, ಸೀಯಾಳ ಅಭಿಷೇಕ, ಪಂಚಾಮೃತ, ಕ್ಷೀರಾಭಿಷೇಕ ಹರಕೆ ಸಲ್ಲಿಸಿದರು. ಬೆಳ್ಳಿ ಹರಕೆ ಸಮರ್ಪಿಸಿದರು.

ಬ್ರಹ್ಮರಥೋತ್ಸವ
ನವಕಲಷಾಭಿಷೇಕ, ರಥ ಕಲಶ ಮಹಾ ಪೂಜೆ ನಡೆದ ಬಳಿಕ ದೇವರ ಬಲಿ ಉತ್ಸವ ನಡೆದು ಮಧ್ಯಾಹ್ನ ರಥಬೀದಿಯಲ್ಲಿ ಬ್ರಹ್ಮರಥೋತ್ಸವ ನಡೆಯಿತು.  ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ರಾದ ಕುಡುಪು ನರಸಿಂಹ ತಂತ್ರಿ, ಕೃಷ್ಣ ರಾಜ ತಂತ್ರಿ, ಆನುವಂಶಿಕ ಅರ್ಚಕ ಮನೋಹರ ಭಟ್‌, ಪವಿತ್ರಪಾಣಿ ಬಾಲಕೃಷ್ಣ ಭಟ್‌, ಕ್ಷೇತ್ರದ ಆಡಳಿತ ಮೊಕ್ತೇಸರ ಭಾಸ್ಕರ್‌ ಕೆ., ಕಾರ್ಯನಿರ್ವಹಣಾಧಿಕಾರಿ ಅರವಿಂದ ಎ. ಸುತಗುಂಡಿ, ಸುಜನ್‌ ದಾಸ್‌ ಕುಡುಪು, ವಾಸುದೇವ ರಾವ್‌ ಕುಡುಪು, ಉದಯಕುಮಾರ್‌ ಕುಡುಪು ಇದ್ದರು.

ಸ್ಥಳೀಯರಿಂದ ಮಜ್ಜಿಗೆ ವಿತರಣೆ
ಬಿಸಿಲಿನ ಝಳಕ್ಕೆ ಬಾಯಾರಿದವರಿಗಾಗಿ ಸ್ಥಳೀಯ ಯುವಕರ ಸಹಕಾರದಿಂದ ಮಜ್ಜಿಗೆಯ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ಮಜ್ಜಿಗೆ ಸೇವಿ ಸಿದರು. ಬುಧವಾರ ರಾತ್ರಿ ರಾತ್ರಿ ಸವಾರಿ ಬಲಿ, ಕಟ್ಟೆಪೂಜೆಗಳು, ತೆಪ್ಪೋತ್ಸವ, ಎರಡನೇ ಬಲಿ ಉತ್ಸವ, ಚಂದ್ರಮಂಡಲ ಉತ್ಸವ, ಅಶ್ವವಾಹನೋತ್ಸವ, ಪಾಲಕಿ ಉತ್ಸವ ನಡೆದ ಬಳಿಕ ಪ್ರಸಾದ ವಿತರಣೆ ನಡೆದಿತ್ತು.

ಪಾರ್ಕಿಂಗ್‌ ಸಮಸ್ಯೆ
ಜಿಲ್ಲೆಯನ್ನಲ್ಲದೆ ಹೊರ ಜಿಲ್ಲೆ, ಹೊರ ರಾಜ್ಯಗಳಿಂದಲೂ ಸಾವಿರಾರು ಭಕ್ತರು ಆಗಮಿಸಿದ್ದರಿಂದ ಪಾರ್ಕಿಂಗ್‌ ಸಮಸ್ಯೆ ತಲೆದೋರಿತ್ತು. ಸ್ವಯಂ ಸೇವಕರು, ಟ್ರಾಫಿಕ್‌ ಪೊಲೀಸರು ಹಾಗೂ ಪೊಲೀಸರು ಟ್ರಾಫಿಕ್‌ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನೋಡಿಕೊಂಡರು.

ಸಾರಿಗೆ ವಾಹನಗಳಿಗೆ ನಿರ್ಬಂಧ
ಕುಡುಪು ದೇವಸ್ಥಾನದಲ್ಲಿ ಬ್ರಹ್ಮ ರಥೋತ್ಸವ ಇದ್ದ ಕಾರಣ 12.30ರ ಬಳಿಕ ನೀರುಮಾರ್ಗ ಕ್ರಾಸ್‌ ಹಾಗೂ ವಾಮಂಜೂರು ಮಂಗಳಜ್ಯೋತಿ ಸಮೀಪದ ಮಂಗಳೂರು ಕ್ರಾಸ್‌ ವರೆಗೆ ಸಾರಿಗೆ ವಾಹನಗಳಿಗೆ ನಿರ್ಬಂಧ ಹೇರಿದ್ದು, ಕೇವಲ ದೇವಸ್ಥಾನಕ್ಕೆ ಬರುವ ಭಕ್ತರ ವಾಹನಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಬ್ರಹ್ಮರಥವು ದೇವಸ್ಥಾನದ ರಥಬೀದಿಯಲ್ಲಿ ಸಾಗಿ ಕುಡುಪು ಕಟ್ಟೆಗೆ ಬಂದು ಯಥಾಸ್ಥಾನದಕ್ಕೆ ತೆರಳಿ ನಿಲ್ಲುವವರೆಗೆ ಈ ನಿರ್ಬಂಧ ವಿಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಮೂಡುಬಿದಿರೆ-ಕಾರ್ಕಳಕ್ಕೆ ಸಾಗುವ ವಾಹನಗಳು ನಂತೂರಿನಿಂದ ಕೆಪಿಟಿ ರಸ್ತೆಯಾಗಿ ಪಚ್ಚನಾಡಿ ಬೋಂದೆಲ್‌ ಮುಖಾಂತರ ವಾಮಂಜೂರಿಗೆ ಸಾಗಿ ಬಂದು ತಮ್ಮ ಗಮ್ಯ ಸ್ಥಾನವನ್ನು ತಲುಪಿದವು. ಈ ಕಾರಣದಿಂದ ಮಂಗಳೂರಿಗೆ ಸಾಗುವ ಭಕ್ತರು ದೇವಸ್ಥಾನದಿಂದ ನೀರುಮಾರ್ಗ ಕ್ರಾಸ್‌ ತನಕ, ಕುಡುಪುನಿಂದ ಗುರುಪುರ, ಕೈಕಂಬ ಮುಂತಾದ ಕಡೆ ಸಾಗುವ ಭಕ್ತರು ವಾಮಂಜೂರಿನ ಮಂಗಳಜ್ಯೋತಿ ತನಕ ಸುಮಾರು 1 ಕಿ.ಮೀ. ವರೆಗೆ ನಡೆದುಕೊಂಡು ಸಾಗಿದ್ದಾರೆ. ರಿಕ್ಷಾ ಬಾಡಿಗೆಗೆ ವ್ಯವಸ್ಥೆ ಮಾಡಿದ್ದರಿಂದ ರಿಕ್ಷಾ ಚಾಲಕರ ಮೊಗದಲ್ಲಿ ಸಂತಸ ಮೂಡಿತ್ತು.

ನಿರಂತರ ಅನ್ನದಾನ 
ಭಕ್ತರ ಅನುಕೂಲಕ್ಕಾಗಿ ಕುಡುಪು ದೇವಸ್ಥಾನದಲ್ಲಿ ನಿರತಂತರ ಅನ್ನದಾನವನ್ನು ಬೆಳಗ್ಗಿನಿಂದಲೇ ಕಲ್ಪಿಸಲಾಗಿತ್ತು. ಭಕ್ತರಿಗೆ ಯಾವುದೇ ಅನನುಕೂಲವಾಗದಂತೆ 15 ಕೌಂಟರ್‌ಗಳಲ್ಲಿ ಅನ್ನದಾನಕ್ಕೆ ವ್ಯವಸ್ಥೆ ಮಾಡಿದ್ದರಿಂದ ಯಾವುದೇ ನೂಕುನುಗ್ಗಲು ಉಂಟಾಗಿಲ್ಲ. ಸಂಜೆಯ ತನಕವೂ ನಿರಂತರ ಅನ್ನದಾನ ನಡೆದಿದ್ದು, ಸಾವಿರಾರು ಮಂದಿ ಭಕ್ತರು ಭೋಜನ ಸವಿದಿದ್ದಾರೆ. ಸ್ವಯಂಸೇವಕರು ಭೋಜನ ಬಡಿಸುವ ಸೇವೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

ಜೋಡು ದೇವರ ಉತ್ಸವ 
ಷಷ್ಠಿ ಮಹೋತ್ಸವದ ಪ್ರಯುಕ್ತ ಶುಕ್ರವಾರ ಬೆಳಗ್ಗೆ ಜೋಡು ದೇವರ ಉತ್ಸವ ನಡೆಯಲಿದ್ದು, ಕುಡುಪುವಿನಲ್ಲಿ ಇದು ವಿಶೇಷವಾಗಿರುವುದರಿಂದ ಇದಕ್ಕೂ ಸಾವಿರಾರು ಭಕ್ತರು ಸೇರು ವ ನಿರೀಕ್ಷೆ ಇದೆ.

ಟಾಪ್ ನ್ಯೂಸ್

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

Kerala ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

Kerala ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.