“ಉಚಿತ ನೀರು-ಎಲ್ಲ ಅಗತ್ಯಕ್ಕೂ ಬೇಕಾದ ನೀರು ತೆಗೆದುಕೊಳ್ಳಿ’

ದಾನದಿಂದ ಇಲ್ಲಿ ಅಕ್ಷಯವಾಗುತ್ತಿದೆ ನೀರು

Team Udayavani, May 19, 2019, 6:10 AM IST

uchita-neeru

ವಿದ್ಯಾನಗರ:ಕಳೆದ ಬಾರಿ ಎದುರಾದ ಪ್ರಳಯದ ಆತಂಕ ಮಾಸುವ ಮುನ್ನವೇ ಬರಗಾಲದ ಭಯ ಜನರನ್ನು ಆವರಿಸಲಾರಂಭಿಸಿದೆ. ಅಂತರ್ಜಲ ಕುಸಿದು ಬಾವಿ, ಬೋರ್‌ ಬತ್ತಿ ಹೋಗಿದೆ. ಪಂಚಾಯತು ಹಾಗೂ ನಗರಸಭೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಿ ಜನರ ಅಗತ್ಯಕ್ಕೆ ಸ್ಪಂ ಸುವ ಪ್ರಯತ್ನ ಮಾಡುತ್ತಿದೆಯಾದರೂ ಅದು ಪೇಟೆ ಪಟ್ಟಣಗಳಿಗೆ ಮಾತ್ರ ಸೀಮಿತವಾಗಿದ್ದು ಒಳಪ್ರದೇಶದ ಜನರ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ.

ಇಂತಹ ಸಂದರ್ಭದಲ್ಲಿ ನೀರು ಬತ್ತಿಹೋಗಿ ಮುಂದೆ ತಮ್ಮ ಅಗತ್ಯಕ್ಕೂ ನೀರಿಲ್ಲದ ಪರಿಸ್ಥಿತಿ ಎದುರಾಗಬಹುದು ಎಂಬ ಕಾರಣದಿಂದ ನೀರಿದ್ದವರೂ ಇಲ್ಲದವರಿಗೆ ನೀರು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಇಲ್ಲೊಬ್ಬರು ಉಚಿತವಾಗಿ ಅಗತ್ಯಕ್ಕೆ ಬೇಕಾದಷ್ಟು ನೀರನ್ನು ಪೂರೈಸಿ ಮಾದರಿಯಾಗಿದ್ದಾರೆ.

”ಉಚಿತ ನೀರು-ಎಲ್ಲ ಅಗತ್ಯಕ್ಕೂ ಬೇಕಾದ ನೀರು ತೆಗೆದುಕೊಳ್ಳಿ” ಎಂದು ಕೆಂಪು ಬಣ್ಣದಲ್ಲಿ ಕನ್ನಡ ಮತ್ತು ಮಲಯಾಳ ಅಕ್ಷರಗಳಲ್ಲಿ ಬರೆದಿರುವ ಬಿಳಿಬಣ್ಣದ ಟ್ಯಾಂಕ್‌ ಕುಂಬಳೆ-ಬದಿಯಡ್ಕ ಮಧ್ಯೆ ಸೂರಂಬೆ„ಲಿನ ಮಾರ್ಗಬದಿಯಲ್ಲಿ ಗಮನ ಸೆಳೆಯುತ್ತಿದೆ. ಈಮಾರ್ಗವಾಗಿ ಸಂಚರಿಸುವವರು ಒಂದು ಕ್ಷಣ ತನ್ನತ್ತ ನೋಡುವಂತೆ ಮಾಡುತ್ತದೆ. ಕಬ್ಬಿಣದ ಸ್ಟೇಂಡ್‌ನ‌ ಮೇಲೆ ಇಟ್ಟಿರುವ ಟ್ಯಾಂಕ್‌ಗೆ ಪೈಪನ್ನು ಅಳವಡಿಸಲಾಗಿದ್ದು ಅಗತ್ಯದ ನೀರನ್ನು ಯಾರುಬೇಕಾದರೂ ಇದರಿಂದ ಸುಲಭವಾಗಿ ಸಂಗ್ರಹಿಸಬಹುದಾಗಿದೆ.

ಮಾತ್ರವಲ್ಲದೆ ಹೆಚ್ಚಿನ ನೀರಿಗೆ ಕರೆಮಾಡಿ ಎಂದು ನಂಬರನ್ನೂ ನೀಡಲಾಗಿದೆ. ಈ ಪ್ರದೇಶದ ಖಾಸಗಿ ವ್ಯಕ್ತಿಯೊಬ್ಬರು ಕಳೆದ ಮೂರು ವರ್ಷಗಳಿಂದ ಈ ರೀತಿ ಜನರ ದಾಹವನ್ನು ನೀಗುವ ಪುಣ್ಯಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಯಾರು ಎಷ್ಟು ನೀರು ಬೇಕಾದರೂ ತೆಗೆಯ ಬಹುದು. ನೀರು ಕೇಳಿದರೆ, ಹೆಚ್ಚು ತೆಗೆದೆವೆಂದು ಆರೋಪಿಸುವರೆಂಬ ಭಯವೂ ಇಲ್ಲಿಲ್ಲ.

ಯಾರೇ ನೀರು ಕೇಳಿ ಬಂದರೂ ಇಲ್ಲ ಎನ್ನದೆ ಬೇಕಾದಷ್ಟು ನೀರು ನೀಡುವ ಇವರ ಹಿತ್ತಿಲಲ್ಲಿ ಎರಡು ಕೊಳವೆಬಾವಿಗಳಿದ್ದು ಎರಡರಲ್ಲೂ ನೀರಿದೆ. ಎಪ್ರಿಲ್‌ ಪ್ರಾರಂಭದಿಂದ ಅಕ್ಕಪಕ್ಕದ ಮನೆಗಳಿಗೂ ಈ ನೀರೇ ಆಸರೆ. ಸೀತಾಂಗೋಳಿ, ಬೇಳ, ದರ್ಬಾರ್‌ಕಟ್ಟೆ ಮುಂತಾದ ಕಡೆಗಳಿಂದಲೂ ನೀರಿಗಾಗಿ ಬರುತ್ತಿದ್ದರು. ಆದರೆ ನೀರು ಕೊಂಡೊಯ್ಯಲು ಹೆಚ್ಚಿನ ಬಾಡಿಗೆ ತೆರಬೇಕಾಗಿ ಬರುವುದರಿಂದ ಸದ್ಯ ಸುತ್ತುಮುತ್ತ ಪ್ರದೇಶದ ಜನರು ಮಾತ್ರವೇ ಇಲ್ಲಿಂದ ನೀರು ಸಂಗ್ರಹಿಸುತ್ತಾರೆ.

ಹೆಸರಿಗಾಗಿ, ದುಡ್ಡಿಗಾಗಿ ಹೋರಾಡುವ ಈ ಸಮಾಜದಲ್ಲು ನಿಸ್ವಾರ್ಥ ಭಾವದಿಂದ ಅದೆಷ್ಟೋ ಜೀವಗಳಿಗೆ ಆಸರೆಯಾಗುವ ಇವರು ಮೂರು ವರ್ಷಗಳ ಹಿಂದೆ ನವಂಬರ್‌-ಡಿಸೆಂಬರ್‌ ತಿಂಗಳಲ್ಲೇ ನೀರಿಗಾಗಿ ಇಲ್ಲಿನ ಜನರು ಕಷ್ಟಪಡುವಂತಾಗಿತ್ತು. ಆ ಸಂದರ್ಭದಲ್ಲಿ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಈ ರೀತಿ ಟ್ಯಾಂಕ್‌ಲ್ಲಿ ನೀರು ತುಂಬಿ ಇಟ್ಟಾಗ ಅದು ಹಲವಾರು ಮಂದಿಗೆ ನೆರವಾಯಿತು. ಹಾಗಾಗಿ ಮುಂದಿನ ವರ್ಷಗಳಲ್ಲೂ ಇದನ್ನು ಮುಂದುವರೆಸಿದೆ. ಎಂದು ಅಭಿಪ್ರಾಯಪಡುತ್ತಾರೆ.

ಇಂತಹ ಮಾದರಿ ಕಾರ್ಯವನ್ನು ನಮ್ಮ ನಡುವೆ ಇರುವ ಯುವ ಸಂಘಟನೆಗಳು, ಸಮಾಜ ಸೇವಾ ಘಟಕಗಳೂ ಎಚ್ಚೆತ್ತು ಕೊಂಢೂ ನೀರು ಸಂಗ್ರಹ ಮತ್ತು ಸರಬರಾಜು ಮಾಡುವ ಕಾಯಕದಲ್ಲಿ ತೊಡಗಿಸಿಕೊಂಡಲ್ಲಿ ಜಿಲ್ಲೆಯ ಮೂಲೆಮೂಲೆಗಳಲ್ಲೂ ಕುಡಿಯುವ ನೀರಿನ ಸಮಸ್ಯೆಯನ್ನು ಹೋಗಲಾಡಿಸಲು ಸಾಧ್ಯ.

ಶ್ಲಾಘನೀಯ
ನೀರು ಸಾರ್ವಜನಿಕ ಆಸ್ತಿ. ಅದನ್ನು ಹಂಚಿಕೊಂಡು ಬದುಕಿದಾಗ ನೀರಿನ ಸಮಸ್ಯೆ ಬಹಳಷ್ಟು ಕಡಿಮೆಯಾಗುತ್ತದೆ. ಇದನ್ನೇ ಸೂರಂಬೆ„ಲಿನ ಖಾಸಗಿ ವ್ಯಕ್ತಿಯೊಬ್ಬರು ಮಾಡುತ್ತಿರುವುದು ಮಾದರಿ ಹಾಗೂ ಶ್ಲಾಘನೀಯ.
ದುಡ್ಡಿಗಾಗಿ ನೀರಿನ ಮಾರಾಟ ಸಲ್ಲದು. ಮಾರುಕಟ್ಟೆಗಳಲ್ಲಿ ಬಾಟಲಿಗಳಲ್ಲಿ ಕುಡಿಯುವ ನೀರು ಧಾರಾಳವಾಗಿ ಲಭಿಸುತ್ತದೆ. ಸರಕಾರ ಇಂತಹ ಕಂಪೆನಿಗಳಿಗೆ ಸಬ್ಸಿಡಿ ನೀಡಿ ಪೊÅàತ್ಸಾಹಿಸುವ ಬದಲು ಕೋಟಿಗಟ್ಟಲೆ ಲೀಟರು ನೀರನ್ನು ಜನರಿಗೆ ಉಚಿತವಾಗಿ ಲಭಿಸುವಂತೆ ಮಾಡುವ ಕ್ರಮ ಕೈಗೊಂಡಲ್ಲಿ ನೀರಿನ ಹಾಗೂ ಪ್ಲಾಸ್ಟಿಕ್‌ ಬಾಟಲಿಗಳಿಂದ ಉಂಟಾಗುವ ತ್ಯಾಜ್ಯ ಸಮಸ್ಯೆಯನ್ನು ನಿಯಂತ್ರಿಸಲು ಸಾಧ್ಯ
 -ರಾಜು ಕಿದೂರು, ಸ್ಥಳೀಯರು.

  • ವಿದ್ಯಾಗಣೇಶ್‌ ಅಣಂಗೂರು

ಟಾಪ್ ನ್ಯೂಸ್

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.