ಸಿಟಿ ಫಿಟ್‌ ಪಾಥ್‌ ವಿನೂತನ ಮಾದರಿಯ ಫ‌ುಟ್‌ ಪಾತ್‌


Team Udayavani, Feb 17, 2019, 7:32 AM IST

17-february-8.jpg

ನಗರದಲ್ಲಿ ಪಾದಚಾರಿಗಳಿಗೆ ನಡೆಯಲು ಫ‌ುಟ್‌ ಪಾತ್‌ ಗಳು ಇರುವುದು ಸಾಮಾನ್ಯ. ಫ‌ುಟ್‌ ಪಾತ್‌ ಗಳು ಪಾದಚಾರಿಗಳಿಗೆ ನಡೆಯುವ ಉದ್ದೇಶದಿಂದ ಮಾತ್ರ ನಿರ್ಮಾಣವಾದರೆ ಅದರಲ್ಲೇನೂ ವಿಶೇಷತೆ ಇಲ್ಲ. ಆದರೆ ಇಲ್ಲೊಂದು ನಗರದಲ್ಲಿ ಫ‌ುಟ್‌ ಪಾತ್‌ ಪಾದಚಾರಿಗಳಿಗೆ ನಡೆಯಲು ಅನುವು ಮಾಡುವುದರೊಂದಿಗೆ ದೇಹಕ್ಕೆ ವ್ಯಾಯಾಮವನ್ನೂ ನೀಡಬಲ್ಲ ಹೊಸತನವನ್ನು ರೂಪಿಸಿದೆ.

ನಗರ ಪ್ರದೇಶದ ಬ್ಯುಸಿ ಜೀವನ ಕ್ರಮದಲ್ಲಿ ತಮ್ಮ ಕೆಲಸಕ್ಕೆ ಒತ್ತು ನೀಡುವುದನ್ನು ಬಿಟ್ಟರೆ ತಮ್ಮ ಆರೋಗ್ಯದ ಕುರಿತು ಮರೆತೇ ಬಿಡುತ್ತಾರೆ. ಅದಕ್ಕೆ ಅವರವರೇ ಸ್ವಯಂ ಪ್ರೇರಿತರಾಗಿ ಏನಾದರೂ ವ್ಯಾಯಾ ಮಗಳನ್ನು ಮಾಡಿಕೊಳ್ಳಬೇಕೆ ಹೊರತು ಬೇರೇನೂ ಮಾರ್ಗವಿಲ್ಲ. ಆದರೆ ಇಲ್ಲೊಂದು ನಗರ ಇಲ್ಲಿನ ಜನರ ಆರೋಗ್ಯದ ದೃಷ್ಟಿಯಿಂದ ನಗರದ ಫ‌ುಟ್‌  ಪಾತ್‌ ಗಳನ್ನು ‘ಸಿಟಿ ಫಿಟ್‌ ಪಾಥ್‌’ ಎನ್ನುವ ಕಾನ್ಸೆಪ್ಟ್ 
ನೊಂದಿಗೆ ಎಲ್ಲೆಡೆ ನಿರ್ಮಾಣಗೊಳಿಸಿದೆ.

ಏನಿದು ಈ ಸಿಟಿ ಫಿಟ್‌ ಪಾಥ್‌ ?
ಇದು ಪಾದಚಾರಿಗಳನ್ನು ಕೇಂದ್ರೀಕರಿಸಿಕೊಂಡು ಮಾಡಲ್ಪಟ್ಟ ಕ್ರಿಯಾಶೀಲ ಯೋಜನೆಯಾಗಿದೆ. ದಿನನಿತ್ಯ ಸಂಚರಿಸುವ ಪಾದಚಾರಿ ಫ‌ುಟ್‌ ಪಾತ್‌ ಗಳಲ್ಲಿ ಈ ಸಿಟಿ ಫಿಟ್‌ ಪಾಥ್‌ ಮೊದಲು ಯೋಜನೆ ಜಾರಿಗೊಳಿಸಲಾಯಿತು. ಫ‌ುಟ್‌ ಪಾತ್‌ ಗಳನ್ನು ಆಕರ್ಷಕ ಬಣ್ಣಗಳಿಂದ ನಮ್ಮ ಹೆಜ್ಜೆಯ ಚಿತ್ರವನ್ನು ಚಿತ್ರಿಸಿ ಅದರ ಮೇಲೆ ನಡೆದುಕೊಂಡು ಹೋಗುವಂತೆ ಮಾಡಲಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಿನವರ ಹೆಜ್ಜೆ ಗುರುತುಗಳನ್ನು ಈ ಫ‌ುಟ್‌ ಪಾತ್‌ ನಲ್ಲಿ ರಚಿಸಿ ಅದರ ಮೇಲೆ ನಡೆದುಕೊಂಡು ಹೋಗುವಂತೆ ಮಾಡಿ ಆ ಮೂಲಕ ದೇಹಕ್ಕೆ ವ್ಯಾಯಾಮವನ್ನು ಮಾಡಿಸುವ ಹೊಸ ಯೋಜನೆಯನ್ನು ರೂಪಿಸಲಾಗಿದೆ. ಗ್ರಾಫಿಕ್‌ ವಿನ್ಯಾಸಗಳು, ಕಲರ್‌ ಫ‌ುಲ್‌ ಚಿತ್ರಗಳು, ವ್ಯಾಯಾಮದ ಕೆಲವು ಟ್ರಿಕ್‌ ಸ್ಪೆಪ್‌ ಗಳನ್ನು ಬಿಡಿಸಿ ಅದರ ಮೇಲೆ ನಡೆದುಕೊಂಡು ಹೋಗುವಂತೆ ಮಾಡಲಾಗಿದೆ.

ನಗರದ ಜನರ ಕ್ಷೇಮವನ್ನು ಬಯಸುವುದರ ಜತೆಗೆ ಫ‌ುಟ್‌ ಪಾತ್‌ ಗಳನ್ನು ಅತ್ಯಂತ ಆಕರ್ಷಕವಾಗಿ ನಿರ್ಮಿಸಿ ಪಾದಚಾರಿಗಳನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡಲಾಗುತ್ತಿದೆ. ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿರುವ ಅನೇಕ ನಗರಗಳಲ್ಲಿ ಈ ರೀತಿಯ ಸಿಟಿ ಫಿಟ್‌ ಪಾಥ್‌ಗಳು ಕಾಣಸಿಗುತ್ತವೆ. ಇವು ಕೇವಲ ಪಾದಚಾರಿ ವಲಯದಲ್ಲಿ ಇರದೆ ಬಸ್‌ ನಿಲ್ದಾಣಗಳು, ಮೆಟ್ಟಿಲುಗಳು, ಕಾಲುದಾರಿಗಳಲ್ಲಿ ಈ ಸಿಟಿ ಫಿಟ್‌ ಪಾಥ್‌ಗಳು ಕಾಣ ಸಿಗುತ್ತವೆ.

ವ್ಯಾಯಾಮದ ಜತೆಗೆ ಮನೋರಂಜನೆ
ಈ ರಂಗು ರಂಗಿನ ಫ‌ುಟ್‌ ಪಾತ್‌ ಗಳು ಒಂದೆಡೆ ದೇಹಕ್ಕೆ ವ್ಯಾಯಾಮ  ನೀಡಿದರೆ ಮಕ್ಕಳಿಗೆ ಆಟ, ಮನೋರಂಜನೆಯಾಗಿವೆ. ಈ ರೀತಿಯ ಸಿಟಿ ಫಿಟ್‌ ಪಾಥ್‌ನಂತಹ ಕೇಂದ್ರಗಳು ಹೊಸ ಕಲ್ಪನೆಗಳ ಜತೆಗೆ ನಮ್ಮ ನಗರಗಳಿಗೆ ಬಂದರೆ ನಗರದ ಅಭಿವೃದ್ಧಿ, ಸೌಂದರ್ಯ ಎತ್ತರಕ್ಕೇರುವುದರೊಂದಿಗೆ ನಗರದ ಜನ ತೆಯ ಆರೋಗ್ಯ  ಕಾಪಾಡಲು ಇದು ಸಹಕಾರಿಯಾಗಿದೆ. 

ವಿಶ್ವಾಸ್‌ ಅಡ್ಯಾರ್‌

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

Mangalore-railway

ಮಂಗಳೂರು: ರೈಲ್ವೇ ಸಂಪರ್ಕ ಜಾಲ ವಿಸ್ತರಣೆಗೆ ಹೊಸ ಸಾಧ್ಯತೆಗಳ ಪರಿಶೀಲನೆ

ನಗರ 24×7 ಪರಿಕಲ್ಪನೆಗೆ ಒಲವು

ನಗರ 24×7 ಪರಿಕಲ್ಪನೆಗೆ ಒಲವು

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.