ವೃದ್ಧರಿಗಾಗಿ ಪಗಲ್‌ ವೀಡ್‌ (ಹಗಲು ಮನೆ) ಉದ್ಘಾಟನೆ


Team Udayavani, Feb 11, 2019, 1:00 AM IST

vruddaru.jpg

ಬದಿಯಡ್ಕ: ವೃದ್ಧರು ಮನೆಯ ಮಾರ್ಗದರ್ಶಕರು. ಅನುಭವದ ಮಾತುಗಳು, ಆಚಾರ ವಿಚಾರಗಳನ್ನು ಉಳಿಸಿಕೊಂಡು ಮುನ್ನಡೆಸುವವರು. ಆದರೆ ವೇಗದ ಯುಗದ ಒತ್ತಡದ ಬದುಕಿನಲ್ಲಿ ಒಂಟಿತನವನ್ನು ಅನುಭವಿಸುವ ಹಿರಿಯ ಜೀವಗಳ ಮನಸ್ಸಿನ ಮಾತಿಗೆ ಕಿವಿಯಾಗುವವರು ಯಾರು? ಮಕ್ಕಳು, ಮೊಮ್ಮಕ್ಕಳು ಹೊರಪ್ರಪಂಚದಲ್ಲಿ ಬ್ಯುಸಿಯಾದಾಗ ವೃದ್ಧರಿಗೆ ತಮ್ಮ ನೋವು ನಲಿವನ್ನು ಹಂಚಿಕೊಂಡು ನಿರಾಳವಾಗಲು ನೆರಳಾಗುವ ಮಹತ್ತರವಾದ ಯೋಜನೆಯೇ ಹಗಲು ಮನೆ. ಹಿರಿಯ ಜೀವಗಳ ಬದುಕಲ್ಲಿನ ಸಂಜೆಯಲ್ಲಿ ಆವರಿಸುವ ಕತ್ತಲೆಯನ್ನು ದೂರಮಾಡಿ ಸಂತƒಪ್ತಿಯ ಹಗಲನ್ನು ನೀಡುವ ತಾಣ. ಪರಸ್ಪರ ಮಾತುಕತೆಯಾಡಲು, ಒಟ್ಟಾಗಿ ಕುಳಿತು ಪತ್ರಿಕೆಗಳನ್ನು ಓದಲು, ವಿಷಯಗಳನ್ನು ಚರ್ಚಿಸಲು ಈ ಹಗಲು ಮನೆ ಸಹಾಯಕ. ಮುಂದೆ ವೃದ್ಧ ಸಂಘಟನೆಗಳು ಸ್ಥಾಪಿನೆಯಾಗಲು, ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮತ್ತೆ ಕಳೆದುಹೋದ ದಿನಗಳನ್ನು ಮರಳಿ ಪಡೆಯಲು ಇದು ವರದಾನವಾಗಿ ಪರಿಣಮಿಸಲಿದೆ.  ಆ ನಿಟ್ಟಿನಲ್ಲಿ ಬದಿಯಡ್ಕ ಪಂಚಾಯತ್‌ ಹಮ್ಮಿಕೊಂಡ ಈ ಯೋಜನೆ ಮಾದರಿ ಕಾರ್ಯವಾಗಿದೆ. 

 ಬದಿಯಡ್ಕ ಪಂಚಾಯತ್‌ನ ಮಹತ್ತರ ಯೋಜನೆಯಾದ ವಯೋಜನರ ವಿಹಾರಕ್ಕೆ  ಪೂರಕವಾದ ವಾತಾವರಣ ಒದಗಿಸುವ ಪಗಲ್‌ ವೀಡ್‌ (ಹಗಲು ಮನೆ) ಉದ್ಘಾಟನೆಗೊಂಡಿದೆ. ಬದಿಯಡ್ಕ  ಗ್ರಾ.ಪಂ.ನಲ್ಲಿ  2018 – 19ರ ವಾರ್ಷಿಕ ಯೋಜನೆಯ ಅಂಗವಾಗಿ ವಯೋವೃದ್ಧರ ಮಾನಸಿಕ ಅಭಿವೃದ್ಧಿ  ಮತ್ತು  ವಿಶ್ರಮಕ್ಕೆ  ಸಂಬಂಧಿಸಿ ಇಲ್ಲಿನ ಬೋಳುಕಟ್ಟೆ  ಕಿರು ಸ್ಟೇಡಿಯಂ ಬಳಿ ನೂತನವಾಗಿ  ನಿರ್ಮಿಸಲಾದ ಪಗಲ್‌ ವೀಡ್‌ (ಹಗಲು ಮನೆ)ನ್ನು  ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ಉದ್ಘಾಟಿಸಿದರು. 

ಬದಿಯಡ್ಕ  ಗ್ರಾ.ಪಂ. ಅಧ್ಯಕ್ಷ  ಕೆ.ಎನ್‌. ಕೃಷ್ಣ ಭಟ್‌ ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷೆ  ಸೈಬುನ್ನೀಸಾ, ಎ.ಎಸ್‌. ಅಹಮ್ಮದ್‌, ಶ್ಯಾಮ ಪ್ರಸಾದ್‌, ಮಾಹಿನ್‌ ಕೇಳ್ಳೋಟ್‌, ಬಿ. ಶಾಂತಾ, ಬಾಲಕೃಷ್ಣ  ಶೆಟ್ಟಿ , ಮುನೀರ್‌, ಜಯಂತಿ, ಪ್ರಸನ್ನ , ವಿಶ್ವನಾಥ ಪ್ರಭು, ಪಿ. ಜಯಶ್ರೀ, ಪುಷ್ಪಾ  ಕುಮಾರಿ, ಪಿ. ರಾಜೇಶ್ವರಿ, ಬಿ.ಎ. ಮಹಮ್ಮದ್‌, ಪ್ರೇಮಾ ಕುಮಾರಿ, ಕೆ. ಸುಕುಮಾರನ್‌ ಮಾಸ್ಟರ್‌, ಪಿಲಿಂಗಲ್ಲು  ಕೃಷ್ಣ ಭಟ್‌, ಸುಧಾ ಜಯರಾಂ ಮೊದಲಾದವರು ಉಪಸ್ಥಿತರಿದ್ದರು. 

ಬದಿಯಡ್ಕ  ಗ್ರಾ.ಪಂ. ಅಭಿವೃದ್ಧಿ  ಸ್ಥಾಯೀ ಸಮಿತಿ ಅಧ್ಯಕ್ಷ  ಅನ್ವರ್‌ ಓಝೋನ್‌ ಸ್ವಾಗತಿಸಿದರು. ಕಾರ್ಯದರ್ಶಿ ಎನ್‌ ಶೈಲೇಂದ್ರ ವಂದಿಸಿದರು.

5 ಲ.ರೂ. ಮೀಸಲು
ಬದಿಯಡ್ಕ ಪಂಚಾಯತ್‌ಪ್ರದೇಶದಲ್ಲಿ ಅರ್ಧಕ್ಕೆ ನಿರ್ಮಾಣ ಕಾರ್ಯ ಸ್ಥಗಿತಗೊಂಡಿರುವ ನಗರ ಸಭಾ ಭವನ ಹಾಗೂ ಇಂಡೋರ್‌ ಸ್ಟೇಡಿಯಂ ಹಾಗೂ ಇತರ ಕೆಲಸ ಕಾರ್ಯಗಳನ್ನು ಈ ಆರ್ಥಿಕ ವರ್ಷದಲ್ಲಿ ಸಂಪೂರ್ಣಗೊಳಿಸಲಾಗುವುದು. ಬಡ್ಸ್‌ ಸ್ಕೂಲ್‌ನ ಕೆಲಸವೂ ಕೆಲವೇ ದಿನಗಳಲ್ಲಿ ಪೂರ್ತಿಯಾಗಲಿದೆ. ವೃದ್ಧರ ಅಸೋಸಿಯೇಶನ್‌ನ ವೃದ್ಧರ ಹಗಲು ಮನೆಯ ಪ್ರದೇಶದಲ್ಲಿ 5ಲಕ್ಷ ರೂಪಾಯಿ ಮೀಸಲಿಟ್ಟು ಕುಡಿನೀರಿನ ಸಮಸ್ಯೆಯನ್ನೂ ಪರಿಹರಿಸುವತ್ತ ಗಮನಹರಿಸಲಾಗಿದೆ. 
-ಕೆ.ಎನ್‌. ಕೃಷ್ಣ ಭಟ್‌ ಪಂಚಾಯತ್‌ ಅಧ್ಯಕ್ಷರು, ಬದಿಯಡ್ಕ 

ಸರ್ವ ಸಹಕಾರ
 ಕಾಸರಗೋಡು ಜಿಲ್ಲೆಯ ಅಭಿವೃದ್ಧಿಗೆ ಭಾಷಾ ಹಾಗೂ ವರ್ಗೀಯ ಸಮಸ್ಯೆ ಕಾಡುತ್ತಿದೆ ಯಾದರೂ ಪರಸ್ಪರ ಸೌಹಾರ್ದ ಹಾಗೂ ಉತ್ತಮ ಚಿಂತೆಗಳ ಮೂಲಕ ಮಾತ್ರ ಆ ಸಮಸ್ಯೆಯನ್ನು ಹೋಗಲಾಡಿಸಲು ಸಾಧ್ಯ ಎಂಬುದನ್ನು ಬದಿಯಡ್ಕ ಪಂಚಾಯತ್‌ ಸಾಬೀತುಪಡಿಸಿದೆ. ವಯೋವೃದ್ಧರಿಗಾಗಿ ವಿಶಿಷ್ಟವಾದ ಪದ್ಧತಿಯನ್ನು ರೂಪಿಸು ವುದರ ಮೂಲಕ ಮಾದರಿಯಾಗಿದೆ. ಹಗಲು ಮನೆಯಲ್ಲಿ ಪುಸ್ತಕಾಲಯದ ವ್ಯವಸ್ಥೆಯನ್ನು ಮಾಡುವಲ್ಲಿ ಎಲ್ಲ ವಿಧ ಸಹಕಾರ ನೀಡಲಾಗುವುದು.
– ಡಾ| ಸಜಿತ್‌ಬಾಬು , ಕಾಸರಗೋಡು ಜಿಲ್ಲಾಧಿಕಾರಿ

– ಅಖೀಲೇಶ್‌ ನಗುಮುಗಂ

ಟಾಪ್ ನ್ಯೂಸ್

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Electric shock: ಯುವಕನ ಸಾವು

Electric shock: ಯುವಕನ ಸಾವು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.