ಕೊಡ್ಲಿಪೇಟೆ: ಅಂಬೇಡ್ಕರ್ ಅವರ 128ನೇ ಜಯಂತಿ ಆಚರಣೆ
Team Udayavani, Apr 16, 2019, 6:30 AM IST
ಶನಿವಾರಸಂತೆ: ಸಮಿಪದ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಗುರುಸಿದ್ದೇಶ್ವರ ಸ್ವಾಮೀ ವಿದ್ಯಾಪೀಠದಲ್ಲಿ ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 128ನೇ ಜಯಂತಿಯನ್ನು ಆಚರಿಸಲಾಯಿತು. ಕಿರಿಕೊಡ್ಲಿ ಮಠಾಧೀಶ ಮತ್ತು ವಿದ್ಯಾಪೀಠ ಅಧ್ಯಕ್ಷ ಸದಾಶಿವಸ್ವಾಮೀಜಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಮೂಲಕ ಅಂಬೇಡ್ಕರ್ ಅವರ ಜಯಂತಿಗೆ ಚಾಲನೆ ನೀಡಿ ಮಾತನಾಡಿ-ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂದೇಶ, ತತ್ವ- ಸಿದ್ದಾಂñಗಳನ್ನು ನಾವೆಲ್ಲಾರೂ ಪಾಲಿಸಬೇಕಾಗಿದೆ, ದೇಶದ ಸರ್ವಾಂಗಿಣಿಯ ಅಭಿವೃದ್ದಿಯುೆ ಸಂವಿಧಾನದ ಅಡಿಯಲ್ಲಿ ಸಾಗುತ್ತದೆ ಈ ನಿಟ್ಟಿನಲ್ಲಿ ಭಾರತದ ಸಂವಿಧಾನ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ನಾವೆಲ್ಲಾರೂ ಗೌರವ ಕೊಡಬೇಕೆಂದರು.
ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆ ಕಾರ್ಯದರ್ಶಿ ನಂಜುಂಡ, ವಿದ್ಯಾಸಂಸ್ಥೆ ಪ್ರಾಂಶುಪಾಲೆ ತನುಜ, ಉಪನ್ಯಾಸಕರಾದ ಸಂಪತ್, ಶಾಲಿನಿ, ಗೀತಾ, ಮಾನಸ, ರಮ್ಯ, ಭವಾನಿ, ಜ್ಯೋತಿ, ಭವ್ಯ, ಭಾಗ್ಯಜ್ಯೋತಿ ಹಾಜರಿದ್ದರು.