3 ದಿನ ಬಳಿಕ ಸಾವು ಗೆದ್ದ ಅಮರ ಪ್ರೇಮಿಗಳು!


Team Udayavani, Mar 23, 2019, 12:30 AM IST

100.jpg

ಧಾರವಾಡ: ಪತಿ-ಪತ್ನಿ ಪ್ರೀತಿ ಎಷ್ಟು ಗಾಢ ಎನ್ನು ವುದಕ್ಕೆ ಜಗತ್ತಿನಲ್ಲಿ ಸಾವಿರಾರು ಉದಾ ಹರಣೆಗಳು ಸಿಗುತ್ತವೆ. ಆದರೆ ಸಾವಿನ ಸಂಕಟದಲ್ಲೂ ತನ್ನ ಪತ್ನಿ ಯನ್ನು ಮೊದಲು ರಕ್ಷಿಸುವಂತೆ ಪಟ್ಟು ಹಿಡಿದ ಪತಿರಾಯ ಕೊನೆಗೂ ಪತ್ನಿ ಜತೆಗೆ ಸಾವು ಗೆದ್ದು ಬಂದ ಘಟನೆ ಧಾರವಾಡದ ಕುಸಿದ ಕಟ್ಟಡದಲ್ಲಿ ಶುಕ್ರವಾರ ನಡೆಯಿತು.

ಸತತ ಮೂರು ದಿನಗಳ ಕಾಲ ಕುಸಿದ ಕಟ್ಟಡದ ಅವಶೇಷಗಳಡಿ ಬಿದ್ದಿದ್ದರೂ ತನ್ನ ಪ್ರೀತಿಯ ಪತ್ನಿಯ ಜೀವ ಮೊದಲು ಉಳಿಸಿ ಎಂದು ಎನ್‌ಡಿಆರ್‌ಎಫ್‌ ಸಿಬಂದಿಯನ್ನು ಅಂಗಲಾಚಿ ಬೇಡಿದ ಅಮರ ಪ್ರೇಮಿ ದಿಲೀಪ್‌, ತಾನು ಬರಲು ಅವಕಾಶ ಇದ್ದರೂ ಮೊದಲು ಪತ್ನಿ ಯನ್ನು ರಕ್ಷಿಸಿ ಬಳಿಕ ತಾನು ಹೊರ ಬಂದಿದ್ದಾನೆ. ಶುಕ್ರವಾರ ಅಪರಾಹ್ನ ಕಾರ್ಯಾ ಚರಣೆ ವೇಳೆ ಅವಶೇಷ ಗಳ ಅಡಿಯಲ್ಲಿ ಜನ ಬದು ಕಿರುವ ಕುರುಹು ಹಿಡಿದು ಹೊರಟ ಎನ್‌ಡಿಆರ್‌ಎಫ್‌ಗೆ ಮೊದಲು ಸಿಕ್ಕಿದ್ದು ದಾಖಲು ಮಾಲು ಕೊಕರೆ (ದಿಲೀಪ). ಕೂಡಲೇ ಅವನಿಗೆ ನೀರು ಕೊಟ್ಟು ತೆವಳುತ್ತ ಮುಂದಕ್ಕೆ ಬರುವಂತೆ ಕೋರಿ ದರು. ಆದರೆ ಇದಕ್ಕೆ ಒಪ್ಪದ ದಿಲೀಪ್‌, ಮೊದಲು ತನ್ನ ಪತ್ನಿ ಸಂಗೀತಾ ಳನ್ನು ರಕ್ಷಿಸುವಂತೆ ಕೋರಿದ. ಕೊನೆಗೆ ಅವಶೇಷಗಳಡಿಯಿಂದ ಆಕೆಯೊಂದಿಗೆ ಹೊರಬಂದ.

ಪತ್ನಿ ಜೀವಕ್ಕಾಗಿ ಹೋರಾಟ
ಧಾರವಾಡ ತಾಲೂಕಿನ ಕೊಕ್ರೆ ಪುರದ ದಾಖಲು ಮಾಲು ಕೊಕರೆ (ದಿಲೀಪ) ಹಾಗೂ ಸಂಗೀತಾ ಕೂಲಿ ಕಾರ್ಮಿಕ ದಂಪತಿ. ಕಟ್ಟಡದ ಅವಶೇಷಗಳ ನಡುವೆ ಪಾರ್ಕಿಂಗ್‌ ಜಾಗದಲ್ಲಿ ಸಿಲುಕಿದ್ದರು. 

ಪಾರ್ಕಿಂಗ್‌ ಸ್ಥಳದಲ್ಲಿ ಕಾಂಕ್ರಿಟ್‌ ಹಾಕುವ ಕೆಲಸದಲ್ಲಿದ್ದಾಗ ಕಟ್ಟಡ ಏಕಾಏಕಿ ಕುಸಿದಿತ್ತು. ಕೆಲವು ಸಮಯ ಏನಾಗುತ್ತಿದೆ ಎಂದೇ ಗೊತ್ತಾ ಗಿರಲಿಲ್ಲ. ಅನಂತರ ಕರೆ ದಾಗ ಪತ್ನಿಯ ಧ್ವನಿ ಕೇಳಿಸಿತು. ಐದಾರು ಅಡಿ ದೂರದಲ್ಲಿ ಬಿದ್ದಿದ್ದ  ಪತ್ನಿಯ ಧ್ವನಿ ಕೇಳಿದರೂ ಅತ್ತ ಹೋಗಲು ಆಗುತ್ತಿರಲಿಲ್ಲ. ಇದ್ದ ಲ್ಲಿಂದಲೇ ಆಕೆಗೆ ಧೈರ್ಯ ತುಂಬಿದೆ. ಅನಂತರ ಕೆಲಸಕ್ಕೆ ಬಳಸು ತ್ತಿದ್ದ ಸುತ್ತಿಗೆಯಿಂದ ಅಡ್ಡ ಲಾಗಿದ್ದ ಅವಶೇಷಗಳನ್ನು ನಿಧಾನ ವಾಗಿ ತೆರವುಗೊಳಿಸಿ ಒಂದು ದಿನ ಬಳಿಕ ಆಕೆಯ ಬಳಿ ತಲು ಪಿದೆ. ಬದುಕಿದರೂ, ಸತ್ತರೂ ಜತೆ ಯಾಗಿಯೇ ಇರೋಣ ಎಂದು ಆಕೆಗೆ ಧೈರ್ಯ ತುಂಬಿ ನೆರವಿಗಾಗಿ ಕಾದೆವು. ಮೊದಲ ದಿನ ಹಗಲು ಮಾತ್ರ ಗೊತ್ತಾಯಿತು. ಅನಂತರ ಏನೂ ಗೊತ್ತಾಗಲಿಲ್ಲ  ಎಂದು ತನ್ನ ಹೋರಾಟವನ್ನು ವಿವರಿಸಿದರು ದಿಲೀಪ.

ಸಿಮೆಂಟ್‌ ನೀರು ಕುಡಿದೆವು
ಒಂದು ದಿನ ಕಳೆಯುತ್ತಿದ್ದಂತೆ ನೀರಿನ ದಾಹ ಹೆಚ್ಚಾಯಿತು. ಜೀವ ಉಳಿಸಿಕೊಳ್ಳಬೇಕು ಎಂದು ಪಕ್ಕದಲ್ಲೇ ಇದ್ದ ಸಿಮೆಂಟ್‌ ನೀರು ಕುಡಿದೆವು. ಸಿಮೆಂಟ್‌ ನೀರು ಕುಡಿದಿದ್ದರಿಂದ ಪತ್ನಿ ವಾಂತಿ ಮಾಡಿಕೊಂಡಳು. ಆದರೂ ದಾಹ ತಡೆಯ ಲಾಗದೆ ನಾಲ್ವರು ಮಕ್ಕಳಿ ಗಾಗಿ ಜೀವ ಉಳಿಸಿ ಕೊಳ್ಳಲು ಎರಡೂ¾ರು ಬಾರಿ ಅದೇ ನೀರು ಕುಡಿದಿ ದ್ದೇವೆ ಎಂದರು ದಿಲೀಪ.

ಟಾಪ್ ನ್ಯೂಸ್

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

1-uu

‘U-WIN’ ಪೋರ್ಟ್‌ಲ್‌ಗೆ ಅಕ್ಟೋಬರ್‌ನಲ್ಲಿ ಚಾಲನೆ

MASIDI

Fiscal Crisis: ಅಯೋಧ್ಯೆ ಮಸೀದಿ ಟ್ರಸ್ಟ್‌ ಸಮಿತಿಗಳ ವಿಸರ್ಜನೆ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

High Court: ಅಶ್ಲೀಲ ವೀಡಿಯೋ ಹಂಚಿಕೆ: ಪ್ರೀತಂಗೌಡ ವಿರುದ್ಧದ ಪ್ರಕರಣ ವಿಚಾರಣೆ ಮುಂದಕ್ಕೆ

High Court: ಅಶ್ಲೀಲ ವೀಡಿಯೋ ಹಂಚಿಕೆ: ಪ್ರೀತಂಗೌಡ ವಿರುದ್ಧದ ಪ್ರಕರಣ ವಿಚಾರಣೆ ಮುಂದಕ್ಕೆ

KEA: 206 ಸೀಟು ರದ್ದು ಮಾಡಿಕೊಂಡ ಅಭ್ಯರ್ಥಿಗಳು

KEA: 206 ಸೀಟು ರದ್ದು ಮಾಡಿಕೊಂಡ ಅಭ್ಯರ್ಥಿಗಳು

CT Ravi: ಶೇ. 80ರಷ್ಟು ಹಿಂದೂಗಳೇ ಇದ್ದರೂ ಗಣೇಶೋತ್ಸವಕ್ಕೆ ಅಡ್ಡಿ

CT Ravi: ಶೇ. 80ರಷ್ಟು ಹಿಂದೂಗಳೇ ಇದ್ದರೂ ಗಣೇಶೋತ್ಸವಕ್ಕೆ ಅಡ್ಡಿ

Araga Jnanendra ಕಾಲದ ಹಗರಣ ತನಿಖೆ ನಡೆಸಿ: ಕಿಮ್ಮನೆ ರತ್ನಾಕರ್‌

Araga Jnanendra ಕಾಲದ ಹಗರಣ ತನಿಖೆ ನಡೆಸಿ: ಕಿಮ್ಮನೆ ರತ್ನಾಕರ್‌

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.