ಜಾಧವ್: ಭಾರತದ ವಾದ ಮಂಡನೆ ಅಂತ್ಯ
Team Udayavani, Feb 21, 2019, 12:30 AM IST
ಹೇಗ್: ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭೂಷಣ್ ಜಾಧವ್ ಪ್ರಕರಣಕ್ಕೆ ಸಂಬಂಧಿಸಿ ನಡೆಯುತ್ತಿರುವ ವಿಚಾರಣೆಯ ವೇಳೆ ಪಾಕಿಸ್ಥಾನ ಬಳಸಿದ ಭಾಷೆಯ ಬಗ್ಗೆ ಭಾರತ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೆ ಭಾರತದ ಪರ ವಕೀಲ ಹರೀಶ್ ಸಾಳ್ವೆ ಕೊನೆಯ ವಾದವನ್ನು ಬುಧವಾರ ಮಂಡಿಸಿದ್ದಾರೆ. ಭಾರತವನ್ನು ನಾಚಿಕೆಗೇಡು, ಸಂವೇದನೆಯಿಲ್ಲ, ಗೌರವವಿಲ್ಲದ ದೇಶ ಎಂದೆಲ್ಲ ಪಾಕ್ ವಕೀಲರು ಪ್ರಸ್ತಾವಿಸಿದ್ದನ್ನು ಸಾಳ್ವೆ ವಿರೋಧಿಸಿದರು. ಅಲ್ಲದೆ ಜಾಧವ್ರನ್ನು ಭಾರತೀಯ ಎಂದು ಒಪ್ಪಿಕೊಂಡಿದ್ದೇವೆ. ಬದಲಿಗೆ ಪಾಕಿಸ್ಥಾನ ಪದೇ ಪದೆ ಸ್ವದೇಶಿ ವ್ಯಕ್ತಿಯನ್ನು ತನ್ನ ದೇಶದವನಲ್ಲ ಎಂದು ಹೇಳುತ್ತದೆ. ಆದರೆ ಭಾರತ ಹಾಗೆ ಮಾಡಿಲ್ಲ. ಜಾಧವ್ ತಪ್ಪೊಪ್ಪಿಗೆ ಹೇಳಿಕೆಯ ಕೆಲವು ಭಾಗವನ್ನು ಹೊರತುಪಡಿಸಿ, ಬೇರೆ ಯಾವ ವಿವರಗಳನ್ನೂ ಪಾಕಿಸ್ಥಾನವು ಭಾರತಕ್ಕೆ ನೀಡಿಲ್ಲ. ಅಲ್ಲದೆ ಸಾಮಾನ್ಯ ನಾಗರಿಕನನ್ನು ಸೇನಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುತ್ತಿರುವುದು ಸರಿಯಲ್ಲ ಎಂದು ಭಾರತ ಆಕ್ಷೇಪಿಸಿದೆ. ಭಾರತದ ವಾದಕ್ಕೆ ಗುರುವಾರ ಪಾಕಿಸ್ಥಾನ ಪ್ರತ್ಯುತ್ತರ ನೀಡಲಿದ್ದು, ವಾದ ವಿವಾದ ಮುಕ್ತಾಯಗೊಳ್ಳಲಿದೆ. ಫೆ. 18 ರಿಂದ ಪ್ರಕರಣದ ವಾದ ವಿವಾದ ಆರಂಭವಾಗಿತ್ತು. ಮುಂದಿನ ಕೆಲವೇ ದಿನಗಳಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿದ ತೀರ್ಪನ್ನು ಪ್ರಕಟಿಸುವ ಸಾಧ್ಯತೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ