ಕಣಿಪುರ ಪುಷ್ಕರಿಣಿ ಪುನರ್ ನಿರ್ಮಾಣ ಸಭೆ
Team Udayavani, Mar 20, 2019, 1:00 AM IST
ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪುಷ್ಕರಿಣಿ ಪುನರ್ ನಿರ್ಮಾಣಕ್ಕೆ ರಾಜ್ಯ ನೀರಾವರಿ ಇಲಾಖೆಯಿಂದ ಮಂಜೂರಾದ 32 ಲಕ್ಷ ರೂ.ಗಳ ವಿನಿಯೋಗದ ಬಗ್ಗೆ ಶ್ರೀ ಕ್ಷೇತ್ರದಲ್ಲಿ ವಿಸ್ತೃತ ಸಭೆ ನಡೆಯಿತು.
ಸಭೆಯಲ್ಲಿ ಶ್ರೀ ಕ್ಷೇತ್ರದ ಪಾವಿತ್ರÂವನ್ನು ಕಾಪಾಡಿಕೊಂಡು ನವೀಕರಣ ಕಾರ್ಯ ಗಳು ನಡೆಯಬೇಕಾದುದರಿಂದ ತಂತ್ರಿಯವರ ಮಾರ್ಗದರ್ಶನದಲ್ಲಿ ಪುಷ್ಕರಿಣಿಗೆ ಮಾತ್ರ ಸಂಬಂಧಪಟ್ಟ ಒಂದು ದಿನದ ಜೋತಿಷ ಚಿಂತನೆಯಲ್ಲಿ ಕಂಡುಬಂದಂತೆ ವಾಸ್ತು ಶಾಸ್ತ್ರಕ್ಕೆ ಅನುಗುಣವಾಗಿ ನವೀಕರಣ ಕಾರ್ಯ ನಡೆಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಶ್ರೀ ಕ್ಷೇತ್ರದ ಕಾರ್ಯ ನಿರ್ವಹಣಾಧಿಕಾರಿ ರಾಮನಾಥ ಶೆಟ್ಟಿ, ಕುಂಬಳೆ ಗ್ರಾ. ಪಂ. ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್., ಗ್ರಾ.ಪಂ. ಸದಸ್ಯ ಸುಧಾಕರ ಕಾಮತ್, ಅಭಿಯಂತರ ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.