ಕೃತಕ ನೆರೆ ತಡೆಗೆ ಕ್ರಮ ಕೈಗೊಳ್ಳಬೇಕಿದೆ
Team Udayavani, Apr 21, 2019, 6:05 AM IST
ಸಾಂದರ್ಭಿಕ ಚಿತ್ರ.
ವರ್ಷಂಪ್ರತಿ ಮಳೆಗಾಲದಲ್ಲಿ ಜ್ಯೋತಿ ಸರ್ಕಲ್,ಬಂಟ್ಸ್ ಸರ್ಕಲ್,ಕಂಕನಾಡಿ,ಬಲ್ಮಠ,ಕೆ.ಎಸ್.ರಾವ್ ರಸ್ತೆ, ಕೊಡಿಯಾಲಬೈಲ್,ಬಿಜೈ ಹಾಗೂ ಇನ್ನಿತರ ರಸ್ತೆಗಳು, ದೊಡ್ಡ ತೋಡು,ನದಿಗಳಲ್ಲಿ ನೀರು ರಭಸದಲ್ಲಿ ಹರಿದಾಗ ವಾಹಗಳಿಗೆ,ಪಾದಚಾರಿಗಳಿಗೆ ತೀರಾ ಸಂಕಷ್ಟವನ್ನೊಡ್ಡುತ್ತವೆ.
ಆದರೆ ಇಷ್ಟು ವರ್ಷ ಜನರು ಮಳೆಗಾಲದಲ್ಲಿ ಇಂತಹ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೂ,
ಮ.ನಾ.ಪ.ವಾಗಲಿ, ಜಿಲ್ಲಾಡಳಿತವಾಗಲಿ ಮುಂಚಿತವಾಗಿ ಇಂತಹ ಸಮಸ್ಯೆಗಳನ್ನು ಬಗೆಹರಿಸಲು ಕ್ರಮಕೈಗೊಂಡಿಲ್ಲ. ಈ ಕೃತಕ ನೆರೆಗೆ ಮುಖ್ಯ ಕಾರಣ ತೋಡು, ಚರಂಡಿ, ರಾಜ ಕಾಲುವೆಗಳ ಹೂಳೆತ್ತುವ ಕೆಲಸ ಕ್ಲಪ್ತ ಸಮಯದೊಳಗೆ ಮಾಡಿ ಮುಗಿಸದೇ ಇರುವುದು.ಈಗಾಗಲೇ ಕೆಲವು ಕಡೆಗಳಲ್ಲಿ ಹೂಳೆತ್ತುವ ಕಾಮಗಾರಿ ಆರಂಭವಾಗಿದ್ದರೂ ಶೀಘ್ರದಲ್ಲೇ ಎಲ್ಲ ಚರಂಡಿ,ರಾಜಕಾಲುವೆಗಳನ್ನು ಸ್ವತ್ಛಗೊಳಿಸಬೇಕಿದೆ.ಬಹುತೇಕ ಎಲ್ಲ ಮುಖ್ಯರಸ್ತೆ, ಅಡ್ಡ ರಸ್ತೆಗಳ ಚರಂಡಿ ನಿರ್ಮಾಣ ಕಾಮಗಾರಿ ತುಂಬಾ ಭರದಿಂದ ನಡೆಯುತ್ತಿದೆ.
ಆದರೆ ಈ ಕಾಮಗಾರಿಗಳು ಮೇ ತಿಂಗಳೊಳಗೆ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ.ಇದರಿಂದಅಪಾಯ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು,ಕೂಡಲೇ ಸಂಬಂಧಪಟ್ಟವರು ಗಮನಹರಿಸಿ ಕಾಮಗಾರಿಗಳನ್ನು ಮುಗಿಸಲು ಕ್ರಮಕೈಗೊಳ್ಳಬೇಕಿದೆ.
– ಜೆ. ಎಫ್ ಡಿ’ಸೋಜಾ,ಅತ್ತಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura ಮರ್ಯಾದಾ ಹತ್ಯೆ: ಇಬ್ಬರಿಗೆ ಗಲ್ಲು,ಐವರಿಗೆ ಜೀವಾವಧಿ ಶಿಕ್ಷೆ
Dharwad; ವಾರಂಟಿ ಇಲ್ಲದ ಕಾಂಗ್ರೆಸ್ ನ ಗ್ಯಾರಂಟಿ ನಂಬಬೇಡಿ: ಅಣ್ಣಾಮಲೈ
Shobha Karandlaje; 60 ವರ್ಷ ದೇಶವನ್ನಾಳಿದ ಕಾಂಗ್ರೆಸ್ಗೆ ಪ್ರಧಾನಿ ಅಭ್ಯರ್ಥಿ ಸಿಗ್ತಿಲ್ಲ
Honnavar; ಖಾಸಗಿ ಬಸ್ ಪಲ್ಟಿ: 2 ಸಾವು, 45ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ
Yellapur: ಟಿಪ್ಪರ್ ಗೆ ಢಿಕ್ಕಿಯಾಗಿ ಬೈಕ್ ಸಹಸವಾರೆ ಬಾಲಕಿ ಮೃತ್ಯು