ಕಾಸರಗೋಡು: ಸೆಪ್ಟಿಕ್‌ ಟ್ಯಾಂಕ್‌ ಫುಲ್‌; ಶೌಚಾಲಯ ಬಂದ್‌


Team Udayavani, Jan 14, 2019, 7:04 AM IST

14-january-11.jpg

ಕಾಸರಗೋಡು : ಸಾವಿರಾರು ಪ್ರಯಾಣಿಕರು ತಲುಪುವ ಕಾಸರಗೋಡಿನ ಹೊಸ ಬಸ್‌ ನಿಲ್ದಾಣದ ಶೌಚಾಲಯ ಮುಚ್ಚಿರುವುದರಿಂದ ಪ್ರಯಾಣಿಕರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಸೆಪ್ಟಿಕ್‌ ಟ್ಯಾಂಕ್‌ ತುಂಬಿರುವುದರಿಂದ ಶೌಚಾಲಯ ಒಂದು ವಾರದಿದ ಮುಚ್ಚಿದ್ದು, ಇದರಿಂದ ಬಸ್‌ ನಿಲ್ದಾಣಕ್ಕೆ ತಲುಪುವ ಪ್ರಯಾಣಿಕರು ಸಮಸ್ಯೆಗೆ ತುತ್ತಾಗಿದ್ದು, ಶೌಚಾಲಯವಿಲ್ಲದೆ ಬೇರೆ ದಾರಿ ಹುಡುಕ ಬೇಕಾದ ದುಸ್ಥಿತಿಗೆ ತಲುಪಿದ್ದಾರೆ.

ಟ್ಯಾಕ್ಸಿ ಸ್ಟೇಂಡ್‌ ಸಮೀಪದಲ್ಲಿರುವ ಸೆಪ್ಟಿಕ್‌ ಟ್ಯಾಂಕ್‌ ತುಂಬಿರುವುದರಿಂದ ಶೌಚಾಲಯ ಮುಚ್ಚಬೇಕಾದ ಪರಿಸ್ಥಿತಿ ಎದುರಾಗಿದ್ದು, ಬದಲಿ ವ್ಯವಸ್ಥೆ ಮಾಡದೆ ಶೌಚಾಲಯ ಮುಚ್ಚಿರುವುದರಿಂದ ಬಸ್‌ ನಿಲ್ದಾಣದಲ್ಲಿರುವ ವರ್ತಕರು, ಪ್ರಯಾಣಿಕರು ವಿವಿಧ ಸಮಸ್ಯೆ ಅನು ಭವಿಸುವಂತಾಗಿದೆ. ಬಳಸುತ್ತಿರು ವಾಗ ಮಲಿನ ನೀರು ಮೇಲೇರುತ್ತಿರು ವುದರಿಂದ ಶೌಚಾಲಯ ಮುಚ್ಚಲಾಗಿದೆ ಎಂಬುದು ಸಂಬಂಧಪಟ್ಟವರ ಹೇಳಿಕೆ. 25 ವರ್ಷಗಳಿಗೂ ಹಳೆಯದಾ ಗಿದೆ ಸೆಪ್ಟಿಕ್‌ ಟ್ಯಾಂಕ್‌. ಆರಂಭದ ಹಂತದಲ್ಲಿ ಕಿರುಗಾತ್ರದ ಸೆಪ್ಟಿಕ್‌ ಟ್ಯಾಂಕ್‌ ನಿರ್ಮಿಸಲಾಗಿತ್ತು. ಆ ಬಳಿಕ ದೊಡ್ಡ ಗಾತ್ರದಲ್ಲಿ ಸೆಪ್ಟಿಕ್‌ ಟ್ಯಾಂಕ್‌ ನಿರ್ಮಿಸಿದ್ದರೂ, ಈ ವರೆಗೆ ಒಂದು ಬಾರಿ ಮಾತ್ರವೇ ಟ್ಯಾಂಕ್‌ನಿಂದ ಮಲಿನವನ್ನು ತೆರವುಗೊಳಿಸಲಾಗಿತ್ತು.

ಶೌಚಾಲಯದಿಂದ ಸೆಪ್ಟಿಕ್‌ ಟ್ಯಾಂಕ್‌ಗಿರುವ ಪೈಪುಗಳನ್ನು ಪರಿಶೀಲಿಸಿದರೂ ಅದರಲ್ಲಿ ತೊಂದರೆ ಕಂಡು ಬರಲಿಲ್ಲ. ಟ್ಯಾಂಕ್‌ಗಳನ್ನು ಶುಚಿಗೊಳಿಸುವ ಕಾರ್ಮಿಕರು ಬಂದು ಪರಿಶೀಲಿಸಿದಾಗ ಟ್ಯಾಂಕ್‌ ತುಂಬಾ ಮಲಿನ ತುಂಬಿರುವುದು ಕಂಡು ಬಂತು. ಸೆಪ್ಟಿಕ್‌ ಟ್ಯಾಂಕ್‌ನಲ್ಲಿ ತುಂಬಿರುವ ಮಲಿನವನ್ನು ಒಂದು ಲಾರಿಯಲ್ಲಿ ತುಂಬಿ ಸಾಗಿಸಬೇಕಾದರೆ 25 ಸಾವಿರ ರೂಪಾಯಿ ನೀಡಬೇಕೆಂದು ಬೇಡಿಕ ್ನ ಮುಂದಿಟ್ಟಿದ್ದರು. ಇದರಲ್ಲಿ ಎರಡು ಲಾರಿಯಲ್ಲಿ ತುಂಬಿಸುವಷ್ಟು ಮಲಿನ ಇರಬಹುದಾಗಿದ್ದು, ಎರಡು ಲಾರಿಯಲ್ಲಿ ಮಲಿನ ಸಾಗಿಸಿಬೇಕಾದರೆ ಶೌಚಾಲಯ ಗುತ್ತಿಗೆದಾರ 50 ಸಾವಿರ ರೂಪಾಯಿ ನೀಡಬೇಕಾಗುತ್ತದೆ. ಆದರೆ ಶೌಚಾಲಯ ನಿರ್ವಹಿಸುವ ವ್ಯಕ್ತಿಗೆ ಇಷ್ಟು ಹಣ ನೀಡಲು ಸಾಧ್ಯ ವಾಗದಿರುವುದರಿಂದ ನಗರಸಭೆಯನ್ನು ಸಂಪರ್ಕಿಸಲಾಗಿದೆ.

ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ವಿಳಂಬವಾಗುವುದರಿಂದ ಶೌಚಾಲಯ ತೆರೆಯುವ ಕುರಿತು ಇನ್ನೂ ಅನಿಶ್ಚಿತತೆ ಎದುರಾಗಿದೆ. ಶೌಚಾಲಯ ಮುಚ್ಚು ಗಡೆಯಿಂದಾಗಿ ದೀರ್ಘ‌ ದೂರ ಪ್ರಯಾಣಿಕರಾದ ಮಹಿಳೆಯರೂ, ಮಕ್ಕಳು ಸಹಿತ ತೀವ್ರ ಸಮಸ್ಯೆಯನ್ನು ಎದುರಿಸು ವಂತಾಗಿದೆ. ಇದೀಗ ಮುಚ್ಚುಗಡೆ ಗೊಂಡಿರುವ ಶೌಚಾಲಯವಲ್ಲದೆ ಬಸ್‌ ನಿಲ್ದಾಣದಲ್ಲಿ ಬೇರೆ ಶೌಚಾಲಯವಿಲ್ಲ.

ಶೀಘ್ರ ಪರಿಹಾರ
ಹೊಸ ಬಸ್‌ ನಿಲ್ದಾಣದ ಎರಡೂ ಶೌಚಾಲಯಗಳನ್ನು ಮುಚ್ಚಿರುವ ಬಗ್ಗೆ ಗಮನಕ್ಕೆ ಬಂದಿದೆ. ಆರೋಗ್ಯ ವಿಭಾಗ ಇದನ್ನು ದುರಸ್ತಿಗೊಳಿಸಬೇಕು. ಸೆಪ್ಟಿಕ್‌ ಟ್ಯಾಂಕ್‌ನಲ್ಲಿ ಮಲಿನವನ್ನು ತೆರವುಗೊಳಿಸಲು ಸಂಬಂಧಪಟ್ಟವರಿಗೆ ನಿರ್ದೇಶ ನೀಡಲಾಗುವುದು. ಹೊಸ ಬಸ್‌ ನಿಲ್ದಾಣದಲ್ಲಿರುವ ಇ-ಟಾಯ್ಲೆಟ್ ಕೂಡಾ ತೆರೆಯಲು ಸಾಧ್ಯವಾಗದ ಸ್ಥಿತಿಯಲ್ಲಿದೆ. ಈ ಕಾರಣದಿಂದ ಬಸ್‌ ನಿಲ್ದಾಣಕ್ಕೆ ಬರುವ ಮಹಿಳೆಯರು, ಮಕ್ಕಳು ಸಹಿತ ಪ್ರಯಾಣಿಕರು ಸಂಕಷ್ಟ ಅನುಭವಿಸುವಂತಾಗಿದೆ. ಶೀಘ್ರವೇ ಸಮಸ್ಯೆಗೆ ಪರಿಹಾರ ನೀಡಲಾಗುವುದು.
-ಬಿ. ಫಾತಿಮಾ ಇಬ್ರಾಹಿಂ,
ಅಧ್ಯಕ್ಷರು, ಕಾಸರಗೋಡು ನಗರಸಭೆ

ಇ-ಟಾಯ್ಲೆಟ್
ಈ ಹಿಂದೆ ಕಾಸರಗೋಡು ಹೊಸ ಬಸ್‌ ನಿಲ್ದಾಣದಲ್ಲಿ ಇ-ಟಾಯ್ಲೆಟ್ ಸ್ಥಾಪಿಸಲಾಗಿತ್ತು. ಆದರೆ ಇ-ಟಾಯ್ಲೆಟ್ ಕೆಲವೇ ದಿನಗಳಲ್ಲಿ ಕೆಟ್ಟು ಹೋದುದರಿಂದ ಕೆಲವು ತಿಂಗಳ ಬಳಿಕ ದುರಸ್ತಿ ಗೊಳಿಸಲಾಗಿತ್ತು. ಕೆಲವು ದಿನಗಳ ತನಕ ಕಾರ್ಯಾಚರಿಸಿದ ಇ-ಟಾಯ್ಲೆಟ್ ಮತ್ತೆ ಕೆಟ್ಟು ಹೋದುದರಿಂದ ದುರಸ್ತಿ ಕಾಣದೆ ಇದೀಗ ಸಿನೆಮಾ ಪೋಸ್ಟರ್‌ಗಳ ಸಹಿತ ಪ್ರದರ್ಶಿಸುವ ಕೇಂದ್ರವಾಗಿ ಬದಲಾಗಿದೆ. ಇದೀಗ ಬಸ್‌ ನಿಲ್ದಾಣದಲ್ಲಿ ಮಹಿಳೆಯರ ಮತ್ತು ಗಂಡಸರ ಶೌಚಾಲಯ ಮುಚ್ಚಿದ್ದು, ಇ-ಟಾಯ್ಲೆಟ್ ಕೂಡಾ ಮುಚ್ಚಿರುವುದರಿಂದ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರು ಸಮಸ್ಯೆಯನ್ನು ಎದುರಿಸುವಂತಾಗಿದೆ.

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.