ಮುಂದುವರಿದ ಹೆಂಚು ಕಾರ್ಮಿಕರ ಮುಷ್ಕರ


Team Udayavani, Feb 22, 2019, 12:30 AM IST

2102kdlm11ph.jpg

ಕುಂದಾಪುರ: ಸರಕಾರ ನಿಗದಿಪಡಿಸಿದ ಕನಿಷ್ಠ ವೇತನ ಅದೇಶ ಜಾರಿಗೊಳಿಸಲು ಆಗ್ರಹಿಸಿ ಹೆಂಚು ಕಾರ್ಮಿಕರು ತಮ್ಮ ಪ್ರತಿಭಟನೆ ಮುಂದುವರಿಸಿದ್ದಾರೆ. 

ಸಂಘಟನೆ
ಅವಿಭಜಿತ ದ.ಕ. ಜಿಲ್ಲೆ, ಉ.ಕ. ಸೇರಿದಂತೆ ಕಳೆದ 5-6 ದಶಕಗಳಿಂದ ಸಿಐಟಿಯು ನೇತೃತ್ವದಲ್ಲಿ ಸುಮಾರು 55-60ಕ್ಕೂ ಹೆಚ್ಚು ಹಂಚು ಕೈಗಾರಿಕೆಯಲ್ಲಿ ದುಡಿಯುತ್ತಿರುವ ಕಾರ್ಮಿಕರು ಸಹಸ್ರಾರು ಸಂಖ್ಯೆಯಲ್ಲಿ ಸಂಘಟಿತರಾಗಿ, ನ್ಯಾಯಯುತ ಹಕ್ಕುಗಳಿಗಾಗಿ ಹೋರಾಟ ಮಾಡಿದ್ದಾರೆ. ಇದೀಗ ಎಸ್‌.ಕೆ. ಟೈಲ್ಸ್‌  ವರ್ಕರ್ ಯೂನಿಯನ್‌, ಉಡುಪಿ ಜಿಲ್ಲಾ ಹೆಂಚು ಕಾರ್ಮಿಕರ ಸಂಘವಾಗಿ ಪ್ರತ್ಯೇಕ ಅಸ್ತಿತ್ವದಲ್ಲಿದೆ.
 
ಸಮಸ್ಯೆ
ಕಚ್ಛಾ ವಸ್ತುಗಳ ಧಾರಣೆ ಏರಿಕೆ ಹಾಗೂ ಉತ್ತಮ ಗುಣಮಟ್ಟದ ಆವೆ ಮಣ್ಣು ಸಿಗದಿರುವುದು, ಹೆಂಚು ಮಾರುಕಟ್ಟೆ ಕುಸಿತದಿಂದ ಕೈಗಾರಿಕೆ ಸಂಕಷ‌rದಲ್ಲಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಯಾದ್ಯಂತ ಸುಮಾರು 60ಕ್ಕೂ ಹೆಚ್ಚು ಹೆಂಚಿನ ಕಾರ್ಖಾನೆಗಳು ಮುಚ್ಚಿಕೊಂಡು ಕೇವಲ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ  11 ಹೆಂಚು ಕೈಗಾರಿಕೆಗಳು ಮಾತ್ರ ಉಳಿದುಕೊಂಡಿದೆ.
 
ಸ್ಪರ್ಧೆ
ಗ್ರಾಮಾಂತರ ಪ್ರದೇಶದ ಬಡ ರೈತ, ಕೃಷಿ ಕೂಲಿಕಾರರು ನಗರ ಪ್ರದೇಶಕ್ಕೆ ಬಂದು ಹೆಂಚು ಕೈಗಾರಿಕೆಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಹೆಂಚು ಕಾರ್ಖಾನೆ ಜೀವನಾಡಿ ಎನಿಸಿರುವ ಕುಂದಾಪುರದ ಹಂಚುಗಳಿಗೆ ಮಹಾರಾಷ‌ó, ಕೇರಳ, ಗೋವಾ ರಾಜ್ಯಗಳ‌ಲ್ಲಿ ಬೇಡಿಕೆಯಿದ್ದರೂ ಗುಜರಾತ್‌ ಹೆಂಚು ಮಾರುಕಟ್ಟೆಯ ಸ್ಪರ್ಧೆ ಎದುರಿಸಬೇಕಾಗಿದೆ. 

ಅಧಿಸೂಚನೆ
ಕರ್ನಾಟಕ ಸರಕಾರದ ಸಚಿವಾಲಯ ಉದ್ದಿಮೆಯ ವ್ಯಾಪ್ತಿಗೆ ಒಳಪಡುವ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಅಧಿಸೂಚನೆಯನ್ನು ಹೊರಡಿಸಿ 2017ರ ಡಿ.30ರ ಅನ್ವಯವಾಗುವಂತೆ ಪರಿಷ‌¢ತ ಕನಿಷ‌r ವೇತನ ದರಗಳನ್ನು ಪಾವತಿಸಲು ಕನಿಷ್ಠ ವೇತನ ಕಾಯ್ದೆ 1948ರ ಕಲಂ ರನ್ವಯ ಸಂಬಂಧಿಸಿದಂತೆ ಕಾರ್ಮಿಕರು ಹಾಗೂ ಮಾಲಕರ ಮಧ್ಯೆ ಹಗ್ಗಜಗ್ಗಾಟ ನಡೆಯುತ್ತಿದೆ. 

ಅಸ್ತವ್ಯಸ್ತ
ಕಾರ್ಮಿಕರ ಮುಷ್ಕರದಿಂದ ಹೆಂಚು ಉದ್ಯಮ ಅಸ್ತವ್ಯಸ್ತಗೊಂಡಿದೆ. ಕುಂದಾಪುರದ ಎಲ್ಲ 11 ಹೆ‌ಂಚು ಕಾರ್ಖಾನೆಯ 1,600 ಮಂದಿ ಕಾರ್ಮಿಕರು ಹಾಗೂ 400ರಷ್ಟು ಇತರ ಉದ್ಯೋಗಿಗಳು ಏಕಕಾಲಕ್ಕೆ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು ಬೇಡಿಕೆ ಈಡೇರಿಕೆಗೆ ಅಗ್ರಹಿಸಿದ್ದಾರೆ. 

ರ‍್ಯಾಲಿ
ಬೇಡಿಕೆ ಈಡೇರದ ಹೊರತು ಮುಷ್ಕರದಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದಿರುವ ಕಾರ್ಮಿಕರು ಫೆ.25 ರಂದು ಬೃಹತ್‌ ರ‍್ಯಾಲಿ, ಸಾರ್ವಜನಿಕ ಸಭೆ ಜರುಗಿಸಿ ಸಹಾಯಕ ಕಮಿಷನರ್‌ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸುವ ಹೋರಾಟದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಹೆಂಚು ಕಾರ್ಮಿಕರ ಸಂಘದ ಅಧ್ಯಕ್ಷ ವಿ.ನರಸಿಂಹ,  ಪ್ರಧಾನ ಕಾರ್ಯದರ್ಶಿ ಎಚ್‌. ನರಸಿಂಹ, ಕೋಶಾಧಿಕಾರಿ ಪ್ರಕಾಶ ಕೋಣಿ ಅವರು ತಿಳಿಸಿದ್ದಾರೆ. 

ಹಠಮಾರಿ ಧೋರಣೆ
ಹೆಂಚು ಉದ್ಯೋಗ ಸಂಕಷ್ಕದಲ್ಲಿರುವಾಗ ಮಾಲಕರ ಪರವಾಗಿ ಉಡುಪಿ ಜಿಲ್ಲಾ  ಹೆಂಚು ಕಾರ್ಮಿಕರ ಸಂಘ ಹೆಗಲಿಗೆ ಹೆಗಲು ಕೊಟ್ಟಿರುವುದನ್ನು ಮರೆತಿದ್ದು ಕಾನೂನಾತ್ಮವಾಗಿ ಕೊಡಬೇಕಾದ ಹಕ್ಕಿನ ಕನಿಷ್ಠ ಕೂಲಿ ನಿರಾಕರಿಸುತ್ತಿದ್ದಾರೆ. ಮಾಲಕರ ಧೋರಣೆ ವಿರೋಧಿಸಿದ ಹೆಂಚು ಕಾರ್ಮಿಕರಿಗೆ ಕೆಲಸ ನಿರಾಕರಿಸುವ ಮೂಲಕ ಮಾಲಕರು ಹಠಮಾರಿ ಧೋರಣೆ ಅನುಸರಿಸುತ್ತಿದ್ದಾರೆ. 
– ವೆಂಕಟೇಶ ಕೋಣಿ
ಕಾರ್ಮಿಕ ಸಂಘಟನೆಯ ಮುಖಂಡರು

ಟಾಪ್ ನ್ಯೂಸ್

1-qeeqwew

Mizoram; ರೆಮಲ್‌ ಅಬ್ಬರಕ್ಕೆ ಕುಸಿದ ಕಲ್ಲುಕ್ವಾರಿ: 17 ಮಂದಿ ಬಲಿ

1-wewewqe

Kerala ಸುರಿದ ಧಾರಾಕಾರ ಮಳೆ: ‘ಮೇಘ ಸ್ಫೋಟ’ದ ಸಾಧ್ಯತೆ

1-raf

26 Rafale ಖರೀದಿಗೆ ನಾಳೆ ಭಾರತ, ಫ್ರಾನ್ಸ್‌ ಮಾತುಕತೆ

Dharmasthala ಮೇಳದ ಈ ಸಾಲಿನ ತಿರುಗಾಟಕ್ಕೆ ಮಂಗಳ

Dharmasthala ಮೇಳದ ಈ ಸಾಲಿನ ತಿರುಗಾಟಕ್ಕೆ ಮಂಗಳ

ಸರಕಾರಿ ಅಧಿಕಾರಿಗಳ ರಕ್ಷಣೆಗೆ ಸದಾ ಬದ್ಧ: ಕೆ. ರಘುಪತಿ ಭಟ್‌ ಭರವಸೆ

ಸರಕಾರಿ ಅಧಿಕಾರಿಗಳ ರಕ್ಷಣೆಗೆ ಸದಾ ಬದ್ಧ: ಕೆ. ರಘುಪತಿ ಭಟ್‌ ಭರವಸೆ

K. S. Eshwarappa ಪಕ್ಷ ನಿಷ್ಠರಿಗೆ ಅಮಾನತು ಶಿಕ್ಷೆ

K. S. Eshwarappa ಪಕ್ಷ ನಿಷ್ಠರಿಗೆ ಅಮಾನತು ಶಿಕ್ಷೆ

ಕೇರಳಕ್ಕೆ ವಿದ್ಯುತ್‌ ಸಾಗಾಟಕ್ಕೆ ಟವರ್‌ ನಿರ್ಮಾಣ; ಇನ್ನಾದಲ್ಲಿ ಭಾರೀ ಪ್ರತಿಭಟನೆ

ಕೇರಳಕ್ಕೆ ವಿದ್ಯುತ್‌ ಸಾಗಾಟಕ್ಕೆ ಟವರ್‌ ನಿರ್ಮಾಣ; ಇನ್ನಾದಲ್ಲಿ ಭಾರೀ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸರಕಾರಿ ಅಧಿಕಾರಿಗಳ ರಕ್ಷಣೆಗೆ ಸದಾ ಬದ್ಧ: ಕೆ. ರಘುಪತಿ ಭಟ್‌ ಭರವಸೆ

ಸರಕಾರಿ ಅಧಿಕಾರಿಗಳ ರಕ್ಷಣೆಗೆ ಸದಾ ಬದ್ಧ: ಕೆ. ರಘುಪತಿ ಭಟ್‌ ಭರವಸೆ

K. S. Eshwarappa ಪಕ್ಷ ನಿಷ್ಠರಿಗೆ ಅಮಾನತು ಶಿಕ್ಷೆ

K. S. Eshwarappa ಪಕ್ಷ ನಿಷ್ಠರಿಗೆ ಅಮಾನತು ಶಿಕ್ಷೆ

ಕೇರಳಕ್ಕೆ ವಿದ್ಯುತ್‌ ಸಾಗಾಟಕ್ಕೆ ಟವರ್‌ ನಿರ್ಮಾಣ; ಇನ್ನಾದಲ್ಲಿ ಭಾರೀ ಪ್ರತಿಭಟನೆ

ಕೇರಳಕ್ಕೆ ವಿದ್ಯುತ್‌ ಸಾಗಾಟಕ್ಕೆ ಟವರ್‌ ನಿರ್ಮಾಣ; ಇನ್ನಾದಲ್ಲಿ ಭಾರೀ ಪ್ರತಿಭಟನೆ

Udupi ಯಾಂತ್ರೀಕೃತ ಮೀನುಗಾರಿಕೆ ನಿಷೇಧ

Udupi ಯಾಂತ್ರೀಕೃತ ಮೀನುಗಾರಿಕೆ ನಿಷೇಧ

25

Bramavara: ಚೇರ್ಕಾಡಿಗೆ ಬಂದಿದ್ದ ಬೆಂಗಳೂರಿನ ಕ್ಯಾಬ್‌ ಚಾಲಕ ಸಾವು

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

1-qeeqwew

Mizoram; ರೆಮಲ್‌ ಅಬ್ಬರಕ್ಕೆ ಕುಸಿದ ಕಲ್ಲುಕ್ವಾರಿ: 17 ಮಂದಿ ಬಲಿ

1-wewewqe

Kerala ಸುರಿದ ಧಾರಾಕಾರ ಮಳೆ: ‘ಮೇಘ ಸ್ಫೋಟ’ದ ಸಾಧ್ಯತೆ

1-raf

26 Rafale ಖರೀದಿಗೆ ನಾಳೆ ಭಾರತ, ಫ್ರಾನ್ಸ್‌ ಮಾತುಕತೆ

1-wqeqewewqewqe

TMCಯ ಶಹಜಹಾನ್‌ ವಿರುದ್ಧ ಕೊಲೆ ಯತ್ನ ಕೇಸು

1-wqeqewqe

Congo;ಭಾರತದ ಮೇಜರ್‌ ರಾಧಿಕಾಗೆ ವಿಶ್ವಸಂಸ್ಥೆಯ ಉನ್ನತ ಪ್ರಶಸ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.