ಚಿಕ್ಕಮಗಳೂರು ಗೆದ್ದ ದೊಡ್ಡ “ಮಗಳು’!


Team Udayavani, Apr 15, 2019, 6:30 AM IST

dodda-magalu

ಮಂಗಳೂರು: ಭಾರತದ ರಾಜ ಕೀಯ ಇತಿಹಾಸದಲ್ಲಿ ಈಗಿನ ದ.ಕನ್ನಡ ಜಿಲ್ಲೆಯ ಬೆಳ್ತಂಗಡಿ ಮತ್ತು ಉಡುಪಿ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರಗಳಿಗೆ ವಿಶೇಷ ವಾದ ಸ್ಥಾನವಿದೆ. ಏಕೆಂದರೆ, 1978ರ ಸಂದರ್ಭದಲ್ಲಿ ಈ ಎರಡೂ ಕ್ಷೇತ್ರಗಳು ಆಗಿನ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿ ಯಲ್ಲಿದ್ದವು. ಭಾರತದ ಉಕ್ಕಿನ ಮಹಿಳೆ ಎಂಬ ಬಿರುದಾಂಕಿತ ಇಂದಿರಾ ಗಾಂಧಿಗೆ ರಾಜಕೀಯ ಪುನರ್ಜನ್ಮ ನೀಡಿದ್ದು ಈ ಚಿಕ್ಕಮಗಳೂರು ಲೋಕಸಭಾ (ಈಗ ಉಡುಪಿ- ಚಿಕ್ಕಮಗಳೂರು) ಕ್ಷೇತ್ರ.

ತುರ್ತು ಪರಿಸ್ಥಿತಿಯ ನೆರಳಿನ 1977ರ ಲೋಕಸಭಾ ಚುನಾವಣೆಯಲ್ಲಿ ಇಂದಿರಾ ಅವರು ಅಲಹಾಬಾದ್‌ ಕ್ಷೇತ್ರದಿಂದ ಪರಾಭವಗೊಂಡರು; ಪಕ್ಷವೂ ಸೋತದ್ದರಿಂದೂ ಪ್ರಧಾನಿ ಪಟ್ಟ ಕಳೆದುಕೊಂಡರು. ಆ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಜಯಿಸಿದವರು ಇಂದಿರಾ.
ಅವರು ತುರ್ತು ಪರಿಸ್ಥಿತಿಯ ಅನೇಕ ಕಾನೂನು ಕ್ರಮಗಳನ್ನು ಎದುರಿಸುವಂತಾಗಿತ್ತು. ಈ ಎಲ್ಲಾ ಕಾರಣಗಳಿಂದ ಅವ ರನ್ನು ಲೋಕಸಭೆಗೆ ಆರಿಸಿಕೊಳ್ಳುವುದೇ ಒಳ್ಳೆಯದೆಂದು ಪಕ್ಷ ನಿರ್ಧರಿಸಿತು. ಆಗ, ಕರ್ನಾಟಕದಲ್ಲಿ ಡಿ. ದೇವರಾಜ ಅರಸ್‌ ಅವರು ಪ್ರಬಲರಾಗಿದ್ದರು. ಇಂದಿರಾರನ್ನು ಚಿಕ್ಕಮಗಳೂರು ಕ್ಷೇತ್ರದಿಂದ, ಉಪ ಚುನಾವಣೆ ಮೂಲಕ ಆರಿಸಲು ಯತ್ನಿಸಬೇಕೆಂದು ತೀರ್ಮಾನಿಸಲಾಯಿತು. ಇಂದಿರಾ ಸ್ಪರ್ಧೆಗೆ ಅನುಕೂಲವಾಗಲು ಸಂಸದ ಡಿ. ಬಿ. ಚಂದ್ರೇಗೌಡ ರಾಜೀನಾಮೆ ನೀಡಿದರು.

ಇಂದಿರಾ ನಾಮ ಪತ್ರ ಸಲ್ಲಿಸಿದರು. ಆ ಕಾಲಕ್ಕೆ ಇದು ಅತ್ಯಂತ ಮಹತ್ವದ ಅಂತಾರಾಷ್ಟ್ರೀಯ ಬೆಳವಣಿಗೆ ಯಾಯಿತು. ಚಿಕ್ಕಮಗಳೂರು ಫಲಿತಾಂಶವನ್ನು ದೇಶ ಮಾತ್ರವಲ್ಲ; ಜಗತ್ತಿಗೆ ಜಗತ್ತೇ ಕಾತರ ಕುತೂಹಲಗಳಿಂದ ಕಾಯುವಂತಾಯಿತು.

ಆಗ, ಜನತಾ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿತ್ತು. ಮೊರಾರ್ಜಿ ದೇಸಾೖ ಪ್ರಧಾನಮಂತ್ರಿಯಾಗಿದ್ದರು. ಜನತಾ ಪಕ್ಷ ಆಗ ಕಾಂಗ್ರೆಸ್ಸೇತರ ಪಕ್ಷಗಳು ಒಟ್ಟಾಗಿ ರೂಪುಗೊಂಡ ಪಕ್ಷವಾಗಿತ್ತು. ಜನತಾ ಪಕ್ಷಕ್ಕೆ ಇಂದಿರಾ ಸೋಲು ಪ್ರಮುಖ ಎಜೆಂಡಾ ಆಗಿತ್ತು; ಅಂತೆಯೇ ಕಾಂಗ್ರೆಸ್‌ಗೆ ಇಂದಿರಾ ಗೆಲುವು ಕೂಡಾ. ಚುನಾವಣೆಯಲ್ಲಿ ಇಂದಿರಾ ವಿರುದ್ಧ ಸ್ಪರ್ಧಿಸಿದವರು ವೀರೇಂದ್ರ ಪಾಟೀಲ್‌. ಅವರು ಆಗ ಕರ್ನಾಟಕದ ಮಾಜಿ ಮುಖ್ಯಮಂತ್ರಿ. ಇಂದಿರಾ ಅವರು 70 ಸಾವಿರ ಮತಗಳ ಅಂತರದಿಂದ ಗೆದ್ದರು. ಚಿಕ್ಕಮಗಳೂರ ಹಿರಿಯ ಮಗಳು ಅಂತ ಹೇಳುತ್ತಿದ್ದರು. ಮತ್ತೆ ಪಾರ್ಲಿಮೆಂಟ್‌ ಪ್ರವೇಶಿಸಿದರು. ದೇಶದ ರಾಜಕೀಯದಲ್ಲಿ ಈ ಮೂಲಕ ಸತತ ಬದಲಾವಣೆಯೂ ಉಂಟಾಯಿತು. ಜನತಾ ದಳ ವಿಭಜನೆಯಾಯಿತು. 1980ರಲ್ಲಿ ಮತ್ತೆ ಇಂದಿರಾ ಪ್ರಧಾನಿಯಾದರು. 1984ರಲ್ಲಿ ಅವರ ಹತ್ಯೆಯಾಯಿತು.

ಅಂದಹಾಗೆ..
ಕರಾವಳಿಯ ತಿಂಡಿ ತಿನಿಸು, ಖಾದ್ಯಗ ಳನ್ನು ರಾಷ್ಟ್ರೀಯ ನಾಯಕರೆಲ್ಲ ಸವಿದಿದ್ದಾರೆ. – ಮೆಚ್ಚಿಕೊಂಡಿದ್ದಾರೆ. ನೀರು ದೋಸೆ, ಹೋಳಿಗೆ ಹಲವು ನಾಯಕರಿಗೆ ಅಚ್ಚುಮೆಚ್ಚು. ನಾನ್‌ವೆಜ್‌ನವರಾದರೆ ಮೀನು, ಊರ ಕೋಳಿಯ ಸುಕ್ಕ, ಕೋಳಿ ರೊಟ್ಟಿಗೆ ಆದ್ಯತೆ. ಇಂದಿರಾ ಅವರಿಗೆ ಇಲ್ಲಿನ ತುಪ್ಪದಲ್ಲಿ ಹುರಿದ ಗೋಡಂಬಿ, ಗೋಧಿ ಹಲ್ವಾ ಬಲುಪ್ರಿಯವಾಗಿತ್ತು. ಅವರದ್ದು ವಿರಳವಾದ ಬ್ಲಿಡ್‌ ಗ್ರೂಪ್‌. ಆಕೆ ಮಂಗಳೂರಿಗೆ ಬಂದಾಗಲೆಲ್ಲ ಅದೇ ಬ್ಲಿಡ್‌ ಗ್ರೂಪ್‌ನ ಇಬ್ಬರು (ಮಂಗಳೂರು, ಪಾಣೆ ಮಂಗಳೂರಿನವರು) ಭದ್ರತಾ ಅಧಿಕಾರಿಗಳ ಜತೆಯಲ್ಲಿರುತ್ತಿದ್ದರು.

–  ಮನೋಹರ ಪ್ರಸಾದ್‌

ಟಾಪ್ ನ್ಯೂಸ್

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

16

Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್‌ ಮೈಂಡ್; ಗೋಲ್ಡಿ ಬ್ರಾರ್‌ ಶೂಟೌಟ್ – ವರದಿ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

16

Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್‌ ಮೈಂಡ್; ಗೋಲ್ಡಿ ಬ್ರಾರ್‌ ಶೂಟೌಟ್ – ವರದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

16

Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್‌ ಮೈಂಡ್; ಗೋಲ್ಡಿ ಬ್ರಾರ್‌ ಶೂಟೌಟ್ – ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.