ಬೆಳಗಾವಿ-ಚಿಕ್ಕೋಡಿ ಕ್ಷೇತ್ರಗಳು ಕೇಸರಿ ಪಡೆಯ ಮಡಿಲಿಗೆ
Team Udayavani, May 24, 2019, 12:37 PM IST
ಬೆಳಗಾವಿ: ಗಡಿನಾಡು ಬೆಳಗಾವಿ ಜಿಲ್ಲೆಯಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮತದಾರರು ಬೆಳಗಾವಿ ಹಾಗೂ ಚಿಕ್ಕೋಡಿ ಎರಡೂ ಕ್ಷೇತ್ರಗಳನ್ನು ಬಿಜೆಪಿ ಮಡಿಲಿಗೆ ಹಾಕಿದ್ದಾರೆ.
ಗುರುವಾರ ಪ್ರಕಟಗೊಂಡ ಫಲಿತಾಂಶದಲ್ಲಿ ಬಿಜೆಪಿ ಬೆಳಗಾವಿ ಕ್ಷೇತ್ರವನ್ನು ತನ್ನಲ್ಲೇ ಉಳಿಸಿಕೊಂಡಿದ್ದರೆ ಚಿಕ್ಕೋಡಿ ಕ್ಷೇತ್ರವನ್ನು ಕಾಂಗ್ರೆಸ್ನಿಂದ ಬಿಜೆಪಿ ಕಸಿದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅಲೆಯ ಮೇಲೆ ಭರ್ಜರಿ ಪ್ರಚಾರ ಮಾಡಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಭರ್ಜರಿ ಅಂತರದಿಂದ ಸತತ ನಾಲ್ಕನೇ ಬಾರಿಗೆ ಜಯ ಸಾಧಿಸುವ ಮೂಲಕ ದಾಖಲೆಯ ಸಾಧನೆ ಮಾಡಿದ್ದಾರೆ.
ಆದರೆ ತೀವ್ರ ಕುತೂಹಲ ಕೆರಳಿಸಿದ್ದ ಚಿಕ್ಕೋಡಿ ಕ್ಷೇತ್ರದಲ್ಲಿ ಬಿಜೆಪಿಯ ಅಣ್ಣಾಸಾಹೇಬ ಜೊಲ್ಲೆ ಕಾಂಗ್ರೆಸ್ನ ಪ್ರಕಾಶ ಹುಕ್ಕೇರಿ ವಿರುದ್ಧ ಅಭೂತ ಪೂರ್ವ ಜಯ ದಾಖಲಿಸಿ ಮೊದಲ ಬಾರಿಗೆ ಸಂಸತ್ ಮೆಟ್ಟಿಲು ಹತ್ತಿದ್ದಾರೆ. ಒಟ್ಟು 1,16,401 ಮತಗಳ ಅಂತರದ ಜಯ ದಾಖಲಿಸಿದ ಅಣ್ಣಾಸಾಹೇಬ ಜೊಲ್ಲೆ ಕಳೆದ ವಿಧಾನಸಭೆಯಲ್ಲಿ ಪ್ರಕಾಶ ಹುಕ್ಕೇರಿ ಅವರ ಪುತ್ರ ಗಣೇಶ ಹುಕ್ಕೇರಿ ವಿರುದ್ಧದ ಸೋಲಿನ ಸೇಡು ತೀರಿಸಿಕೊಂಡರು.
ಚಿಕ್ಕೋಡಿಯಲ್ಲಿ ಕಡೆಯ ಸುತ್ತಿನವರೆಗೂ ಮುನ್ನಡೆಯಿಂದ ಅಣ್ಣಾಸಾಹೇಬ ಜೊಲ್ಲೆ ಹಿಂದೆ ಸರಿಯಲೇ ಇಲ್ಲ. ಕಡೆಯ ಕ್ಷಣದವರೆಗೂ ಅದನ್ನು ಕಾಯ್ದುಕೊಂಡು ಬಂದರು.
ಕಮಲಕ್ಕೆ ಮನಸೋತ ಜನ ಬೆಳಗಾವಿ ಕ್ಷೇತ್ರದ ಮತದಾರರು ಸತತ ನಾಲ್ಕನೇ ಬಾರಿ ಕಮಲಕ್ಕೆ ಮನಸೋತಿದ್ದಾರೆ. ಮತದಾರರು ತಮ್ಮ ಪರವಾಗಿಲ್ಲ. ಬದಲಾವಣೆ ಬಯಸಿದ್ದಾರೆ ಎಂಬ ಮಾತುಗಳಿದ್ದರೂ ಅದರಿಂದ ವಿಚಲಿತರಾಗದ ಸುರೇಶ ಅಂಗಡಿ ಇದಕ್ಕೆ ವಿರುದ್ಧವಾಗಿ ತಮ್ಮ ಗೆಲುವಿನ ಅಂತರವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿಕೊಂಡು ಎಲ್ಲರೂ ಅಚ್ಚರಿ ಪಡುವಂತೆ ಗೆಲುವಿನ ಕೇಕೆ ಹಾಕಿದರು. ಬೆಳಗಾವಿ ಕ್ಷೇತ್ರದಲ್ಲಿ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡು ಬಂದ ಸುರೇಶ ಅಂಗಡಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ನ ಡಾ.ವಿ.ಎಸ್. ಸಾಧುನವರ ವಿರುದ್ಧ ಸುಮಾರು 3.80 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯಗಳಿಸಿದರು. ಉಳಿದಂತೆ ಕಣದಲ್ಲಿದ್ದ ಎಲ್ಲ 55 ಜನ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. 10 ಸುತ್ತುಗಳ ಎಣಿಕೆ ಮುಗಿದ ನಂತರ ಅಂಗಡಿ ಅವರ ಗೆಲುವು ಖಚಿತವಾಯಿತು. ಜಯದ ಅಂತರ 35 ರಿಂದ 80 ಸಾವಿರಕ್ಕೇರಿತು. ಮಧ್ಯಾಹ್ನ ಸುಮಾರು 2 ಗಂಟೆಗೆ ಎಣಿಕೆ ಕೇಂದ್ರದ ಕಡೆ ಬಂದ ಸುರೇಶ ಅಂಗಡಿ ಸತತ ನಾಲ್ಕನೇ ಗೆಲುವಿನೊಂದಿಗೆ ನಗುಮುಖದಿಂದ ಹೊರಬಂದರು. ಆಗಲೇ ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ ಎಲ್ಲೆ ಮೀರಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕನ್ನಡ ಸಾಹಿತ್ಯ ಓದುವ ಹವ್ಯಾಸ ಬೆಳೆಸಿಕೊಳ್ಳಿ: ಸವಿತಾ ಹಿರೇಮಠ
ಬೆಳಗಾವಿ-ಸೋಲಿನ ಭಯದಿಂದ ಕಾಂಗ್ರೆಸ್ ಹತಾಶ: ಜಗದೀಶ ಶೆಟ್ಟರ
D. K. Shivakumar ಕಾಂಗ್ರೆಸ್ನ ಭರವಸೆ, ಬಿಜೆಪಿಯ ಬುರುಡೆ ನಡುವೆ ಹೋರಾಟ
Politics: ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ; ಜಗದೀಶ್ ಶೆಟ್ಟರ್
Belagavi; ಪ್ರಧಾನಿ ನರೇಂದ್ರ ಮೋದಿ ಬಜರಂಗದಳ ಕಾರ್ಯಕರ್ತರಂತೆ ಮಾತಾಡ್ತಾರೆ: ಸಿದ್ದರಾಮಯ್ಯ