ಶೋಭಾ ಕರಂದ್ಲಾಜೆ ಪುನರಾಯ್ಕೆಯಲ್ಲಿ ದಾಖಲೆ

ಮತಗಳ ಅಂತರ 3,49,599

Team Udayavani, May 24, 2019, 6:10 AM IST

shobha

ಉಡುಪಿ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹಿಂದಿನ ಚುನಾವಣೆಯಲ್ಲಿ ತಾನೇ ದಾಖಲಿಸಿದ ಅತ್ಯಧಿಕ ಅಂತರದ ದಾಖಲೆಯನ್ನು ಮುರಿದು ವಿಜಯಿ ಯಾದರು. ಅವರು 7,18,916 ಮತ ಗಳಿಸಿ ಸಮೀಪದ ಸ್ಪರ್ಧಿ ಜೆಡಿಎಸ್‌ – ಕಾಂಗ್ರೆಸ್‌ನ ಪ್ರಮೋದ್‌ ಮಧ್ವರಾಜರನ್ನು 3,49,599 ಮತಗಳ ಅಂತರದಿಂದ ಸೋಲಿಸಿ ಜಯಶಾಲಿಯಾದರು.

ಅಂಚೆ ಮತ ಪತ್ರವೂ ಸೇರಿದಂತೆ ಒಟ್ಟು 11,51,012 ಮತಗಳಲ್ಲಿ ಶೋಭಾ 7,18,916 ಮತ, ಪ್ರಮೋದ್‌ 3,69,317 ಮತ, ಬಿಎಸ್‌ಪಿಯ ಪಿ. ಪರಮೇಶ್ವರ್‌ 15,947, ಪಿ. ಅಮೃತ್‌ ಶೆಣೈ (ಪ) 7,981, ಶಿವಸೇನೆಯ ಗೌತಮ್‌ ಪ್ರಭು 7,431, ಅಬ್ದುಲ್‌ ರೆಹಮಾನ್‌ (ಪ) 6,017, ಕೆ.ಸಿ. ಪ್ರಕಾಶ್‌ (ಪ) 3,543, ಪ್ರೌಟಿಸ್ಟ್‌ ಸರ್ವ ಸಮಾಜದ ಎಂ.ಕೆ. ದಯಾನಂದ 3,539, ಎಂ. ಗಣೇಶ (ಪ) 3,526, ಉತ್ತಮ ಪ್ರಜಾಕೀಯ ಪಾರ್ಟಿಯ ಸುರೇಶ ಕುಂದರ್‌ 3,488, ಸಿಪಿಐ ಎಂಎಲ್‌ ರೆಡ್‌ಸ್ಟಾರ್‌ನ ವಿಜಯ ಕುಮಾರ್‌ 2,216, ಆರ್‌ಪಿಐನ ಶೇಖರ ಹಾವಂಜೆ 1,581 ಮತಗಳನ್ನು ಗಳಿಸಿದರು. 7,518 ಮಂದಿ ನೋಟಾ ಚಲಾಯಿಸಿದ್ದರು.

ಅಂಚೆ ಮತ ಪತ್ರ
ಒಟ್ಟು 1,881 ಅಂಚೆ ಮತದಾರರಲ್ಲಿ ಶೋಭಾರಿಗೆ 1,434, ಪ್ರಮೋದರಿಗೆ 385 ಮತಗಳು ದೊರೆ ತವು. ಅವುಗಳಲ್ಲಿ 8 ನೋಟಾ ಆಗಿತ್ತು. ಒಟ್ಟು 2,492 ಅಂಚೆ ಮತ ಪತ್ರದಲ್ಲಿ 611 ಮತಗಳು ತಿರಸ್ಕೃತವಾಗಿ 1,881 ಸಿಂಧುವಾಗಿದ್ದವು. ಮತಎಣಿಕೆ ಸಂಜೆ ವರೆಗೂ ನಡೆದು ಡಿಸಿ, ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ಶೋಭಾ ಕರಂದ್ಲಾಜೆಯವರ ಆಯ್ಕೆಯನ್ನು ಘೋಷಿಸಿದರು. ಸೈಂಟ್‌ ಸಿಸಿಲಿ ಶಾಲೆ ಆವರಣದಲ್ಲಿ ಮತ ಎಣಿಕೆ ನಡೆಯಿತು.

ಪ್ರಮೋದ್‌ ನಾಲ್ಕು ಬಾರಿ ಮಾತ್ರ ಮುನ್ನಡೆ !
ಒಟ್ಟು 21 ಸುತ್ತಿನಲ್ಲಿ ನಡೆದ ಮತ ಎಣಿಕೆಯಲ್ಲಿ ಪ್ರಮೋದ್‌ ಒಟ್ಟಾರೆಯಾಗಿ ಒಂದು ಬಾರಿಯೂ ಮುನ್ನಡೆ ಸಾಧಿಸಲಿಲ್ಲ. ಆದರೆ 5 ಸುತ್ತುಗಳಲ್ಲಿ ಒಂದೊಂದು ಕ್ಷೇತ್ರದಲ್ಲಿ ಅಲ್ಪ ಮುನ್ನಡೆ ದಾಖಲಿಸಿದ್ದರು.

2ನೇ ಸುತ್ತಿನಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಮೋದ್‌ 4,174, ಶೋಭಾ 3,966 ಮತ ಗಳಿಸಿದ್ದರು. 6ನೇ ಸುತ್ತಿನಲ್ಲಿ ಉಡುಪಿಯಲ್ಲಿ ಪ್ರಮೋದ್‌ 4,386, ಶೋಭಾ 4,134 ಮತ, 9ನೇ ಸುತ್ತಿನಲ್ಲಿ ಚಿಕ್ಕಮಗಳೂರಿನಲ್ಲಿ ಪ್ರಮೋದ್‌ 4,068, ಶೋಭಾ 3,197, 11ನೇ ಸುತ್ತಿನಲ್ಲಿ ಕಾಪುವಿನಲ್ಲಿ ಪ್ರಮೋದ್‌ 4,891, ಶೋಭಾ 4,369, 17ನೇ ಸುತ್ತಿನಲ್ಲಿ ತರಿಕೆರೆಯಲ್ಲಿ ಪ್ರಮೋದ್‌ 1,439, ಶೋಭಾ 637 ಮತಗಳನ್ನು ಗಳಿಸಿದ್ದಾರೆ. ಉಳಿದಂತೆ ಎಲ್ಲ ಸುತ್ತಿನಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಶೋಭಾ ನಾಗಾಲೋಟದಲ್ಲಿ ಸಾಗಿದರು.

ಟಾಪ್ ನ್ಯೂಸ್

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

19

Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2011

ಬೆಂಗಳೂರಿನಲ್ಲೊಂದು ಟೈ ರೋಮಾಂಚನ

rajani-kanth

ಮೋದಿಯೂ ವರ್ಚಸ್ವಿ ನಾಯಕ

smruthi-irani

ಬರಿಗಾಲಲ್ಲೇ ವಿನಾಯಕ ದೇಗುಲಕ್ಕೆ ತೆರಳಿದ್ದ ಸ್ಮತಿ!

Asshivrda

ಮಾಜಿ ರಾಷ್ಟ್ರಪತಿ ಪ್ರಣಬ್ ರ ಆಶೀರ್ವಾದ ಪಡೆದ ಪ್ರಧಾನಿ ನರೇಂದ್ರ ಮೋದಿ

Lalu-head-scratch-700

ರಾಜೀನಾಮೆ ನೀಡುವ ರಾಹುಲ್‌ ನಿರ್ಧಾರ ಆತ್ಮಾಹುತಿಯದ್ದು : ಲಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.