ಬದುಕಿನ ಬತ್ತಳಿಕೆಯಲ್ಲಿರಲಿ ಎರಡು ದಿವ್ಯಾಸ್ತ್ರಗಳು
Team Udayavani, Mar 11, 2019, 7:53 AM IST
ಬದುಕಿನಲ್ಲಿ ನಮಗಿಂದು ತುರ್ತು ಅಗತ್ಯವಾದ ಎರಡು ಅಂಶಗಳು ತಾಳ್ಮೆ ಮತ್ತು ಸ್ವ ನಿಯಂತ್ರಣ. ಆದರೆ ಇದರಲ್ಲಿ ಯಾವುದು ಮುಖ್ಯ, ಯಾವುದು ಅಮುಖ್ಯ? ಎಂದು ಹೇಳಲಾಗದು. ಯಾವುದು ಇವುಗಳಲ್ಲಿ ಬೇಡ ಎಂದು ಹೇಳುವಂತಿಲ್ಲ. ಇವೆರಡೂ ಒಂದು ಗೆರೆಯ ಎರಡು ಬಿಂದುಗಳು. ಬದುಕಿನಲ್ಲಿ ಒಂದನ್ನು ಬಿಟ್ಟರೂ ನಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತೇವೆ. ಹೀಗಾಗಿ ಈ ಎರಡೂ ನಮ್ಮ ಬಾಳನ್ನು ರೂಪಿಸುವ ಕತೃತ್ವ ಶಕ್ತಿಗಳೆನ್ನಬಹುದು.
ತಾಳ್ಮೆ
ಒಂದು ಕ್ಷಣ ನಮ್ಮ ಬಾಯಿಯಿಂದ ಮಾತು ಹೊರಬರುವುದಕ್ಕೆ ಮೊದಲು ಸಾಕಷ್ಟು ಯೋಚಿಸಲೇಬೇಕು. ಇಲ್ಲಿ ಸಂದರ್ಭ ಯಾವುದೇ ಇರಲಿ. ಅದಕ್ಕೆ ತಕ್ಕಂತೆ ನುಡಿಯಲೇಬೇಕು, ನಡೆಯಲೇಬೇಕು. ಪ್ರತಿ ಸಂದರ್ಭದಲ್ಲಿ ಎದುರಿದ್ದ ವ್ಯಕ್ತಿ ಏನೆನ್ನುತ್ತಿದ್ದಾನೆ ಎಂದು ಮೊದಲು ಸೂಕ್ಷ್ಮವಾಗಿ ಆಲಿಸಲೇ ಬೇಕು. ಆ ಬಳಿಕ ಅದಕ್ಕೆ ತಕ್ಕಂತೆ ಉತ್ತರಿಸಬೇಕು. ಇಲ್ಲಿ ಒಂದಿಷ್ಟು ಧನಾತ್ಮಕ ಚಿಂತನೆಯೊಂದಿಗೆ ತಾಳ್ಮೆಯೂ ಅತ್ಯಗತ್ಯ.
ಎಷ್ಟೋ ಜನರಿಗೆ ಇನ್ನೊಬ್ಬರು ಮಾತನಾಡುವುದನ್ನು ಕೇಳಿಸಿಕೊಳ್ಳುವ ತಾಳ್ಮೆಯೇ ಇರುವುದಿಲ್ಲ. ಅವರೇನು ಹೇಳುತ್ತಾರೆಂದು ಕೇಳಿಸಿಕೊಳ್ಳುವುದಕ್ಕಿಂತ ಮೊದಲೇ ತಮ್ಮ ‘ಅಹಂ’ ನ ಕಾರಣವಾಗಿ ಉತ್ತರ ಸಿದ್ಧವಾಗಿರುತ್ತದೆ. ಇನ್ನು ಕೆಲವೊಮ್ಮೆ ಎದುರಿನ ವ್ಯಕ್ತಿಯ ಬಗೆಗಿನ ಪೂರ್ವಾಗೃಹ ಪೀಡಿತವೋ, ಒಳ ಮನದ ಒತ್ತಡದ ಕಾರಣದಿಂದಲೋ, ದೈಹಿಕ ಅಸ್ವಾಸ್ಥ್ಯದಿಂದಲೋ ಒಟ್ಟಿನಲ್ಲಿ ಇಬ್ಬರ ನಡುವಿನ ಮಾತು- ಸರಸದ ದಾರಿ ಬಿಟ್ಟು ವಿರಸದ ಹಾದಿ ಹಿಡಿದು ಬಿಡುತ್ತದೆ.
ಸ್ವ ನಿಯಂತ್ರಣ
ಜೀವನದಲ್ಲಿ ಯಾರೇ ಯಾವುದೇ ಸಂಬಂಧವಿರಲಿ ತಂದೆ, ಮಗ, ಹೆಂಡತಿ, ಮಕ್ಕಳು, ಸತಿ ಪತಿ ದಿನದಲ್ಲೋ, ವಾರದಲ್ಲೋ ಒಂದೆಡೆ ಸೇರಿ ಮಾತನಾಡುವ ಸಂದರ್ಭಗಳು ಹತ್ತು ಹಲವು. ಅವರಲ್ಲಿ ಅನೇಕ ವೇಳೆ ಕೆಲವರಿಗೆ ಹಿಡಿಸದ ವಿಚಾರಗಳು ಬರುತ್ತವೆ. ಆಗ ಥಟ್ಟನೆ ಭಾವೋದ್ವೇಗಕ್ಕೆ ಎಡೆಯಾಗುವ ಸನ್ನಿವೇಶಗಳು ಸೃಷ್ಟಿ ಸಹಜ. ಆಗ ನಮ್ಮ ನಾಲಗೆ ಹತೋಟಿಯಲ್ಲಿರುವುದಿಲ್ಲ. ಒಂದಿಷ್ಟು ಭಿನ್ನಾಭಿಪ್ರಾಯ, ಋಣಾತ್ಮಕ ಆಲೋಚನೆಯಿಂದ ಹೊರಟ ಮಾತುಗಳು ಒಟ್ಟು ಪರಿಸರವನ್ನು ಅಲ್ಲೋಲಕಲ್ಲೋಲವಾಗಿಸುತ್ತವೆ.
ಇದಕ್ಕೆ ಮನಸ್ಸಿನ ಗೊಂದಲ, ಅಸ್ಥಿರತೆ, ಒತ್ತಡಗಳೇ ಕಾರಣ. ಹೀಗಿರುವಾಗ ಸ್ವ ನಿಯಂತ್ರಣವಿಲ್ಲದ ನಡುವೆ, ನುಡಿವ ವರ್ತನೆಗ ಳಿಗೆ ಸಂಸ್ಕಾರ ಹೀನತೆ ಎಂದು ಕರೆಯುವುದುಂಟು. ಇಲ್ಲಿ ನಮ್ಮ ಉದ್ದೇಶ ನಕಾರಾತ್ಮಕ ಚಿಂತನೆಯಿಂದ ದೂರವಿರುವುದು. ಒಮ್ಮೆ ಸ್ವ ನಿಯಂತ್ರಣ ಕಳೆದುಕೊಂಡರೆ ಮನಸ್ಸು ಮರ್ಕಟವಾಗುತ್ತದೆ. ಕೋಪಾಗ್ನಿ ಹೊರ ಹೊಮ್ಮುತ್ತದೆ. ಮನುಷ್ಯ ಕ್ರೂರಿಯಾಗು ತ್ತಾನೆ. ಇದರಿಂದ ಆತನು ತನ್ನ ವ್ಯಕ್ತಿತ್ವವನ್ನು ತಾನಾಗಿ ಹನನಗೊಳಿಸುತ್ತಾನೆ. ಹೀಗಾಗಿ ತಾಳ್ಮೆ ಮತ್ತು ಸ್ವ ನಿಯಂತ್ರಣ ನಮ್ಮನ್ನು ನಾವು ರೂಪಿಸಿಕೊಳ್ಳುವ ದಿವ್ಯಾಸ್ತ್ರಗಳಾಗಿವೆ.
ವ. ಉಮೇಶ್ ಕಾರಂತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ