ಅಡುಗೆ ಮನೆಯ ಶುದ್ಧತೆ ಕಾಯ್ದುಕೊಳ್ಳಿ
Team Udayavani, Jun 8, 2019, 6:00 AM IST
ಅಡುಗೆ ಮನೆಗೆ ಸ್ವಚ್ಛವಾಗಿದ್ದರೇ ಇಡೀ ಮನೆಯ ಸ್ವತ್ಛವಾಗಿದೆಯೇ ಎಂದು ಅರ್ಥ. ಆದರೆ ಅಡುಗೆ ಮನೆಯ ಸ್ವಚ್ಚತೆ ಕಾಳಜಿ ಹೆಚ್ಚಿನವರು ನೀಡುವುದಿಲ್ಲ. ಪಾತ್ರೆ ತೊಳೆಯುವ ಸಿಂಕ್, ತ್ಯಾಜ್ಯ ಬಿಸಾಡುವ ಜಾಗವನ್ನು ಪ್ರತಿದಿನ ಸ್ವತ್ಛ ಮಾಡದಿದ್ದರೇ ಅಡುಗೆ ಮನೆಯ ಅಂದ ಕೆಡುತ್ತದೆ. ಸಿಂಕ್ನಲ್ಲಿ ಕೀಟಾಣು, ಕ್ರಿಮಿ ಇತ್ಯಾದಿಗಳಿಂದ ಆರೋಗ್ಯಕ್ಕೆ ಅನೇಕ ಅಪಾಯಗಳನ್ನು ಉಂಟು ಮಾಡುವುದರಿಂದ ಅದರ ಸ್ವತ್ಛತೆಯನ್ನು ನಿರ್ಲಕ್ಷಿಸಬಾರದು.
ಪ್ರತಿದಿನ ಸಿಂಕ್ ಸ್ವಚ್ಛಗೊಳಿಸಿ
ಅಡುಗೆ ಮನೆಯ ಸಿಂಕ್ ಅನ್ನು ಪ್ರತಿದಿನ ಸ್ವಚ್ಛಗೊಳಿಸಿ. ಪಾತ್ರೆಗಳನ್ನು ತೊಳೆದ ಅನಂತರ ಬಹಳಷ್ಟು ಮಂದಿ ನೀರನ್ನು ಸಿಂಕ್ ಮೇಲೆ ಸುರಿಯುತ್ತಾರೆ. ಆದರೆ ಈ ರೀತಿ ಸುರಿಯುವ ನೀರು ಸಿಂಕ್ ಅನ್ನು ಸ್ವತ್ಛಗೊಳಿಸುವುದಿಲ್ಲ ಮತ್ತು ಕೀಟಾಣು ಮುಕ್ತವಾಗಿಸುವುದಿಲ್ಲ. ಪ್ರತಿದಿನ ಸ್ವತ್ಛಗೊಳಿಸುವುದು ಕಷ್ಟವಾದರೆ, ವಾರಕ್ಕೆ ಎರಡು ಮೂರು ಬಾರಿ ಸಿಂಕ್ಗಳನ್ನು ಸ್ವತ್ಛಗೊಳಿಸುವುದು ಮುಖ್ಯ.
ಕಸ ವಿಲೇವಾರಿ
ಅಡುಗೆ ಮನೆಯಲ್ಲಿನ ಕಸವನ್ನು ಪ್ರತಿದಿನ ವಿಲೇವಾರಿ ಮಾಡಲೇಬೇಕು. ಇಲ್ಲದಿದ್ದರೆ ಅದರಲ್ಲಿನ ತ್ಯಾಜ್ಯ ಕೊಳೆತು ಕೀಟ ಉತ್ಪತ್ತಿಯಾಗುವುದು. ಜತೆಗೆ ಹುಳಗಳೂ ಕಸದ ತೊಟ್ಟಿಯಲ್ಲಿ ಸೇರುವ ಅಪಾಯ ಇದೆ. ವಿಶೇಷವಾಗಿ ಹಸಿ ತ್ಯಾಜ್ಯಗಳು ಬೇಗನೇ ಕೊಳೆಯುವುದರಿಂದ ಕೀಟಾಣು ಉತ್ಪತ್ತಿಯಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಪ್ರತಿದಿನ ಕಸ ವಿಲೇವಾರಿ ಮಾಡಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್
Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’