ಸುಳ್ಯದವರ ಕಣ್ಣು ಆರು ಕ್ಷೇತ್ರಗಳ ಮೇಲೆ!
Team Udayavani, Apr 5, 2019, 10:16 AM IST
ಸುಳ್ಯ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟಿರುವ ಸುಳ್ಯ ವಿಧಾನಸಭಾ ಕ್ಷೇತ್ರದವರ ಕಣ್ಣು ಒಟ್ಟು ಆರು ಲೋಕಸಭಾ ಕ್ಷೇತ್ರಗಳ ರಾಜಕೀಯ ಏರಿಳಿತ, ಪ್ರಚಾರ ವೈಖರಿ, ಫಲಿತಾಂಶಗಳ ಮೇಲಿದೆ!
ಈ ಆರು ಕ್ಷೇತ್ರಗಳಲ್ಲಿ ಯಾರು ಗೆಲ್ಲಬಹುದು, ಯಾರು ಸೋಲಬಹುದು ಎಂಬ ಚರ್ಚೆ ಸುಳ್ಯಕ್ಕೂ ಮಹತ್ವದ್ದು. ದಕ್ಷಿಣ ಕನ್ನಡ ಕ್ಷೇತ್ರದ ಜತೆಗೆ ಉಳಿದ ಐದು ಕಡೆ ಫಲಿತಾಂಶ ಏನಾಗಬಹುದೆಂಬ ಕಾತರ, ಕುತೂಹಲ ಇಲ್ಲಿನ ಜನರಿಗಿದೆ. ಈ ಎಲ್ಲ ಕ್ಷೇತ್ರಗಳಿಗೂ ಸುಳ್ಯಕ್ಕೂ ಇರುವ ರಾಜಕೀಯ ನಂಟು ಇದಕ್ಕೆ ಕಾರಣ.
ಆರು ಕ್ಷೇತ್ರಗಳು
ದಕ್ಷಿಣ ಕನ್ನಡ, ಬೆಂಗಳೂರು ಉತ್ತರ, ಉಡುಪಿ-ಚಿಕ್ಕಮಗಳೂರು, ಕೊಡಗು-ಮೈಸೂರು, ಹಾಸನ ಮತ್ತು ಕೇರಳದ ಕಾಸರಗೋಡು ಲೋಕಸಭಾ ಕ್ಷೇತ್ರಗಳ ಮೇಲೆ ಸುಳ್ಯದವರು ನಿಗಾ ಇರಿಸಿದ್ದಾರೆ. ಅಲ್ಲಿನ ದಿನ ನಿತ್ಯದ ಬೆಳವಣಿಗೆಗಳ ತಿಳಿದುಕೊಳ್ಳುತ್ತಾರೆ. ಇವುಗಳಲ್ಲಿ ಮೂರು ಕ್ಷೇತ್ರಗಳಲ್ಲಿ ಸುಳ್ಯದವರೇ ಸ್ಪರ್ಧಿಗಳಾದರೆ ಉಳಿದ ಮೂರು ಸುಳ್ಯ ವಿಧಾನಸಭಾ ಕ್ಷೇತ್ರದ ಗಡಿಗೆ ತಾಗಿವೆ.
ಸುಳ್ಯದ ಮೂವರು ಸ್ಪರ್ಧಿಗಳು
ಸುಳ್ಯ ತಾಲೂಕಿನ ಮಂಡೆಕೋಲು ನಿವಾಸಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಬೆಂಗಳೂರು ಉತ್ತರ ಕ್ಷೇತ್ರದಿಂದ, ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿರುವ ಚಾರ್ವಾಕ ಗ್ರಾಮದ ಕರಂದ್ಲಾಜೆ ನಿವಾಸಿ ಶೋಭಾ ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ, ಪಾಲ್ತಾಡಿ ಗ್ರಾಮದ ಕುಂಜಾಡಿ ನಿವಾಸಿ ನಳಿನ್ ಕುಮಾರ್ ಕಟೀಲು ದ.ಕ.ದಿಂದ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ದಕ್ಷಿಣ ಕನ್ನಡ ಕ್ಷೇತ್ರದ ಅಭ್ಯರ್ಥಿಯ ಫಲಿತಾಂಶದ ಬಗೆಗಿಯರುವ ಕುತೂ ಹಲದಷ್ಟೇ ಉಳಿದೆರಡು ಕಡೆಗೂ ಇದೆ.
ಗಡಿಗೆ ತಾಗಿರುವ ಮೂರು ಉಳಿದ ಮೂರು ಕ್ಷೇತ್ರಗಳಾದ ಹಾಸನ, ಕೊಡಗು -ಮೈಸೂರು, ಕೇರಳದ ಕಾಸರಗೋಡಿನತ್ತಲೂ ಸುಳ್ಯದವರ ಚಿತ್ತವಿದೆ. ಈ ಮೂರು ಸುಳ್ಯ ವಿಧಾನಸಭಾ ಕ್ಷೇತ್ರದ ಗಡಿ ಗ್ರಾಮಗಳಿಗೆ ತಾಗಿವೆ. ಜಾಲೂÕರಿನ ಪಂಜಿಕಲ್ಲು, ಮಂಡೆಕೋಲು ಮೊದಲಾದ ಪ್ರದೇಶಗಳು ಕೇರಳ-ಕರ್ನಾಟಕದ ಗಡಿ ಪ್ರದೇಶ. ಈ ಗಡಿಗೆ ತಾಗಿ ಕಾಸರಗೋಡು ಕ್ಷೇತ್ರವಿದೆ. ಕಾಸರಗೋಡು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರವೀಶ್ ತಂತ್ರಿ ಅವರು ಈ ಕಡೆಯ ಅನೇಕ ದೇವಾಲಯ, ದೈವಸ್ಥಾನಗಳಲ್ಲಿ ತಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಕಲೇಶಪುರದ ಗಡಿ ಶಿರಾಡಿ ಗ್ರಾಮಕ್ಕೆ ತಾಗಿದೆ. ಕೊಡಗು -ಮೈಸೂರು ಕ್ಷೇತ್ರದ ಅನೇಕ ಗ್ರಾಮಗಳು ಸುಳ್ಯದ ಗಡಿಯಲ್ಲಿವೆ. ಸಂಪಾಜೆ, ಚೆಂಬು,
ಪೆರಾಜೆ ಪ್ರದೇಶಗಳು ಸುಳ್ಯ ಗಡಿಯಲ್ಲಿವೆ.
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Pregnant: ಗರ್ಭಾವಸ್ಥೆ – ಬಾಣಂತನದ ಅವಧಿಯ ಮಾನಸಿಕ ಆರೋಗ್ಯ
Borderline Personality Disorder: ಬಾರ್ಡರ್ಲೈನ್ ಪರ್ಸನಾಲಿಟಿ ಡಿಸಾರ್ಡರ್
Election; ಮೋದಿ ನೇತೃತ್ವದ ‘ನವ ಭಾರತ’ಕ್ಕೆ ಮದರಸಾಗಳ ಅಗತ್ಯವಿಲ್ಲ: ಹಿಮಂತ ಬಿಸ್ವಾ ಶರ್ಮಾ
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಲೋಕಾರ್ಪಣೆಗೊಂಡಿದೆ ನೂತನ ಡಾ|ರಾಮದಾಸ್ ಎಂ.ಪೈ ಬ್ಲಾಕ್
Air India Express ವಿಮಾನದ ಇಂಜಿನ್ ನಲ್ಲಿ ಬೆಂಕಿ; ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ