ಶ್ರೀಕೃಷ್ಣಮಠದೆದುರಿನ ಚರಂಡಿ ಕಾಮಗಾರಿ ದುರಸ್ತಿ
Team Udayavani, Feb 1, 2019, 12:50 AM IST
ಉಡುಪಿ: ಶ್ರೀಕೃಷ್ಣ ಮಠದೆದುರಿಗಿನ ಮಳೆ ನೀರು ಹರಿಯುವ ಚರಂಡಿಯನ್ನು ದುರಸ್ತಿಪಡಿಸಲಾಗುತ್ತಿದೆ.
ಇಲ್ಲಿ ನೀರು ಹರಿಯುವಿಕೆ ಸಮಸ್ಯೆಯಾಗಿತ್ತು. ಇದನ್ನು ನಗರಸಭೆ ನಿಧಿಯಿಂದ ದುರಸ್ತಿಪಡಿಸಲಾಗುತ್ತಿದೆ. ಈ ನೀರು ಅದಮಾರು ಮಠ ಅತಿಥಿಗೃಹದ ಬಳಿಯಿಂದ ಹರಿದುಬಂದು ಕಾಣಿಯೂರು ಮಠದ ಪಕ್ಕದ ತೋಡಿನ ಮೂಲಕ ಬೈಲಕೆರೆ ಕಲ್ಸಂಕ ದೊಡ್ಡ ತೋಡಿಗೆ ಸೇರುತ್ತದೆ.
ಚರಂಡಿಯನ್ನು 7.2 ಲ.ರೂ. ವೆಚ್ಚದಲ್ಲಿ ನಿರ್ವಹಿಸಲಾಗುತ್ತಿದೆ. ಕಾಂಕ್ರೀಟ್ ಬೆಡ್ ಹಾಕಿ ಆಚೀಚೆ ಸಮತಟ್ಟುಗೊಳಿಸುವ ಕಾಮಗಾರಿ ಮಾಡಲಾಗುವುದು.
ರಾಷ್ಟ್ರಪತಿಯವರು ಬರುವ ಸಂದರ್ಭ ಜಿಲ್ಲಾಧಿಕಾರಿಯವರಿಗೆ ಇದರ ಬಗ್ಗೆ ತಿಳಿಸಿದ್ದೆವು. ಅವರು ಕೂಡಲೇ ಸ್ಪಂದಿಸಿದರು. ಆದರೆ ನಿಯಮಾವಳಿ ಪ್ರಕಾರ ಕೆಲವು ದಿನಗಳು ಬೇಕಾದವು. ಆಗ ಸಪ್ತೋತ್ಸವ ಆರಂಭಗೊಂಡಿತು. ಹೀಗಾಗಿ ಸಪ್ತೋತ್ಸವ ಮುಗಿದ ಬಳಿಕ ಮಾಡಲು ತಿಳಿಸಿದೆವು. ಈಗ ಕಾಮಗಾರಿ ನಡೆಯುತ್ತಿದೆ ಎಂದು ಶ್ರೀಕೃಷ್ಣಮಠ ಪರ್ಯಾಯ ಶ್ರೀಪಲಿಮಾರು ಮಠದ ಆಡಳಿತಾಧಿಕಾರಿ ಪ್ರಹ್ಲಾದ್ ತಿಳಿಸಿದರು.
ಕಾಮಗಾರಿಯನ್ನು ಆದಷ್ಟು ಶೀಘ್ರ ಮುಗಿಸುವುದಾಗಿ ನಗರಸಭೆಯ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪತಿಯಿಂದಲೇ ಭೀಕರವಾಗಿ ಹತ್ಯೆಗೀಡಾದ ಸ್ಯಾಂಡಲ್ ವುಡ್ ನಟಿ, ಕಾಂಗ್ರೆಸ್ ಮುಖಂಡೆ
ಬಿಜೆಪಿಯವರು ಬಜೆಟ್ ಓದುವುದಿಲ್ಲ,ಅವರಿಗೆ ಎಕನಾಮಿಕ್ಸ್ ಗೊತ್ತಾಗುವುದಿಲ್ಲ: ಸಿಎಂ ಸಿದ್ದರಾಮಯ್ಯ
ಅಪಘಾತದಿಂದ ತೀವ್ರ ಗಾಯ: ಆಂಬ್ಯುಲೆನ್ಸ್ ಬರುವವರೆಗೆ ಸೆಲ್ಫಿಗೆ ಪೋಸ್ ಕೊಟ್ಟ ಯುವತಿಯರು.!
Hunsur: ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಚಾವಣಿ, ಬ್ಯಾರನ್ಗೂ ಹಾನಿ
ಜಾರ್ಜಿಯಾದಲ್ಲಿ ಕಾರು ಪಲ್ಟಿಯಾಗಿ ಮೂವರು ಇಂಡೋ-ಅಮೆರಿಕನ್ ವಿದ್ಯಾರ್ಥಿಗಳು ದುರ್ಮರಣ